Friday, October 18, 2024
Friday, October 18, 2024

ಎಂಐಟಿ: ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ 2023

ಎಂಐಟಿ: ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ 2023

Date:

ಮಣಿಪಾಲ, ಡಿ.20: ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯ ಮತ್ತು ಎಂಐಟಿಯಲ್ಲಿರುವ ಸಾಂಸ್ಥಿಕ ನಾವೀನ್ಯ ಮಂಡಳಿ (ಇನ್‌ಸ್ಟಿಟ್ಯೂಶನ್ಸ್‌ ಇನ್ನೊವೇಶನ್‌ ಕೌನ್ಸಿಲ್‌ ಆಟ್‌ ಮಣಿಪಾಲ್‌ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿ) ಇವುಗಳ ಸಹಯೋಗದೊಂದಿಗೆ ದಿ ಸ್ಮಾರ್ಟ್‌ ಇಂಡಿಯ ಹ್ಯಾಕಥಾನ್‌ 2023 ನಡೆಯಿತು. ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನ ಉಪಕುಲಪತಿ ಲೆ. ಜ. ಡಾ.ಎಂ. ಡಿ. ವೆಂಕಟೇಶ್‌ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಎಪ್ಪತ್ತೈದು ವರ್ಷಗಳ ಹಿಂದೆ ಡಾ. ಟಿ. ಎಂ. ಎ. ಪೈಯವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಸಮಾಜದ ಮೇಲೆ ಗಾಢವಾದ ಪರಿಣಾಮ ಬೀರಿರುವುದನ್ನು ಉಲ್ಲೇಖಿಸಿದರು. ಈ ಶಿಕ್ಷಣ ಸಂಸ್ಥೆಗಳನ್ನು ಸಮಾಜದಲ್ಲಿರುವ ಸವಾಲುಗಳಾದ ಅನಕ್ಷರತೆ, ಬಡತನ, ಮತ್ತು ಆನಾರೋಗ್ಯಗಳನ್ನು ನಿವಾರಿಸುವ ಉದ್ದೇಶದಿಂದ ಕಟ್ಟಿ ಬೆಳೆಸಲಾಗಿದೆ.

ವಿಶ್ವಸಂಸ್ಥೆಯ 2017ರ ಸುಸ್ಥಿರ ಅಭಿವೃದ್ಧಿಯ ಗುರಿ (ಸಸ್ಟೆನೇಬಲ್‌ ಡೆವಲಪ್‌ಮೆಂಟ್‌ ಗೋಲ್ಸ್‌) ಯೊಂದಿಗೆ ಡಾ. ಟಿ. ಎಂ. ಪೈಯವರ ಕಾಣ್ಕೆ (ವಿಶನ್‌) ಯು ಹೊಂದಿಕೊಳ್ಳುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಣಿಪಾಲ ಸಂಸ್ಥೆಗಳ ಕಾರಣದಿಂದ ಉನ್ನತ ಗುಣಮಟ್ಟದ ಆಸ್ಪತ್ರೆ ಸೌಲಭ್ಯಗಳನ್ನು ಒದಗಿಸಲು, ಮಕ್ಕಳ ಮರಣ ಪ್ರಮಾಣಗಳನ್ನು ತಗ್ಗಿಸಲು, ಗರ್ಭಿಣಿಯರ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಲು ಮತ್ತು ಸಮಾಜವನ್ನು ಸಾಕ್ಷರಗೊಳಿಸಲು ಸಾಧ್ಯವಾಗಿದ್ದು ಇದು ಇಡೀ ದೇಶದಲ್ಲಿಯೇ ಗಮನಾರ್ಹ ವಿದ್ಯಮಾನವಾಗಿದೆ ಎಂದರು.

ಭಾರತದ ಪ್ರಧಾನ ಮಂತ್ರಿಗಳ ಆಶಯವನ್ನು ನೆನಪಿಸಿಕೊಂಡ ಡಾ. ವೆಂಕಟೇಶ್‌ ಅವರು, ಭಾರತದ ಯುವಶಕ್ತಿ ಇಡೀ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥವಾಗಿದೆ ಎಂದರು. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಂಐಟಿಯ ಬದ್ಧತೆಯನ್ನು ಒತ್ತಿ ಹೇಳುತ್ತ, ಎಂಐಟಿಯ ಸಾಮರ್ಥ್ಯವನ್ನು ಗುರುತಿಸಿದ ಶಿಕ್ಷಣ ಸಚಿವಾಲಯ, ಎಐಸಿಟಿಇ ಮತ್ತು ನಾವೀನ್ಯ ಮಂಡಳಿ (ಇನ್ನೋವೇಶನ್‌ ಕೌನ್ಸಿಲ್‌) ಗಳಿಗೆ ಕೃತಜ್ಞತೆ ಹೇಳಿದರು. ಹ್ಯಾಕಥಾನ್‌ 2023 ರಲ್ಲಿ ಭಾಗವಹಿಸಿರುವವರು, ಮಾನವತೆಯನ್ನು ಬಲಗೊಳಿಸಲು ಅಗತ್ಯವಿರುವ ಸಮರ್ಥ ಕೊಡುಗೆಯನ್ನು ನೀಡುವ ಮತ್ತು ದೀರ್ಘಕಾಲೀನ ಪ್ರಭಾವವನ್ನು ಬೀರುವ ಪರಿಹಾರಗಳನ್ನು ನೀಡುವಂತಾಗಲಿ ಎಂದರು. ಭಾರತ ಸರ್ಕಾರದಿಂದ ಆರ್ಥಿಕ ಬೆಂಬಲದಿಂದ ಕಾರ್ಯನಿರ್ವಹಿಸುವ ಮೆಡಿಕಲ್‌ ಡಿವೈಸ್‌ ಡೆವಲಪ್‌ಮೆಂಟ್‌ ಹಬ್‌ ಕೆಲವು ಸಮಸ್ಯೆಗಳಿಗೆ ಪರಿಹಾರ ಸಾಧ್ಯತೆಗಳನ್ನು ನೀಡಿರುವುದನ್ನುಅವರು ಉಲ್ಲೇಖಿಸಿದರು.

ಮಣಿಪಾಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ) ಯಲ್ಲಿ ದ ಸ್ಮಾರ್ಟ್‌ ಇಂಡಿಯ ಹ್ಯಾಕಥಾನ್‌ 2023 ನ್ನು ಹಮ್ಮಿಕೊಂಡಿರುವುದು ಗಮನಾರ್ಹವಾಗಿತ್ತು. ಈ ಸಮಾವೇಶವು ಆಯುಷ್‌ ವಿಭಾಗ, ಗುಜರಾತ್‌, ಕೇರಳ ಸರ್ಕಾರಗಳು ಸೂಚಿಸಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಗಮನಹರಿಸಿತು. ತಮಿಳುನಾಡು, ಗುಜರಾತ್‌ ರಾಜ್ಯಗಳು ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ಒಟ್ಟು 22 ತಂಡಗಳು ಐದು ದಿನಗಳ ಹ್ಯಾಕಥಾನ್‌ನ್ನು ಯಶಸ್ವಿಗೊಳಿಸಲು ಶ್ರಮಿಸಿದವು. ಎಂಐಟಿಯ ನಿರ್ದೇಶಕ ಡಾ. (ಸಿಡಿಆರ್) ಅನಿಲ್ ರಾಣಾ, ಡಾ. ರಿಸಿಲ್‌ ಜೋಸೆಫ್‌, ಎಐಸಿಟಿಇನ ಸಹಾಯಕ ನಿರ್ದೇಶಕರಾದ ಕಮಲ್‌ ಸಿಂಗ್‌, ಪೂನಮ್‌, ಎಂಐಟಿಯ ಸಹನಿರ್ದೇಶಕ ಡಾ. ಸೋಮಶೇಖರ್‌ ಭಟ್‌ ಮತ್ತಿತರ ಗಣ್ಯರು ಉದ್ಘಾಟನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!