Friday, September 20, 2024
Friday, September 20, 2024

‘ಫೂಟ್‌ಪ್ರಿಂಟ್‌ ಆನ್‌ ದಿ ಸ್ಯಾಂಡ್ಸ್‌ ಆಫ್‌ ಟೈಮ್‌’ ಕೃತಿ ಬಿಡುಗಡೆ

‘ಫೂಟ್‌ಪ್ರಿಂಟ್‌ ಆನ್‌ ದಿ ಸ್ಯಾಂಡ್ಸ್‌ ಆಫ್‌ ಟೈಮ್‌’ ಕೃತಿ ಬಿಡುಗಡೆ

Date:

ಕುಂದಾಪುರ, ಆ.5: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌ ಪ್ರಕಟಿಸಿದ ಡಾ. ಉಮೇಶ್‌ ಭಟ್‌ ಅವರ ‘ಫೂಟ್‌ಪ್ರಿಂಟ್‌ ಆನ್‌ ದ ಸ್ಯಾಂಡ್ಸ್‌ ಆಫ್‌ ಟೈಮ್‌’ ಕೃತಿ ಕುಂದಾಪುರ ಸರಕಾರಿ ಜೂನಿಯರ್‌ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಲೋಕಾರ್ಪಣೆಗೊಂಡಿತು. ಕುಂದಪ್ರಭ ಮತ್ತು ಎಂಯುಪಿ ಜಂಟಿಯಾಗಿ ಕಾರ್ಯಕ್ರಮ ಸಂಯೋಜಿಸಿದ್ದವು. ಮಂಗಳೂರಿನ ಪ್ರಸಿದ್ಧ ದಂತವೆದ್ಯರಾದ ಡಾ. ಮುರಲಿ ಮೋಹನ್‌ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸುತ್ತ, ಡಾ, ಉಮೇಶ್‌ ಭಟ್‌ ಅವರು ತಮ್ಮ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಇದು ಓದುಗರ ಅನುಭವವನ್ನು ವಿಸ್ತರಿಸುವ ಅಪೂರ್ವ ಕೃತಿ ಎಂದರು. ಮಣಿಪಾಲ ಕೆಎಂಸಿಯ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜಗೋಪಾಲ್‌ ಶೆಣೈ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಕೃತಿಯು ಮಾನವೀಯತೆಯ ಅನುಭವಗಳು ಕಾಲಾತೀತವಾಗಿರುವುದರ ಸಂಕೇತವಾಗಿದೆ. ಜೀವನಯಾನದ ಅವಿಸ್ಮರಣೀಯ ಕ್ಷಣಗಳನ್ನು ಹೃದ್ಯಶೆಲಿಯಲ್ಲಿ ಬರೆದು ಕೃತಿರೂಪದಲ್ಲಿ ಪ್ರಕಟಿಸಿರುವ ಲೇಖಕರು ಅಭಿನಂದನಾರ್ಹರು ಎಂದರು.

ಮಲೇಶ್ಯಾದ ಮಲೇಕಾ ಮಣಿಪಾಲ್‌ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಮತ್ತು ಶಸ್ತ್ರಕ್ರಿಯಾತಜ್ಞರಾದ ಡಾ ಸಂತೋಷ್‌ ಪೈ, ಕುಂದಾಪುರದ ಪ್ರಸಿದ್ಧ ಉದ್ಯಮಿ ಜಲಜಾ ತೋಳಾರ್‌, ಕುಂದಾಪುರದ ವಿವೇಕ ಬಾಲಕಿಯರ ಪ್ರೌಢಶಾಲೆಯ ಅಧ್ಯಾಪಕಿ ಮಹಾಲಕ್ಷ್ಮೀ ಸೋಮಯಾಜಿ, ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು, ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ್ ಪುತ್ರನ್ ಪುಸ್ತಕ ಪರಿಚಯಿಸಿದರು. ಡಾ.ಉಮೇಶ್ ಭಟ್ ಅವರು ತಮ್ಮ ಸಾಹಿತ್ಯಿಕ ಪ್ರತಿಭೆಯೊಂದಿಗೆ ತಮ್ಮ ವೃತ್ತಿಪರ ಒಳನೋಟಗಳನ್ನು ಅಚ್ಚುಕಟ್ಟಾಗಿ ಬೆರೆಸಿ, ಮಾನವ ಅನುಭವಗಳು, ಭಾವನೆಗಳು ಮತ್ತು ನೆನಪುಗಳ ಆಳವನ್ನು ಪರಿಶೀಲಿಸುವ ಗಮನಾರ್ಹ ಕೃತಿಯನ್ನು ರಚಿಸಿದ್ದಾರೆ ಎಂದು ಅವರು ಹೇಳಿದರು.

ಫುಟ್‌ಪ್ರಿಂಟ್ ಆನ್ ದಿ ಸ್ಯಾಂಡ್ಸ್ ಆಫ್ ಟೈಮ್ ಮಣಿಪಾಲ ಯೂನಿವರ್ಸಲ್ ಪ್ರೆಸ್‌ನ 281 ನೇ ಪ್ರಕಟಣೆಯಾಗಿದೆ. ಪುಸ್ತಕವು ಆಳವಾದ ಒಳನೋಟಗಳನ್ನು ನೀಡುತ್ತದೆ ಮತ್ತು ಓದುಗರೊಂದಿಗೆ ಆಳವಾಗಿ ಪ್ರತಿಧ್ವನಿಸುತ್ತದೆ, ಜೀವನದ ಪ್ರಯಾಣದ ಪ್ರಾಮುಖ್ಯತೆ ಮತ್ತು ನಿರಂತರ ಮಾನವ ಚೈತನ್ಯವನ್ನು ಎತ್ತಿ ತೋರಿಸುತ್ತದೆ. ಮಣಿಪಾಲ ಯೂನಿವರ್ಸಲ್‌ ಪ್ರೆಸ್‌ನ ವ್ಯವಸ್ಥಾಪಕ ಸಂಪಾದಕ ಅರವಿಂದ ಎನ್‌. ಅವರು ತಮ್ಮ ಮಾತಿನಲ್ಲಿ ಮಾಹೆಯ ಪ್ರಕಾಶಕ ಸಂಸ್ಥೆವಾಗಿರುವ ಎಂಯುಪಿಯಲ್ಲಿ ಉತ್ತಮ ಕೃತಿಯನ್ನು ಪ್ರಕಟಣೆಗಾಗಿ ನೀಡಿದ ಲೇಖಕರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!