Home ಸುದ್ಧಿಗಳು ಪ್ರಾದೇಶಿಕ ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ವರ್ಧಂತಿ

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ವರ್ಧಂತಿ

766
0

ಕಲ್ಯಾಣಪುರ: ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಪಂಚಾಮೃತ ಅಭಿಷೇಕ, ಸಾನಿಧ್ಯ ಹವನ, ಶತಕಲಶಾಭಿಷೇಕ, ಮಹಾಪೂಜೆ ನಡೆಯಿತು.

ಶುದ್ಧ ದಶಮಿಯಂದು ಸಂಪ್ರೋಕ್ಷಣೆ, ದ್ವಾದಶ ಕಲಶಾಭಿಷೇಕ ನಡೆಯಿತು. ವೇ. ಮೂ. ಗಣಪತಿ ಭಟ್, ವೇ. ಮೂ. ಜಯದೇವ ಭಟ್, ದಯಾನಂದ ಭಟ್, ವರದರಾಯ ಭಟ್, ಮಹೇಶ್ ಭಟ್, ಲಕ್ಷ್ಮಣ ಭಟ್, ರಾಮಚಂದ್ರ ಭಟ್, ಮಾಧವೇಂದ್ರ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ದೇವಳದ ಆಡಳಿತ ಮೊಕ್ತೇಸರ ಕೆ.ಅನಂತಪದ್ಮನಾಭ ಕಿಣಿ, ಕೆ. ಅರವಿಂದ ಬಾಳಿಗ, ಕೆ. ರಾಜಾರಾಮ ನಾಯಕ್, ಕೆ. ಸುದೇಶ್ ಭಟ್, ಸೇವಾದಾರ ಅಮ್ಮುಂಜೆ ಕೃಷ್ಣಾನಂದ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.