Home ಸುದ್ಧಿಗಳು ಪ್ರಾದೇಶಿಕ ಶಾಶ್ವತ ಆಧ್ಯಾತ್ಮಿಕ ವಿದ್ಯೆಯಿಂದ ಭಗವಂತನ ಅನುಗ್ರಹ ಸಿದ್ಧಿ: ಪುತ್ತಿಗೆ ಶ್ರೀ

ಶಾಶ್ವತ ಆಧ್ಯಾತ್ಮಿಕ ವಿದ್ಯೆಯಿಂದ ಭಗವಂತನ ಅನುಗ್ರಹ ಸಿದ್ಧಿ: ಪುತ್ತಿಗೆ ಶ್ರೀ

114
0

ಉಡುಪಿ, ಏ.23: ಪುತ್ತಿಗೆ ಶ್ರೀಗಳ ಆದೇಶದಂತೆ ಪ್ರತಿ ವರ್ಷ ನಡೆಯುವ ವಸಂತ ಧಾರ್ಮಿಕ ಶಿಬಿರವನ್ನು ಪುತ್ತಿಗೆ ಮಠದಲ್ಲಿ ಪರ್ಯಾಯ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಿಬಿರದಲ್ಲಿ ಕಲಿತ ಆಧ್ಯಾತ್ಮಿಕ ವಿದ್ಯೆ ನಮ್ಮ ಜೀವನ ಪರ್ಯಂತ ಶಾಶ್ವತವಾಗಿ ನಮ್ಮನ್ನು ರಕ್ಷಿಸುವುದು. ಅಲ್ಲದೆ ಭಗವಂತನ ಅನುಗ್ರಹ ಮೂಲಕ ಸುಖ ಶಾಂತಿ ನೆಮ್ಮದಿಯ ಬದುಕು ನಮ್ಮದಾಗಿರುವುದು ಎಂದು ಅನುಗ್ರಹ ಸಂದೇಶ ನೀಡಿ ನೂರಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಶ್ರೀ ಪಿ. ಎಸ್. ಆಚಾರ್ಯರಿಂದ ಪ್ರಾಯೋಜಿತ ಕೋಟಿ ಗೀತಾ ಲೇಖನ ದೀಕ್ಷೆ ನೀಡಿದರು.

ಕಿರಿಯ ಶ್ರೀಗಳಾದ ಶ್ರೀ ಸುಶ್ರೀಂದ್ರ ತೀರ್ಥರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಸಾಧಕರಾಗಿ ಎಂದು ಹರಸಿದರು. ಮುಖ್ಯ ಅಥಿತಿಗಳಾಗಿ ಮುಂಬಯಿಯ ಸಂಜೀವಿನಿ ಆಸ್ಪತ್ರೆಯ ಮುಖ್ಯಸ್ಥರಾದ ಸುರೇಶ್ ರಾವ್ ಹಾಗೂ ಕೋಟಿ ಗೀತಾ ಲೇಖನದ ಪ್ರಚಾರಕರಾದ ಪಿ. ಎಸ್ ಆಚಾರ್ಯರು ಉಪಸ್ಥಿತರಿದ್ದರು. ಶಿಬಿರದ ಸಂಪನ್ಮೂಲ ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಮಹಿತೋಷ್ ಆಚಾರ್ಯ ಸ್ವಾಗತಿಸಿ, ರವೀಂದ್ರ ಆಚಾರ್ಯ ವಂದಿಸಿದರು. ಕಾರ್ಯಕ್ರಮ ಸಂಚಾಲಕರಾದ ರಮೇಶ್ ಭಟ್ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.