Friday, September 20, 2024
Friday, September 20, 2024

ಫೆ.11-15 ರವರೆಗೆ ಉಡುಪಿ ಜಿಲ್ಲೆಯ ವಿವಿಧೆಡೆ ವಿದ್ಯುತ್ ವ್ಯತ್ಯಯ

ಫೆ.11-15 ರವರೆಗೆ ಉಡುಪಿ ಜಿಲ್ಲೆಯ ವಿವಿಧೆಡೆ ವಿದ್ಯುತ್ ವ್ಯತ್ಯಯ

Date:

ಉಡುಪಿ, ಫೆ. 9: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಫೆಬ್ರವರಿ 11 ರಿಂದ 14 ರ ವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. ಫೆ. 11 ರಂದು ಬೆಳಗ್ಗೆ 8 ರಿಂದ ಸಂಜೆ 6 ರ ವರೆಗೆ ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ 2*10 ಎಂ.ವಿ.ಎ, 110/11 ಕೆ.ವಿ ವಿದ್ಯುತ್ ಕೇಂದ್ರ ಮತ್ತು 110/11 ಕೆ.ವಿ ವಿದ್ಯುತ್ ಕೇಂದ್ರ ನಂದಿಕೂರಿನಿಂದ 110/11 ಕೆ.ವಿ ವಿದ್ಯುತ್ ಕೇಂದ್ರ ಬೆಳಪುವರೆಗೆ 110 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣದ ಕಾಮಗಾರಿಗೆ ಸಂಬಂಧಿಸಿದಂತೆ 110 ಕೆ.ವಿ ನಂದಿಕೂರು-ಐ.ಎಸ್.ಪಿ ಆರ್.ಎಲ್ ಏಕ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಎರಡನೇ ವಿದ್ಯುತ್ ಪ್ರಸರಣ ಮಾರ್ಗವನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ, 110/11ಕೆ.ವಿ ನಂದಿಕೂರು ವಿದ್ಯುತ್ ಸ್ಥಾವರದಿಂದ ಹೊರಡುವ 110ಕೆ.ವಿ ಇ.ಹೆಚ್.ಟಿ ಸುಝ್ಲಾನ್ ಮತ್ತು ಐ.ಎಸ್.ಪಿ.ಆರ್.ಎಲ್ ಮತ್ತು ಎಲ್ಲಾ 11ಕೆ.ವಿ ಮಾರ್ಗಗಳಾದ ಅಡ್ವೆ, ಸಾಂತೂರು, ಬಲ್ಕುಂಜೆ, ನಂದಿಕೂರು, ಎಲ್ಲೂರು, ಪಲಿಮಾರು, ಎರ್ಮಾಳು, ಬ್ರೈಟ್ ಫ್ಲೆಕ್ಸಿ, ಯಾಶ್ ಟೆಕ್ ಹಾಗೂ ಬೆಳಪು ಮಾರ್ಗಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಫೆ. 13 ಮತ್ತು 15 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 110 ಕೆ.ವಿ ಹೊಸಂಗಡಿ ಉಪಕೇಂದ್ರದಲ್ಲಿ 11 ಕೆ.ವಿ ಇ.ಆರ್ ತಯಾರಿಕೆಯ ಬ್ರೇಕರ್ ಮತ್ತು ಬ್ರೇಕರ್ ಪ್ಯಾನಲ್ಗಳ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ 110 /11 ಕೆ.ವಿ ಹೊಸಂಗಡಿ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳಿಗೆ 110 ಕೆ.ವಿ ಹಾಲಾಡಿ ಮತ್ತು 110 ಕೆ.ವಿ ಹುಲಿಕಲ್ ವಿದ್ಯುತ್ ಉಪಕೇಂದ್ರದಿಂದ ಪರ್ಯಾಯ ವಿದ್ಯುತ್ ವ್ಯವಸ್ಥೆ ಮಾಡಲಾಗಿದ್ದು, ಅಧಿಕ ಹೊರೆಯ ಸಂದರ್ಭಗಳಲ್ಲಿ 110 ಕೆ.ವಿ ಹೊಸಂಗಡಿ ವಿದ್ಯುತ್ ಉಪಕೇಂದ್ರದಿAದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳಲ್ಲಿ ನಿರಂತರವಾಗಿಲ್ಲದಂತೆ ವಿದ್ಯುತ್ ವ್ಯತ್ಯಯ ಉಂಟಾಗುವ ಸಂಭವವಿದ್ದು, ಸದರಿ ಫೀಡರುಗಳಿಗೆ ಸಿದ್ದಾಪುರ, ಉಳ್ಳೂರು-74, ಹಳ್ಳಿಹೊಳೆ, ಯಡಮೊಗ್ಗೆ, ಕಮಲಶಿಲೆ, ಹೊಸಂಗಡಿ ಮತ್ತು ಆಜ್ರಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು.

ಫೆ. 14 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 110/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಹಿರಿಯಡ್ಕದಲ್ಲಿ 110 ಕೆ.ವಿ ಬಸ್ಬಾರ್ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ವಾರ್ಷಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 110 ಕೆ.ವಿ ಮಧುವನ-ಕುಂದಾಪುರ-ನಾವುಂದ ಮಾರ್ಗದ ಮಾರ್ಗ ಮುಕ್ತತೆ ಇರುವುದರಿಂದ 110/11 ಕೆ.ವಿ ಉಪಕೇಂದ್ರಗಳಾದ ಮಧುವನ, ಕುಂದಾಪುರ ಮತ್ತು ನಾವುಂದ ಹಾಗೂ 33/11 ಕೆ.ವಿ ಉಪಕೇಂದ್ರಗಳಾದ ತಲ್ಲೂರು, ಬೈಂದೂರು, ಗಂಗೊಳ್ಳಿ ಮತ್ತು ಜಿ.ಐ.ಎಸ್ ಕೋಟ ಗಳಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳ ಜೊತೆಗೆ 33 ಕೆ.ವಿ ಸೌಕೂರು ಏತ ನೀರಾವರಿ ವಿದ್ಯುತ್ ಮಾರ್ಗ ಹಾಗೂ ಮೆ|| ಕೊಂಕಣ ರೈಲ್ವೆ ನಿಗಮ ನಿಯಮಿತದ 110ಕೆವಿ ಸೇನಾಪುರ ಟಿಎಸ್‌ಎಸ್ ಕುಂದಾಪುರ ಪೇಟೆ, ಹಂಗ್ಳೂರು, ಬೀಜಾಡಿ, ಗೋಪಾಡಿ, ಜಪ್ತಿ ವಾಟರ್ಸಪ್ಲ್ಯೆ ಕೋಣಿ, ಕಂದಾವರ, ಬಳ್ಕೂರು, ಹಳ್ನಾಡು, ಅಂಪಾರು, ಕಾವ್ರಾಡಿ, ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಅಸೋಡು, ಬಸ್ರೂರು, ಕೋಡಿ, ಅನಗಳ್ಳಿ, ಕುಂಭಾಶಿ, ತೆಕ್ಕಟ್ಟೆ, ವಕ್ವಾಡಿ, ಕೋಟೇಶ್ವರ, ಮೊಳಹಳ್ಳಿ, ಕೊರ್ಗಿ, ಯಡಾಡಿ-ಮತ್ಯಾಡಿ, ವಂಡ್ಸೆ, ಗುಲ್ವಾಡಿ, ಬಾಂಡ್ಯ, ಗಂಗೊಳ್ಳಿ, ಶಿರೂರು, ಉಪ್ಪುಂದ, ಬಿಜೂರು, ಕೊಲ್ಲೂರು, ತಗ್ಗರ್ಸೆ, ಕರ್ಕುಂಜೆ, ಕೆರಾಡಿ, ಆಜ್ರಿ, ತಲ್ಲೂರು, ಬೈಂದೂರು, ಗೋಳಿಹೊಳೆ, ಯಳಜಿತ್, ಗಂಗನಾಡು, ನಾಡಾ, ಹೊಸಾಡು, ಗುಜ್ಜಾಡಿ, ಹೊಸೂರು, ಹಡವು, ದೇವಲ್ಕುಂದ, ಕಿರಿಮಂಜೇಶ್ವರ, ಅರೆಶಿರೂರು, ಎಲ್ಲೂರು, ಬಾಳ್ಕೊಡ್ಲು, ಹಾಲ್ಕಲ್, ದೋಣಿಗದ್ದೆ, ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜನ್ನಾಲ್ ಬೀಸಿನಪಾರೆ, ಸೆಳ್ಕೊಡು, ಕಾನ್ಕಿ, ಮೆಕ್ಕೆ, ಮುದೂರು, ಅರೆಹೊಳೆ, ನಾಗೂರು ನಾವುಂದ, ಮರವಂತೆ, ಹೇರೂರು, ಕೆರ್ಗಾಲ್, ತ್ರಾಸಿ, ಕೆಂಚನೂರು, ಯಡ್ತರೆ, ಪಡುವರಿ, ಹೆಮ್ಮಾಡಿ, ಕಟ್ಬೆಲ್ತೂರು, ಬೆಳ್ಳಾಲ, ಕೊಡ್ಲಾಡಿ, ಚಿತ್ತೂರು, ಹಟ್ಟಿಯಂಗಡಿ, ಬಡಾಕೆರೆ, ಕಾಲ್ತೋಡು, ಆಲೂರು, ಹರ್ಕೂರು, ಹಕ್ಲಾಡಿ, ನೂಜಾಡಿ, ಕುಂದಬಾರAದಾಡಿ, ಸೇನಾಪುರ, ಕಂಬದಕೋಣೆ, ಉಳ್ಳೂರು-11, ಹೆರಂಜಾಲು, ನಂದನವನ, ಜಡ್ಕಲ್, ಇಡೂರು-ಕುಂಜ್ಞಾಡಿ, ಮುದೂರು, ಮುಳ್ಳಿಕಟ್ಟೆ, ಕನ್ಯಾನ, ಉಪ್ಪಿನಕುದ್ರು, ಉಳ್ತೂರು, ಕೆದೂರು, ಬೇಳೂರು, ವಡ್ಡರ್ಸೆ, ಗಿಳಿಯಾರು, ಬನ್ನಾಡಿ, ಮಣೂರು, ಕೋಟತಟ್ಟು, ಸಾಲಿಗ್ರಾಮ ಟಿ.ಎಮ್.ಸಿ, ಕಾರ್ಕಡ, ಚಿತ್ರಪಾಡಿ, ಪಾರಂಪಳ್ಳಿ, ಪಾಂಡೇಶ್ವರ, ಮೂಡಹಡು, ಐರೋಡಿ, ಗುಂಡ್ಮಿ, ಕಾವಡಿ, ಯಡ್ತಾಡಿ, ಹೆಗ್ಗುಂಜೆ, ಶಿರಿಯಾರ, ಶಿರೂರು, ಬಿಲ್ಲಾಡಿ, ವಂಡಾರು, ಆವರ್ಸೆ, ಕಕ್ಕುಂಜೆ, ಅಚ್ಲಾಡಿ, ಹಳ್ಳಾಡಿ-ಹರ್ಕಾಡಿ, ಹೆಸ್ಕತ್ತೂರು, ಕೊರ್ಗಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!