ಉಡುಪಿ, ಅ.27: ಕರ್ನಾಟಕ ಸರ್ಕಾರದ ಮಾನಸಧಾರಾ ಯೋಜನೆಯಡಿಯಲ್ಲಿ ಎ. ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮರು ಆರಂಭಗೊಂಡಿರುವ ‘ಬಂಧು ಹಗಲು ಆರೈಕೆ ಕೇಂದ್ರ’ದ ಕುರಿತು ಮಾಹಿತಿ
ಉದ್ದೇಶವೇನು? ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳುತ್ತಿರುವ ನಮ್ಮ ಬಂಧುಗಳಿಗೆ ಗೌರವಯುತ, ಉತ್ಪಾದಕ ಮತ್ತು ಸಂತೋಷದಾಯಕ ಜೀವನವನ್ನು ಕಟ್ಟಿಕೊಡಲು ಸಹಾಯ ಮಾಡುವುದು.

ಇಲ್ಲಿ ಏನೇನು ಸಿಗುತ್ತದೆ? ವೃತ್ತಿಪರ ತರಬೇತಿ: ನಮ್ಮ ಕೇಂದ್ರದಲ್ಲಿ ಕಂಪ್ಯೂಟರ್ ತರಬೇತಿ, ಹೊಲಿಗೆ ತರಬೇತಿ, ಮತ್ತು ಕರಕುಶಲ ವಸ್ತುಗಳ ತಯಾರಿಕೆಯ ತರಬೇತಿ ಲಭ್ಯವಿದೆ. ಇದು ಅವರಿಗೆ ಸ್ವಾವಲಂಬಿಗಳಾಗಲು ದಾರಿ ಮಾಡಿಕೊಡುತ್ತದೆ. ದೈಹಿಕ ವ್ಯಾಯಾಮ, ಯೋಗ ಮತ್ತು ಕೌಶಲ್ಯ ತರಬೇತಿ: ಮಾನಸಿಕ ಶಾಂತಿಗಾಗಿ ದೈಹಿಕ ವ್ಯಾಯಾಮ ಯೋಗ ತರಬೇತಿ ಹಾಗೂ ಉತ್ತಮ ಸಾಮಾಜಿಕ ಸಂವಹನಕ್ಕಾಗಿ ಸಂವಹನ ಕೌಶಲ್ಯಗಳ ತರಬೇತಿಗಳನ್ನು ನೀಡಲಾಗುತ್ತದೆ.

ಪೌಷ್ಟಿಕ ಆಹಾರ: ಪ್ರತಿದಿನ ಮಧ್ಯಾಹ್ನದ ಊಟ ಉಡುಪಿ ಶ್ರೀ ಕೃಷ್ಣ ಮಠದ ಸಹಯೋಗದೊಂದಿಗೆ, ಮತ್ತು ಬೆಳಿಗ್ಗೆ ಸಂಜೆ ಕಾಫಿ-ತಿಂಡಿ ವ್ಯವಸ್ಥೆ ಇದೆ.
ಪ್ರೋತ್ಸಾಹಕ ಭತ್ಯೆ: ಪ್ರತಿದಿನ ರೂ. 40/- ಗಳ ಪ್ರಯಾಣ ಭತ್ಯೆಯನ್ನು ನೀಡಲಾಗುತ್ತದೆ. (ಮೊದಲ ಮೂರು ತಿಂಗಳು ತರಬೇತಿಯವರಿಗೆ ಮಾತ್ರ)
ಸ್ಥಳ & ಸಮಯ: ಸ್ಥಳ: ಡಾ. ಎ. ವಿ. ಬಾಳಿಗ ಮೆಮೋರಿಯಲ್ ಹಾಸ್ಪಿಟಲ್ ಹತ್ತಿರ, ದೊಡ್ಡಣಗುಡ್ಡೆ, ಉಡುಪಿ. ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 4:00 ಗಂಟೆಯವರೆಗೆ. ಯಾರು ಸೇರಬಹುದು? ಯಾವುದೇ ಮನೋವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ಈ ತರಬೇತಿಗಳ ಪ್ರಯೋಜನ ಪಡೆಯಬಹುದು. (ಮನೋವೈದ್ಯರ ಶಿಫಾರಸು ಪತ್ರ ತರುವುದು ಉತ್ತಮ). ಬನ್ನಿ, ನಿಮ್ಮ ಪ್ರೀತಿಪಾತ್ರರಿಗೆ ಹೊಸ ಭರವಸೆ ಮತ್ತು ಉತ್ತಮ ನಾಳೆಗಾಗಿ ನಮ್ಮೊಂದಿಗೆ ಕೈಜೋಡಿಸಿ. ಅವರಿಗೆ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಲು ಸಹಾಯ ಮಾಡೋಣ. ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ: 9538886291




By
ForthFocus™