Tuesday, October 1, 2024
Tuesday, October 1, 2024

ಬಿಲ್ಲಾಡಿ: ಸೌಲಭ್ಯ ಒದಗಿಸಿದವರಿಗೆ ಸನ್ಮಾನ

ಬಿಲ್ಲಾಡಿ: ಸೌಲಭ್ಯ ಒದಗಿಸಿದವರಿಗೆ ಸನ್ಮಾನ

Date:

ಬ್ರಹ್ಮಾವರ, ಜೂ.14: ಬಿಲ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಂಡಾರು ಚಕ್ಕಾರುಬೆಟ್ಟುವಿನ ನಿವಾಸಿ ದಿವ್ಯ ಕುಲಾಲ್ ಇವರಿಗೆ ಉಚಿತವಾಗಿ ನಿರ್ಮಿಸಿಕೊಟ್ಟ ನೂತನ ಟೈಲರಿಂಗ್ ಕೊಠಡಿ ಉದ್ಘಾಟನೆ ಸಂದರ್ಭದಲ್ಲಿ ಮಣಿಪಾಲ ಟೆಕ್ನಾಲಜೀಸ್‌ನ ಎಂ ರೋನಾಲ್ಡ್ ಡಿಸೋಜಾ ಹಾಗೂ ಉಚಿತವಾಗಿ ಸೋಲಾರ್ ಟೈಲರಿಂಗ್ ಯಂತ್ರ, ಸೋಲಾರ್ ಫ್ಯಾನ್ ಮತ್ತು ಸೋಲಾರ್ ಲೈಟನ್ನು ನೀಡಿರುವ ಉಡುಪಿ ಸೆಲ್ಕೋ ಸೋಲಾರ್‌ನ ಏರಿಯಾ ಮ್ಯಾನೇಜರ್ ಸುರೇಶ ನಾಯ್ಕ ರವರನ್ನು ವಂಡಾರು ಚಕ್ಕಾರುಬೆಟ್ಟುವಿನ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಬಿಲ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಬಾಯಿ, ನಿವೃತ್ತ ಬ್ಯಾಂಕ್ ಅಧಿಕಾರಿ ಮತ್ತು ಸಾಹಿತಿ ಮಂಜುನಾಥ ಕಾಮತ್ ಹಾಲಾಡಿ, ಹೆಗ್ಗುಂಜೆ ರಾಜೀವ ಶೆಟ್ಟಿ ಪದವಿಪೂರ್ವ ಕಾಲೇಜಿನ ಹೈಸ್ಕೂಲು ವಿಭಾಗದ ಮುಖ್ಯ ಶಿಕ್ಷಕಿ ರೋಶನ್ ಬೀಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿವ್ಯ ಕುಲಾಲ್ ಜ್ಯೋತಿ, ವಂಡಾರು ಗ್ರಾಮ ಪಂಚಾಯತ್ ಸದಸ್ಯ ವೆಂಕಪ್ಪ ಕುಲಾಲ್, ಉದ್ಯಮಿ ರಾಜೀವ ಕುಲಾಲ್ ಹೈಕಾಡಿ, ದಿನೇಶ್ ಕುಲಾಲ್, ಪ್ರಸನ್ನ ಕುಲಾಲ್, ಆಶಾ ರಾಜೀವ ಕುಲಾಲ್, ಕುಳ್ಳುಂಜೆ ಸಮೃದ್ಧಿ ಯುವಕ ಮಂಡಲ ಅಧ್ಯಕ್ಷ ನಾರಾಯಣ ಟಿ ಹಾಗೂ ಸದಸ್ಯರು, ಶಂಕರನಾರಾಯಣ ಜೇಸಿಐನ ಪೂರ್ವಾದ್ಯಕ್ಷ ಜೆ.ಎಫ್.ಎಂ ಗುರುದತ್ತ ಶೇಟ್ ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪೋಷಣ್ ಮಾಸಾಚರಣೆ: ಸಮಾರೋಪ ಸಮಾರಂಭ

ಉಡುಪಿ, ಸೆ.30: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

ವಿಶ್ವ ಹೃದಯ ದಿನಾಚರಣೆ

ಉಡುಪಿ, ಸೆ.30: ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕ, ಓಕುಡೆ ಡಯಾಗ್ನೋಸಿಸ್ ಮತ್ತು...

ವಿಶ್ವ ರೇಬೀಸ್ ದಿನಾಚರಣೆ: ಮಾಹಿತಿ ಕಾರ್ಯಕ್ರಮ

ಉಡುಪಿ, ಸೆ.30: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ಉಳಿಕೆಯಾಗಿರುವ ಗೋಧಿಯ ಬಹಿರಂಗ ಹರಾಜು

ಉಡುಪಿ, ಸೆ.30: ಕಾರ್ಕಳ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಗೋದಾಮಿನಲ್ಲಿ ಬಹುಕಾಲದಿಂದ ಉಳಿಕೆಯಾಗಿರುವ 151.25...
error: Content is protected !!