Tuesday, March 31, 2026
Tuesday, March 31, 2026

ಸಾಮಾಜಿಕ ಕೇಡುಗಳಿಗೆ ಸಾಹಿತ್ಯ ಮದ್ದಾಗಬೇಕು

ಸಾಮಾಜಿಕ ಕೇಡುಗಳಿಗೆ ಸಾಹಿತ್ಯ ಮದ್ದಾಗಬೇಕು

Date:

ಹಿರಿಯಡಕ, ಫೆ.20: ಸಾಮಾಜಿಕ ಕೇಡುಗಳಿಗೆ ಸಾಹಿತ್ಯ ಮದ್ದಾಗಬೇಕೆಂದೇ ನಂಬಿದ ಜಿ.ಎಸ್‌.ಎಸ್‌. ಈ ನೆಲದ ಸಾಮಾನ್ಯರ ಬದುಕಿನ ಸಂಕಟಗಳ ಕಾರಣಗಳನ್ನು ತನ್ನ ಕಾವ್ಯ ಮತ್ತು ಬದುಕಿನಲ್ಲಿ ಎದುರಾದ ಜೀವಪರ ಮನಸ್ಸು ಎಂದು ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಪ್ರವೀಣ ಕುಮಾರ್‌ ಎಸ್‌ ಹೇಳಿದರು. ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉಡುಪಿ ಜಿಲ್ಲಾ ಚಕೋರ ವೇದಿಕೆ ಆಯೋಜಿಸಿದ, ಜಿ.ಎಸ್‌.ಎಸ್‌. ಸಾಹಿತ್ಯದ ವೈಚಾರಿಕ ನೆಲೆಗಳು ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಸೌಮ್ಯಲತಾ ಪಿ., ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆ ಮತ್ತು ಜಿ.ಎಸ್‌.ಎಸ್‌. ಸಾಹಿತ್ಯದ ಆಶಯವನ್ನು ಪರಿಚಯಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಜಯಪ್ರಕಾಶ್‌ ಶೆಟ್ಟಿ ಹೆಚ್‌ ಅವರು ಜಿ.ಎಸ್‌.ಎಸ್‌. ಅವರ ಸಾಹಿತ್ಯ ಮತ್ತು ಸಂಘಟನಾತ್ಮಕ ಸಾಮರ್ಥ್ಯ ಕನ್ನಡಕ್ಕೆ ನೀಡಿದ ದೇಣಿಗೆ ಅನನ್ಯವಾದುದು ಎಂದರು. ದ್ವಿತೀಯ ಎಂ.ಎ. ಸುರಕ್ಷಾ ಸ್ವಾಗತಿಸಿ, ಸ್ಪರ್ಶಾ ವಂದಿಸಿದ ಕಾರ್ಯಕ್ರಮವನ್ನು ಪ್ರಥಮ ಎಂ.ಎ. ಶ್ರಾವ್ಯ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಿ.ಬಿ. ಹೆಗ್ಡೆ ಕಾಲೇಜು: ‘ಪ್ಲಾಸ್ಟಿಕಾಸುರ’ ಯಕ್ಷಗಾನ

ಕುಂದಾಪುರ, ಮಾ.30: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಕುವೈತ್‌: ವಿದ್ಯುತ್ ಘಟದ ಮೇಲೆ ಇರಾನ್ ದಾಳಿ; ಭಾರತೀಯ ಕಾರ್ಮಿಕ ಬಲಿ

ಕುವೈತ್ ನಗರ, ಮಾ.30: ಕುವೈತ್ ಸಚಿವಾಲಯದ ಅಧಿಕೃತ ವಕ್ತಾರರು ನೀಡಿದ ಹೇಳಿಕೆಯ...

ಮಾಹೆಯ ಬಿಎಸ್‌ಎಲ್‌-3 ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಮಾನ್ಯತೆ

ಮಣಿಪಾಲ, ಮಾ.30: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ...
error: Content is protected !!