ಕೋಟೇಶ್ವರ, ಜ.12: ಕುಂದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಮನೋಹರ್ ಉಪ್ಪುಂದ ಅವರು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಸಿ. ಕುಸುಮಾಕರ ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಮರ್ಜರ್ ಅಂಡ್ ಆಕ್ವಿಷನ್ ಆಫ್ ಕಮರ್ಷಿಯಲ್ ಬ್ಯಾಂಕ್ಸ್: ಅ ಸ್ಟಡಿ ವಿತ್ ಸ್ಪೆಷಲ್ ರೆಫರೆನ್ಸ್ ಟು ದ ಮರ್ಜರ್ ಆಫ್ ಎಸ್.ಬಿ.ಐ ಅಂಡ್ ಇಟ್ಸ್ ಅಸೋಸಿಯೇಟ್ಸ್” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಇವರು ಮನೋಹರ್ ಉಪ್ಪುಂದ ಅವರು ಉಪ್ಪುಂದದ ಮತ್ಸ್ಯೋದ್ಯಮಿ ಈಶ್ವರ ಬಬ್ರಿ ಹಾಗೂ ಧರ್ಮಾವತಿ ದಂಪತಿಗಳ ಪುತ್ರ.
ಮನೋಹರ್ ಉಪ್ಪುಂದಗೆ ಪಿ.ಹೆಚ್.ಡಿ ಪದವಿ
ಮನೋಹರ್ ಉಪ್ಪುಂದಗೆ ಪಿ.ಹೆಚ್.ಡಿ ಪದವಿ
Date:




By
ForthFocus™