Monday, March 30, 2026
Monday, March 30, 2026

ಕಾಪು: ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಕಾಪು: ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

Date:

ಕಾಪು, ಮಾ.30: ಕಾಪು ವಿಧಾನಸಭಾ ಕ್ಷೇತ್ರದ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಯ ಅಭಿವೃದ್ಧಿಗೆ 55 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು.

ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ 4ನೇ ವಾರ್ಡಿನ ಬ್ರಹ್ಮಬೈದರ್ಕಳ ಗರೋಡಿ ಹತ್ತಿರದ ನಾರಾಯಣ ಪೂಜಾರಿ ಮನೆಯಿಂದ ವಾರಿಜಾ ಶೆಟ್ಟಿ ಮನೆ ರಸ್ತೆ ಕಾಂಕ್ರೀಟೀಕರಣ – 10 ಲಕ್ಷ

1ನೇ ವಾರ್ಡಿನ ಗೋಪಾಲ ಸಾಲ್ಯಾನ್ ಮನೆಯಿಂದ ವೆಂಕಟೇಶ್ ನಾವಡರ ಗದ್ದೆ ತನಕ ರಸ್ತೆ ಕಾಂಕ್ರೀಟೀಕರಣ – 10 ಲಕ್ಷ 6ನೇ ವಾರ್ಡಿನ ಶೈಲಾ ರವರ ಮನೆಯಿಂದ ಮುಖ್ಯ ರಸ್ತೆ ತನಕ ರಸ್ತೆ ಕಾಂಕ್ರೀಟೀಕರಣ – 10 ಲಕ್ಷ 3ನೇ ವಾರ್ಡಿನ ಗರಡಿ ಮನೆ ನಾರಾಯಣ ಶೆಟ್ಟಿ ಮನೆಯಿಂದ ಕುಟ್ಟಿ ಪೂಜಾರಿ ಮನೆ ತನಕ ಕಾಂಕ್ರೀಟೀಕರಣ – 10 ಲಕ್ಷ 8ನೇ ವಾರ್ಡಿನ ಉಚ್ಚಿಲ ಮೊಗವೀರ ಮಹಾಸಭೆಯ ಸಭಾಂಗಣ ಹಿಂಭಾಗ ಅಂಗನವಾಡಿ ಕಟ್ಟಡ ನಿರ್ಮಾಣ – 5 ಲಕ್ಷ ಎರ್ಮಾಳ್ ಕೊಳದ ಬದಿಯಿಂದ ನೆಬಿಸ ಅಕ್ಕ ನವರ ಮನೆ ವರೆಗೆ ರಸ್ತೆ ಕಾಂಕ್ರೀಟೀಕರಣ – 5 ಲಕ್ಷ 5 ಲಕ್ಷ ರೂಪಾಯಿ ಅನುದಾನದಲ್ಲಿ ಕುದ್ರೊಟ್ಟು ಬ್ರಹ್ಮ ಬೈದರ್ಕಳ ದೈವಸ್ಥಾನದಿಂದ ರಾಜೀವ ಶೆಟ್ಟಿ ಮನೆ ತನಕ ಅಭಿವೃದ್ಧಿಗೊಂಡ ರಸ್ತೆಯ ಉದ್ಘಾಟನೆ ನೆರವೇರಿಸಲಾಯಿತು.

ಬಡಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್, ಮಾಜಿ ಉಪಾಧ್ಯಕ್ಷರಾದ ದೀಪಕ್, ಮಾಜಿ ಸದಸ್ಯರಾದ ಚಂದ್ರಶೇಖರ್, ಇಂದಿರಾ ಶೆಟ್ಟಿ, ಹರಿಪ್ರಸಾದ್, ಶಕುಂತಳಾ, ಮೋಹಿನಿ, ಕಲಾವತಿ, ಸ್ಥಳೀಯರಾದ ವಸಂತ ದೇವಾಡಿಗ, ಕಮಲಾಕ್ಷ ಶಣೈ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುವೈತ್‌: ವಿದ್ಯುತ್ ಘಟದ ಮೇಲೆ ಇರಾನ್ ದಾಳಿ; ಭಾರತೀಯ ಕಾರ್ಮಿಕ ಬಲಿ

ಕುವೈತ್ ನಗರ, ಮಾ.30: ಕುವೈತ್ ಸಚಿವಾಲಯದ ಅಧಿಕೃತ ವಕ್ತಾರರು ನೀಡಿದ ಹೇಳಿಕೆಯ...

ಮಾಹೆಯ ಬಿಎಸ್‌ಎಲ್‌-3 ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಮಾನ್ಯತೆ

ಮಣಿಪಾಲ, ಮಾ.30: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ...

ಯಕ್ಷಗಾನ ಕಲಾರಂಗ (ರಿ.) ಉಡುಪಿ: ‘ನಂದಾದೀಪ’ ಮನೆಯ ಉದ್ಘಾಟನೆ

ಉಡುಪಿ, ಮಾ.30: ಯಕ್ಷಗಾನ ಕಲಾರಂಗ (ರಿ.) ಉಡುಪಿ ಇದರ ವತಿಯಿಂದ ವಿದ್ಯಾಪೋಷಕ್...
error: Content is protected !!