Friday, October 18, 2024
Friday, October 18, 2024

ಪ್ರಸಂಗಕರ್ತ ಸುರೇಶ್‌ರಾವ್ ಬಾರ್ಕೂರು ಅವರಿಗೆ ಕಾಳಿಂಗ ನಾವಡ ಪ್ರಶಸ್ತಿ

ಪ್ರಸಂಗಕರ್ತ ಸುರೇಶ್‌ರಾವ್ ಬಾರ್ಕೂರು ಅವರಿಗೆ ಕಾಳಿಂಗ ನಾವಡ ಪ್ರಶಸ್ತಿ

Date:

ಕೋಟ, ಡಿ.27: ಯಕ್ಷಗಾನಕ್ಕೆ ಒಂದು ತಾರಾ ಮೆರುಗು ತಂದುಕೊಟ್ಟು, ಯಕ್ಷಗಾನದ ಪರಿಚಯವೂ ಇಲ್ಲದ ಪ್ರದೇಶಗಳಲ್ಲಿಯೂ ಯಕ್ಷಗಾನದ ಮಹತ್ವವನ್ನು ತಮ್ಮ ಗಾಯನದ ಮೂಲಕ ಸಾರಿದ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿದ ಅಲ್ಲದೆ ಯಕ್ಷರಂಗಕ್ಕೆ ಬರುವ ಯುವ ಕಲಾವಿದರನ್ನು ಹುರಿದುಂಬಿಸಿ ಪ್ರೋತ್ಸಾಹಿಸಿ ಅವರಿಗೊಂದು ಕಲಾ ನೆಲೆಯನ್ನು ಒದಗಿಸಿಕೊಟ್ಟವರು ಕಾಳಿಂಗ ನಾವಡರು. ಪ್ರಸಿದ್ಧ ಭಾಗವತರಾದರೂ ಸಾಮಾನ್ಯರಲ್ಲಿ ಸಾಮಾನ್ಯವಾಗಿ ಬೆಳೆದು ಬಂದಂತ ಕಲಾವಿದ ಕಾಳಿಂಗ ನಾವಡರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಹಿರಿಯ ಭಾಗವತರು ಹಾಗೂ ಪ್ರಸಂಗಕರ್ತ ಸುರೇಶ್‌ರಾವ್ ಬಾರ್ಕೂರು ಇವರಿಗೆ ಕೊಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ವೇದ ಬ್ರಹ್ಮಶ್ರೀ ಅನಂತ ಪದ್ಮನಾಭ ಐತಾಳ ಹೇಳಿದರು. ಕೋಟದ ಹಂದಟ್ಟು ಉರಾಳಕೇರಿಯ ವೇದಿಕೆಯಲ್ಲಿ ನಡೆದ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯ ಪ್ರತಿಷ್ಟಿತ 2023ರ ಸಾಲಿನ ಕಾಳಿಂಗ ನಾವಡ ಪ್ರಶಸ್ತಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡ, ಹಿರಿಯ ಯಕ್ಷಗಾನ ಕಲಾವಿದರಾದ ಗೋವಿಂದ ಉರಾಳ, ಗಣಪಯ್ಯ ಉರಾಳ, ಕಲಾಕದಂಬದ ಅಧ್ಯಕ್ಷ ಅಂಬರೀಶ್ ಭಟ್ ಹಾಗೂ ಕಲಾಕದಂಬದ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳರವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ತೆಕ್ಕಟ್ಟೆ ಯಶಸ್ವಿ ಕಲಾಕೇಂದ್ರದ ಕಲಾವಿದರಿಂದ ಗಾನ ವೈಭವ ಹಾಗೂ ಅತಿಥಿ ಕಲಾವಿದರುಗಳಿಂದ ‘ಶರಸೇತು ಬಂಧನ’ ತಾಳಮದ್ದಳೆ ಪ್ರದರ್ಶಿಸಲ್ಪಟ್ಟಿತು. ಮುರಳೀಧರ ನಾವಡ, ವಿಶ್ವನಾಥ ಉರಾಳ, ಧನಂಜಯ ನಾವಡ, ಅದಿತಿ ಉರಾಳ, ಸುದರ್ಶನ ಉರಾಳ ಹಾಗೂ ಮಂಜು ಉರಾಳ ಸಹಕರಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!