Friday, September 20, 2024
Friday, September 20, 2024

ಗೋಪಾಲಪುರ: ವಾಹನ ಸವಾರರ ಸುರಕ್ಷತೆಗಾಗಿ ಎಚ್ಚರಿಕೆ ಫಲಕ ಅಳವಡಿಕೆ

ಗೋಪಾಲಪುರ: ವಾಹನ ಸವಾರರ ಸುರಕ್ಷತೆಗಾಗಿ ಎಚ್ಚರಿಕೆ ಫಲಕ ಅಳವಡಿಕೆ

Date:

ಉಡುಪಿ, ಜು.25: ಉಡುಪಿ ನಗರಸಭಾ ವ್ಯಾಪ್ತಿಯ ಗೋಪಾಲಪುರ 4ನೇ ಮುಖ್ಯರಸ್ತೆ ನಾಗಬನ ರಸ್ತೆ ಕೂಡುವ ಸ್ಥಳದಲ್ಲಿ ಕಳೆದ ಹಲವು ವರ್ಷಗಳಿಂದ ವಾಹನಗಳು ಪರಸ್ಪರ ಢಿಕ್ಕಿಯಾಗುವ ಘಟನೆಗಳು ಸಂಭವಿಸುತ್ತಿವೆ. ಸಂತೆಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ 66 ಬಳಸದೇ ನೇರವಾಗಿ ಮಲ್ಪೆ ರಸ್ತೆಗೆ ಸಂಪರ್ಕಿಸುವ ಈ ಒಳರಸ್ತೆಯನ್ನು ದಿನನಿತ್ಯ ನೂರಾರು ಮಂದಿ ಬಳಸುತ್ತಾರೆ. ಈ ರಸ್ತೆಯು ಗೋಪಾಲಪುರ 4ನೇ ರಸ್ತೆಯನ್ನು ಸಂಪರ್ಕಿಸುವ ಸ್ಥಳದಲ್ಲಿ ಎಡ ಮತ್ತು ಬಲ ಭಾಗಗಳಿಂದ ವಾಹನಗಳು ಬರುವ ಬಗ್ಗೆ ಗೋಪಾಲಪುರ ಮುಖ್ಯರಸ್ತೆಯ ನಿವಾಸಿಗಳಿಗೆ ಮುನ್ಸೂಚನೆ ಇರುವುದಿಲ್ಲ. ಕೆಲವು ಮಂದಿ ವೇಗದಲ್ಲಿ ವಾಹನ ಚಲಾಯಿಸಿ ಅವಘಡಕ್ಕೆ ತುತ್ತಾಗುವುದು ಮಾತ್ರವಲ್ಲದೇ, ಇಲ್ಲಿ ವಾಹನ ಸವಾರರು ಹಾರ್ನ್ ಹಾಕದೇ ಬರುವುದು ಮತ್ತೊಂದು ತಲೆಬಿಸಿಯಾಗಿದೆ.

ಇದನ್ನು ಮನಗಂಡ ಸ್ಥಳೀಯರು, ವಾಹನ ಸವಾರರಿಗೆ ಮುನ್ಸೂಚನೆ ನೀಡುವ, ಸುಗಮ ಸಂಚಾರದ ಸಂದೇಶವಿರುವ ಎಚ್ಚರಿಕೆಯ ಫಲಕವನ್ನು ‘ಉಡುಪಿಗೆ ಬನ್ನಿ’ ಮತ್ತು ‘ಗೋಪಾಲಪುರ ಸಿಟಿಜನ್ಸ್ ಫೋರಮ್’ ಸಹಕಾರದಲ್ಲಿ ಗುರುವಾರ ಅಳವಡಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಸದಸ್ಯ ಚಂದ್ರಕಾಂತ್ ನಾಯ್ಕ್, ನಂದಕಿಶೋರ್, ಉದ್ಯಮಿ ಸುರೇಶ್ ಶೆಟ್ಟಿ, ಮಂಜುನಾಥ್ ನಾಯ್ಕ್, ದಿವಾಕರ್ ಶೆಟ್ಟಿ, ಗಣೇಶ್ ಪ್ರಸಾದ್ ಜಿ. ನಾಯಕ್, ರಾಜೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!