Home ಸುದ್ಧಿಗಳು ಪ್ರಾದೇಶಿಕ ಸಹಾಯಧನ: ಅರ್ಜಿ ಆಹ್ವಾನ

ಸಹಾಯಧನ: ಅರ್ಜಿ ಆಹ್ವಾನ

458
0

ಉಡುಪಿ, ಡಿ.18: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಇತರೆ ಉಪಚಾರಗಳು ಕಾರ್ಯಕ್ರಮದಡಿ ವಿವಿಧ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ವೈಯಕ್ತಿಕ ನೀರು ಸಂಗ್ರಹಣಾ ವಿನ್ಯಾಸ, ಅಂತರ್ಜಲ ಸುರಕ್ಷಿತ ಪ್ರದೇಶಗಳಲ್ಲಿ ಅಲ್ಪ, ಮಧ್ಯಮ ಆಳದ ಕೊಳವೆಬಾವಿ, ಸಣ್ಣ ಬಾವಿಗಳ ಮರುಸ್ಥಾಪನೆ, ನವೀಕರಣ ಅಥವಾ ಸ್ಥಗಿತಗೊಂಡಿರುವ ಕೊಳವೆಬಾವಿಗಳ ಮರುಪೂರಣ ವ್ಯವಸ್ಥೆ ಹಾಗೂ ನೀರೆತ್ತುವ ಸಾಧನಗಳ ಕಾಮಗಾರಿಗಳಿಗೆ ಸಹಾಯಧನ ಹಾಗೂ ತುಂತುರು ನೀರಾವರಿ ಘಟಕಗಳ ವಿತರಣೆಗೆ ಶೇ. 90 ರ ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.