Wednesday, October 23, 2024
Wednesday, October 23, 2024

ಜ್ಞಾನಭಾರತ್ ಬಾಲಸಂಸ್ಕಾರ: ಶ್ರೀ ಕೃಷ್ಣ ಲೀಲೋತ್ಸವ

ಜ್ಞಾನಭಾರತ್ ಬಾಲಸಂಸ್ಕಾರ: ಶ್ರೀ ಕೃಷ್ಣ ಲೀಲೋತ್ಸವ

Date:

ಕಾರ್ಕಳ, ಸೆ.1: ಬದುಕಿಗೆ ಧೈರ್ಯ ತುಂಬುವ ಏಕೈಕ ಗ್ರಂಥ ಭಗವದ್ಗೀತೆ. ನಮ್ಮ ಪಾತ್ರದಲ್ಲಿ ಅರ್ಜುನನಿದ್ದರೆ, ಸಾರಥಿಯ ಪಾತ್ರದಲ್ಲಿ ಕೃಷ್ಣ ಮಾರ್ಗದರ್ಶಕನಾಗಿದ್ದಾನೆ. ಇಂದಿನ ಎಲ್ಲಾ ರೀತಿಯ ಒತ್ತಡ, ಘರ್ಷಣೆಗಳಿಗೆ ಭಗವದ್ಗೀತೆಯಲ್ಲಿ ಉತ್ತರ ಅಡಗಿದೆ ಎಂದು ಶ್ರೀ ಉತ್ತಮ ನರಸಿಂಹ ದಾಸ್ (ಉಮೇಶ್ ಕಾಮತ್) ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜ್ಞಾನ ಭಾರತ್ ವೃಂದ – ಬಾಲಸಂಸ್ಕಾರದ ವತಿಯಿಂದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಕುರಿತಂತೆ ಉಪನ್ಯಾಸ ನೀಡಿ ಮಾತನಾಡಿದರು.

ಎಲ್ಲಿ ಭಗವಂತನ ಗುಣಗಾನ ನಡೆಯುತ್ತದೋ ಅಲ್ಲಿ ಭಗವಂತ ಇರುತ್ತಾನೆ. ಶ್ರದ್ಧಾ ಭಕ್ತಿಯಿಂದ ಕೆಲಸದಲ್ಲಿ ತಲ್ಲೀನನಾದವನಿಗೆ ತನ್ನ ಕಾರ್ಯದಲ್ಲಿ ಯಶಸ್ಸು ಲಭಿಸುವಂತೆ ಮಾಡುತ್ತಾನೆ ಎಂದರು. ಬಾಲ ಸಂಸ್ಕಾರದ ಬಾಲಕ-ಬಾಲಕಿಯರು ಶ್ರೀ ಕಷ್ಣನ ಬಾಲಲೀಲೆಯನ್ನು ಸಾರುವ ಶ್ರೀಮದ್ ಭಾಗವತದಿಂದಾಯ್ದ ‘ಶ್ರೀ ಕೃಷ್ಣ ಲೀಲೋತ್ಸವ’ ರೂಪಕವನ್ನು ಪ್ರಸ್ತುತ ಪಡಿಸಿದರು. ಇದೇ ಸಂದರ್ಭ ಜ್ಞಾನಭಾರತ್ ವೃಂದದ ಗೌರವಾಧ್ಯಕ್ಷ, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ವೃಂದದ ಅಧ್ಯಕ್ಷರಾದ ದಿನೇಶ್ ಎಂ. ಕೊಡವೂರ್, ಉಷಾ ರಾವ್ ಯು., ಸಂಚಾಲಕ ಸುಮಿತ್, ರಾಜ್ ಕಿರಣ್, ರಶ್ಮೀ ಭಟ್, ಪ್ರಜ್ವಲಾ ಶೆಣೈ, ಪ್ರತಿಮಾ ಭೋರ್ಕರ್, ಅಕ್ಷತಾ ನಾಯಕ್, ಕಮಲಾಕ್ಷ ನಾಯಕ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೆ.ಎಂ.ಸಿ ಮಣಿಪಾಲ: ಅನ್ನನಾಳದ ರಂಧ್ರದ ತೊಂದರೆಗೆ ನವೀನ ಎಂಡೋಸ್ಕೋಪಿಕ್ ಚಿಕಿತ್ಸೆ; ಇದು ದಕ್ಷಿಣ ಭಾರತದಲ್ಲಿ ಮೊದಲನೆಯದು

ಮಣಿಪಾಲ, ಅ.22: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಅನ್ನನಾಳದ ರಂಧ್ರಕ್ಕೆ ಎಡೊಸ್ಕೋಪಿಕ್ ಚಿಕಿತ್ಸೆ...

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

ಉಡುಪಿ, ಅ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು...

ಜಿಲ್ಲೆಯನ್ನು ಕಾಲುಬಾಯಿ ರೋಗದಿಂದ ಮುಕ್ತಗೊಳಿಸಲು ಸಹಕಾರ ಅಗತ್ಯ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಅ.22: ಜಿಲ್ಲೆಯ ಎಲ್ಲಾ ಹೈನುಗಾರರು ತಮ್ಮ ಜಾನುವಾರುಗಳಿಗೆ ಪ್ರತಿಶತ ನೂರರಷ್ಟು...

ಅ. 26-27: ಬ್ರಹ್ಮಾವರದಲ್ಲಿ ಕೃಷಿ ಮೇಳ

ಉಡುಪಿ, ಅ.22: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ...
error: Content is protected !!