Monday, February 24, 2025
Monday, February 24, 2025

ಜಿಲ್ಲಾ ಕಸಾಪ ವತಿಯಿಂದ ನಾದವೈಭವಮ್ ಉಡುಪಿ ವಾಸುದೇವ ಭಟ್ ರವರಿಗೆ ನುಡಿ ನಮನ

ಜಿಲ್ಲಾ ಕಸಾಪ ವತಿಯಿಂದ ನಾದವೈಭವಮ್ ಉಡುಪಿ ವಾಸುದೇವ ಭಟ್ ರವರಿಗೆ ನುಡಿ ನಮನ

Date:

ಉಡುಪಿ: ಮಗು ಮನಸ್ಸಿನ ನಗುಮೊಗದ ಖ್ಯಾತ ಸಂಗೀತ ನಿರ್ದೇಶಕ ಉಡುಪಿ ವಾಸುದೇವ ಭಟ್ ಇತ್ತೀಚಿಗೆ ನಿಧನರಾಗಿದ್ದಾರೆ. ಅವರ ನುಡಿ ನಮನ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಿಯಾಳಿ ಭರತಾಂಜಲಿಯಲ್ಲಿ ಆಯೋಜಿಸಿತ್ತು.

ದಿವಗಂತ ವಾಸುದೇವ ಭಟ್ ರವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದ ಸುಹಾಸಂ ಅಧ್ಯಕ್ಷ ಶಾಂತರಾಜ್ ಐತಾಳ್ ಮಾತನಾಡಿ, ಭಟ್ ರವರು ಎಲ್ಲಾ ಕ್ಷೇತ್ರದಲ್ಲಿ ಕೈಯಾಡಿಸಿದವರು.

ಸಂಗೀತ, ಸಾಹಿತ್ಯ, ನಾಟಕ, ಚಲನಚಿತ್ರ ಹೀಗೆ ಹತ್ತು ಹಲವು ಕ್ಷೆತ್ರದಲ್ಲಿ ಸಾಧನೆಗೈದವರು. ಅಸಾಂಖ್ಯಾತ ವಿದ್ಯಾರ್ಥಿಗಳಿಗೆ ಜ್ಞಾನರ್ಜನೆ ಮಾಡಿದವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ನುಡಿನಮನ ಅರ್ಥಪೂರ್ಣವಾಗಿತ್ತು ಎಂದರು.

ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ವಾಸುದೇವ ಭಟ್ಟರು ನಿರಂತರ ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು.

ಸಾಹಿತ್ಯ ಲೋಕ ಅವರನ್ನು ಕಳಕೊಂಡು ಬಡವಾಗಿದೆ ಎಂದರು. ಸುಪ್ರಸಿದ್ದ ಗಾಯಕ ಹಾಗೂ ವಾಸುದೇವ ಭಟ್ಟರ ಶಿಷ್ಯ ಚಂದ್ರಶೇಖರ ಕೆದ್ಲಾಯ ತನ್ನ ಗುರುಗಳನ್ನು ಸ್ಮರಿಸಿ, ಒಂದು ಗಾಯನವನ್ನು ಹಾಡುವುದರ ಮೂಲಕ ಸಂಗೀತ ನಮನ ಅರ್ಪಿಸಿದರು.

ನಿಕಟವರ್ತಿಯಾಗಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ನರಸಿಂಹಮೂರ್ತಿ ಅವರೊಂದಿಗೆ ಜೊತೆಯಾಗಿದ್ದ ಸಂದರ್ಭದ ರಸನಿಮಿಷಗಳನ್ನು ಹೇಳಿದರು. ಭರತಾಂಜಲಿ ನಿರ್ದೇಶಕಿ ರಶ್ಮಿ ವಿಜೆಯೇಂದ್ರ ಉಪಸ್ಥಿತರಿದ್ದರು.

ಸಂದ್ಯಾ ಶೆಣೈ, ಶ್ರೀನಿವಾಸ ಉಪಾಧ್ಯ, ನಾರಾಯಣ ಮಡಿ, ಜ್ಯೋತಿ ದೇವಾಡಿಗ, ಮರವಂತೆ ಪ್ರಕಾಶ್ ಪಡಿಯಾರ್ ನುಡಿ ನಮನ ಸಲ್ಲಿಸಿದರು. ಜನಾರ್ದನ್ ಕೊಡವೂರ್ ಸ್ವಾಗತಿಸಿ, ರವಿರಾಜ್ ಹೆಚ್. ಪಿ ಪ್ರಸಾವನೆಗೈದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಧನ್ಯವಾದವಿತ್ತರು. ರಾಜೇಶ್ ಪಣಿಯಾಡಿ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!