Tuesday, October 22, 2024
Tuesday, October 22, 2024

ಸೃಜನಶೀಲತೆಗೆ ಎನ್.ಎಸ್.ಎಸ್ ವೇದಿಕೆ: ಸವಿತಾ ಎರ್ಮಾಳ್

ಸೃಜನಶೀಲತೆಗೆ ಎನ್.ಎಸ್.ಎಸ್ ವೇದಿಕೆ: ಸವಿತಾ ಎರ್ಮಾಳ್

Date:

ಕಾರ್ಕಳ, ಸೆ. 26: ವಿದ್ಯಾರ್ಥಿದೆಸೆಯಲ್ಲಿ ಪಠ್ಯೇತರ ಸೃಜನಶೀಲ ಕಲಿಕೆಗೆ, ಹಲವು ಅವಕಾಶಗಳ ವೇದಿಕೆ ಎನ್.ಎಸ್.ಎಸ್. ಎಂದು ಮಂಗಳೂರು ಎನ್.ಎಸ್.ಎಸ್. ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಹೇಳಿದರು. ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ‘ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ’ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಪಠ್ಯ ಚಟುವಟಿಕೆಗಳ ಪ್ರಪಂಚದ ಜೊತೆಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣವನ್ನು ಹೇಗೆ ಕಲಿಸುತ್ತದೆ ಎಂದು ತಮ್ಮ ಕಾರ್ಯಕ್ರಮಾಧಿಕಾರಿ, ವಿಭಾಗಾಧಿಕಾರಿ ಅನುಭವಗಳ ನೆಲೆಯಲ್ಲಿ ಹಲವು ನಿದರ್ಶನಗಳ ಮೂಲಕ ಹೇಳಿದರು. ಎನ್.ಎಸ್.ಎಸ್. ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಹಲವು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಹಾಗೂ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಓ. ದಿನೇಶ್ ಎಂ ಕೊಡವೂರು ಅಧ್ಯಕ್ಷತೆ ವಹಿಸಿದ್ದರು.

ಉಪ ಪ್ರಾಂಶುಪಾಲರಾದ ಸಾಹಿತ್ಯ, ಎನ್.ಎಸ್.ಎಸ್. ವಿದ್ಯಾರ್ಥಿ ನಾಯಕಿ ಸಮಿಯ ಹೆಗ್ಡೆ ವೇದಿಕೆಯಲ್ಲಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ರವಿ ಜಿ ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕಿ ಸುಮಿತ್ರಾ ವಂದಿಸಿ, ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಭಾರತೀಯ ವಿಕಾಸ ಟ್ರಸ್ಟ್: ಉಚಿತ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ

ಮಣಿಪಾಲ, ಅ.22: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಈ ಕೆಳಗಿನ ತರಬೇತಿ...

ಸೌತ್‌ ಝೋನ್ ಜೂನಿಯರ್‌ ಅಥ್ಲೆಟಿಕ್ಸ್‌: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗೆ ಚಿನ್ನ

ಮಣಿಪಾಲ, ಅ.22: ಆಂದ್ರಪ್ರದೇಶದ ಗುಂಟೂರಿನಲ್ಲಿ ನಡೆದ 35ನೇ ಸೌತ್‌ ಝೋನ್(ದಕ್ಷಿಣ ಭಾರತ...

ಒಂದು ವರ್ಷದಲ್ಲಿ 103 ಎಕರೆ ಅರಣ್ಯ ಒತ್ತುವರಿ ತೆರವು

ಬೆಂಗಳೂರು, ಅ.22: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ ಸುಮಾರು ರೂ.3,000...

ಕಾಫಿ ಬೆಳಗಾರರ ಸಮಸ್ಯೆ ಪರಿಹರಿಸಲು ಸಭೆ

ಚಿಕ್ಕಮಗಳೂರು, ಅ.22: ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾಫಿ ಬೆಳಗಾರರ ಮತ್ತು ರಾಷ್ಟ್ರೀಕೃತ...
error: Content is protected !!