Home ಸುದ್ಧಿಗಳು ಪ್ರಾದೇಶಿಕ ಮಾ. 12- ಕಸಾಪ ಉಡುಪಿ ತಾಲೂಕು ಘಟಕದ ಪದಗ್ರಹಣ, ಉದ್ಘಾಟನಾ ಸಮಾರಂಭ

ಮಾ. 12- ಕಸಾಪ ಉಡುಪಿ ತಾಲೂಕು ಘಟಕದ ಪದಗ್ರಹಣ, ಉದ್ಘಾಟನಾ ಸಮಾರಂಭ

616
0

ಉಡುಪಿ: ಕಸಾಪ ಉಡುಪಿ ತಾಲೂಕು ಘಟಕದ ಪದಗ್ರಹಣ ಹಾಗು ಉದ್ಘಾಟನಾ ಸಮಾರಂಭವು ಮಾರ್ಚ್12, ಶನಿವಾರ ಸಂಜೆ 6.30ಕ್ಕೆ ಉಡುಪಿ ಗುಂಡಿಬೈಲ್ ನಲ್ಲಿರುವ ಬ್ರಾಹ್ಮಿ ಸಭಾಭವನದಲ್ಲಿ ಜರಗಲಿದೆ.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿಕೊಳ್ಳಲಿದ್ದಾರೆ.

ಉದ್ಘಾಟಕರಾಗಿ ಲೇಖಕ ಹಾಗೂ ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಮುಖ್ಯ ಅಭ್ಯಾಗತರಾಗಿ ಮಣಿಪಾಲ ಯುನಿವರ್ಸಲ್ ಪ್ರೆಸ್ ನ ಪ್ರಧಾನ ಸಂಪಾದಕರಾದ ಪ್ರೊ. ನೀತಾ ಇನಾಂದಾರ್ ಆಗಮಿಸಲಿದ್ದಾರೆ.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ ಕೋಟ ಹಾಗು ನಿಯೋಜಿತ ಘಟಕಾಧ್ಯಕ್ಷ ರವಿರಾಜ್ ಹೆಚ್. ಪಿ. ಉಪಸ್ಥಿತರಿರುವರು.

ಪ್ರಾರಂಭದಲ್ಲಿ ಕನ್ನಡ ಗೀತಗಾಯನ, ಹಾಗೂ ನೃತ್ಯ ಸಂಭ್ರಮವಿರಲಿದೆ. 6.45ಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ ಪ್ರಾರಂಭವಾಗಿ 8.00ಕ್ಕೆ ಮುಗಿಯಲಿದೆ, ಬಳಿಕ ಭೋಜನ ವ್ಯವಸ್ಥೆ ಇದೆ ಎಂದು ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಹಾಗೂ ರಂಜನಿ ವಸಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.