ಉಡುಪಿ, ಜೂ.27: (ಉಡುಪಿ ಬುಲೆಟಿನ್ ಕಾಳಜಿ) ಕರಾವಳಿ ಜಂಕ್ಷನ್ ನಿಂದ ಉಡುಪಿ ನಗರಕ್ಕೆ ಸಂಪರ್ಕ ನೀಡುವ ಮಾರ್ಗದಲ್ಲಿ ಬೋಳಾಸ್ ಔಟ್ ಲೆಟ್ ಸಮೀಪದ ರಸ್ತೆಯ ಫುಟ್ಪಾತ್ ನಲ್ಲಿ ಇಂಟರ್ಲಾಕ್ ಕುಸಿದು ಹೊಂಡ ನಿರ್ಮಾಣವಾಗಿದೆ. ಹಿರಿಯ ನಾಗರಿಕರು, ಮಕ್ಕಳು, ಮೂಕಪ್ರಾಣಿಗಳಿಗೆ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
![](https://i0.wp.com/nammaudupibulletin.com/wp-content/uploads/2024/06/WhatsApp-Image-2024-06-26-at-22.25.20.jpeg?resize=640%2C338&ssl=1)
ರಸ್ತೆಯ ಬದಿ ಮಳೆಯ ನೀರು ಹರಿದು ಹೋಗುವಾಗ ಈ ಹೊಂಡ ತುಂಬಿ ಇಲ್ಲಿ ಹೊಂಡ ಇದೆ ಎಂಬ ಅರಿವು ಯಾರಿಗೂ ಬರುವುದಿಲ್ಲ. ಸುಮಾರು ಒಂದು ವಾರದಿಂದ ಈ ಹೊಂಡ ಮುಕ್ತಿಗಾಗಿ ಕಾಯುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ವಿನಂತಿಸಿದ್ದಾರೆ.