ಉಡುಪಿ, ಫೆ.25: ಕರ್ನಾಟಕ ಹೈ ಕೋರ್ಟ್ ವಕೀಲ, ಜಯ ಕರ್ನಾಟಕ ಸಂಘಟನೆಯ ಕಾನೂನು ಘಟಕದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ. ಇವರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದರು.
ಪರ್ಯಾಯ ಶ್ರೀ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಆಶೀರ್ವದಿಸಿ ಶುಭ ಹಾರೈಸಿದರು. ಪರ್ಯಾಯ ಸ್ವಾಗತ ಸಮಿತಿಯ ಮಧುಕರ್ ಮುದ್ರಾಡಿ, ವಕೀಲರಾದ ಮಂಜುನಾಥ್, ಕೆಂಪೇಗೌಡ, ಅವಿನಾಶ್, ರಾಜಶೇಖರ್, ರಘು, ಸುಮನ್, ಉದ್ಯಮಿಗಳಾದ ಅಶೋಕ್ ಪೈ, ಅಜಿತ್. ಪೈ ಮುಂತಾದವರು ಉಪಸ್ಥಿತರಿದ್ದರು.




By
ForthFocus™