Thursday, September 19, 2024
Thursday, September 19, 2024

ಎಲ್ಲರನ್ನೂ ಒಂದುಗೂಡಿಸುವುದೇ ನೃತ್ಯಕಲೆಯ ಉದ್ದೇಶ: ಪ್ರೊ ಗುರ್ಬುಜ್ ಅಕ್ತಾಶ್

ಎಲ್ಲರನ್ನೂ ಒಂದುಗೂಡಿಸುವುದೇ ನೃತ್ಯಕಲೆಯ ಉದ್ದೇಶ: ಪ್ರೊ ಗುರ್ಬುಜ್ ಅಕ್ತಾಶ್

Date:

ಮಣಿಪಾಲ, ಜ.31: ಜಗತ್ತಿನ ಎಲ್ಲಾ ನೃತ್ಯ ಪ್ರಕಾರಗಳಲ್ಲಿ ಕೆಲವು ಸಾಮಾನ್ಯ ಅಂಶಗಳಿದ್ದು ಎಲ್ಲರನ್ನೂ ಕಲೆಯ ಬಲೆಯಲ್ಲಿ ಒಂದುಗೂಡಿಸುವುದೇ ನೃತ್ಯಕಲೆಯ ಉದ್ದೇಶವಾಗಿದೆ ಎಂದು ಟರ್ಕಿ ದೇಶದ ಎಗೆ ವಿಶ್ವವಿದ್ಯಾಲಯದ ಪ್ರೊ ಗುರ್ಬುಜ್ ಅಕ್ತಾಶ್ ಹೇಳಿದರು. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಾಹೆ, ಇದರ ಆಶ್ರಯದಲ್ಲಿ ಟರ್ಕಿ ದೇಶದ ಪಾರಂಪರಿಕ ನೃತ್ಯ ಪ್ರಕಾರಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸಾಮುದಾಯಿಕ ನೃತ್ಯವಂತೂ ಎಲ್ಲರ ಜೊತೆ ಕುಣಿದು ಸಂಭ್ರಮಿಸುತ್ತಾ ಎಲ್ಲರ ಸುಖ ದುಃಖಗಳಲ್ಲಿ ಭಾಗಿಯಾಗುವ ಹಂಬಲವನ್ನೇ ಹೊಂದಿದೆ. ಎಲ್ಲರೂ ಕುಳಿತು ನೋಡಿ ಸಂಭ್ರಮಿಸುವ ನೃತ್ಯಕ್ಕೆ ಈ ಉದ್ದೇಶವಿದೆ. ವಿವಿಧ ದೇಶ-ಪ್ರದೇಶಗಳ ನೃತ್ಯಪ್ರಕಾರಗಳಲ್ಲಿ ಅನೇಕ ಸಾಂಸ್ಕೃತಿಕ ಭಿನ್ನತೆಗಳಿದ್ದರೂ ಅನೇಕ ಸಾಮಾನ್ಯ ಅಂಶಗಳೂ ಇವೆ. ವೈಶಿಷ್ಟ್ಯತೆಯನ್ನು ಉಳಿಸಿಕೊಂಡೇ ಅದನ್ನು ಮೀರಿ ಮೂಡುವ ಏಕತೆಯೇ ನಮ್ಮೆಲ್ಲರ ಉದ್ದೇಶವಾಗಿದೆ ಎಂದು ಪ್ರೊ ಗುರ್ಬುಜ್ ಅಕ್ತಾಶ್ ಹೇಳಿದರು.

ಟರ್ಕಿ ದೇಶದ ಹಲವು ಪ್ರದೇಶಗಳ ವಿಶಿಷ್ಟ ನೃತ್ಯ ಪ್ರಕಾರಗಳನ್ನು ವಿಡಿಯೋ ವಿವರಣೆಗಳ ಮೂಲಕ ಪರಿಚಯಿಸಿದ ಅವರು ಅಲ್ಲಿಯ ಜಾನಪದ ಮತ್ತು ಪಾರಂಪರಿಕ ನೃತ್ಯಕಲೆಗಳನ್ನು ಗುರುತಿಸಿದರು. ಅಲ್ಲಿಯ ನೃತ್ಯಕಲೆಗಳ ಹೆಜ್ಜೆ ಕುಣಿತ, ಸಂಗೀತ, ಪೋಷಾಕು ಮತ್ತು ಕಲಾತ್ಮಕತೆಗಳನ್ನು ವಿವರಿಸಿದರು. ಭಾರತೀಯ ನೃತ್ಯಭಂಗಿಗಳನ್ನು ಹೋಲುವ ದೃಶ್ಯಗಳನ್ನು ತೋರಿಸಿ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿದರು. ಜಿಸಿಪಿಎಎಸ್ ನ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಇವರು ಪಾರಂಪರಿಕ ಮತ್ತು ಆಧುನಿಕ ಕಲೆಗಳ ನಡುವಿನ ಸಂವಾದದ ಅಗತ್ಯವನ್ನು ಒತ್ತಿ ಹೇಳಿದರು. ನೃತ್ಯ ವಿದುಷಿ ಡಾ.ಭ್ರಾಮರಿ ಶಿವಪ್ರಕಾಶ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರೊ.ಗುರ್ಬುಜ್ ಅಕ್ತಾಶ್ ನೃತ್ಯದ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗಿಯಾದರು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರನ್ನು ನೆನೆಯಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಮ್ಮು ಕಾಶ್ಮೀರ: ಮೊದಲ ಹಂತದ ಮತದಾನ ಮುಕ್ತಾಯ; 35 ವರ್ಷಗಳಲ್ಲೇ ಅತಿ ಹೆಚ್ಚು ಮತದಾನ

ನವದೆಹಲಿ, ಸೆ.18: ಜಮ್ಮು ಮತ್ತು ಕಾಶ್ಮೀರವು ಕಳೆದ 35 ವರ್ಷಗಳಲ್ಲಿ ಅತಿ...

ಅತಿ ಉದ್ದದ ಮಾನವ ಸರಪಳಿ ನಿರ್ಮಾಣ- ಉಡುಪಿ ಜಿಲ್ಲೆ ಪ್ರಥಮ

ಬೆಂಗಳೂರು, ಸೆ.18: ಮಾನವ ಸರಪಳಿ ಕಾರ್ಯಕ್ರಮದಲ್ಲಿ ರಾಜ್ಯದ 31 ಜಿಲ್ಲೆಗಳ ಪೈಕಿ...

ಗ್ರಾಮ ಪಂಚಾಯತ್ ಗಳಲ್ಲಿ ಸೌರ ಬೀದಿ ದೀಪಗಳ ಅಳವಡಿಕೆ

ಬೆಂಗಳೂರು, ಸೆ.18: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿನ ವಿದ್ಯುತ್‌ ಬಳಕೆ ಮೇಲೆ ನಿಗಾ...

ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ: ಸಾಮಾನ್ಯ ಸಭೆ

ಉಡುಪಿ, ಸೆ.18: ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ...
error: Content is protected !!