Saturday, October 19, 2024
Saturday, October 19, 2024

ಶಂಕರಪುರದ ವಿಶ್ವಾಸದ ಮನೆಯಲ್ಲಿ ಸೌಹರ್ದಯುತ ದೀಪಾವಳಿ ಸಂಭ್ರಮ

ಶಂಕರಪುರದ ವಿಶ್ವಾಸದ ಮನೆಯಲ್ಲಿ ಸೌಹರ್ದಯುತ ದೀಪಾವಳಿ ಸಂಭ್ರಮ

Date:

ಉಡುಪಿ, ನ.10: ಉಡುಪಿ ಜಿಲ್ಲೆಯ ಶಂಕರಪುರದಲ್ಲಿರುವ ಮಾನಸಿಕ ಅಸ್ವಸ್ಥರ ಅನಾಥಶ್ರಮದ ವಿಶ್ವಾಸದ ಮನೆಯಲ್ಲಿ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆ ಇದರ ನೇತೃತ್ವದಲ್ಲಿ ಸೌಹರ್ದಯುತ ದೀಪಾವಳಿ ಸಂಭ್ರಮ ಆಚರಣೆಯು ವಿಶೇಷವಾಗಿ ನಡೆಯಿತು. ಭಾವನಾತ್ಮಕವಾಗಿ ನಡೆದ ಕಾರ್ಯಕ್ರಮದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಂಸ್ಥೆಯ ಪದಾಧಿಕಾರಿಗಳು ಅನಾಥಶ್ರಮದ ಜನರ ಜೊತೆ ಬೆರೆತು ಸೌಹರ್ದಯುತವಾಗಿ ದೀಪಾವಳಿ ಸಂಭ್ರಮ ಆಚರಿಸಿದರು.

ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ನೇತೃತ್ವದಲ್ಲಿ ಸೌಹರ್ದಯುತ ದೀಪಾವಳಿ ಸಂಭ್ರಮದ ಅಂಗವಾಗಿ ೨೦೦ ಮಂದಿಗೆ ಬಟ್ಟೆ, ೧೦೦ಕೆಜಿ ಅಕ್ಕಿ, ೫೦ ತೆಂಗಿನಕಾಯಿ, ೫೦ ಪ್ಯಾಕೆಟ್ ಬಿಸ್ಕಿಟ್, ಬೆಲ್ಲ, ಸಕ್ಕರೆ, ತರಕಾರಿ, ಸಿಹಿತಿಂಡಿ ಮತ್ತು ದಿನಬಳಕೆ ಸಾಮಾಗ್ರಿಗಳನ್ನು ನೀಡಿ ಮಾತಾಡಿದವರು ವಿಶ್ವಾಸದ ಮನೆ ಅನಾಥಶ್ರಮ ಹೆಸರಿನಂತೆ ಅನಾಥರ ಬಾಳಿಗೆ ನಿರ್ಗತಿಕರಿಗೆ ವಿಶ್ವಾಸದ ಆಶ್ರಯದ ಬೆಳಕನ್ನು ಬೆಳಗುತ್ತಿರುವ ವಿಶ್ವಾಸದ ಮನೆಯ ಮುಖ್ಯಸ್ಥರಾದ ರೇ|ಫಾ|ಸುನಿಲ್ ಡಿ’ಸೋಜಾರವರ ನೇತೃತ್ವದಲ್ಲಿ ನೂರಾರು ಮಂದಿ ಅಸಹಾಯಕರ ಸೇವೆ ಮಾಡುತ್ತಿರುವ ಈ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿಶ್ವಾಸದ ಮನೆಯಲ್ಲಿರುವ ಎಲ್ಲರಿಗೂ ದೀಪಾವಳಿ ಸಂಭ್ರಮಾಚರಣೆಯ ಶುಭಾಶಯಗಳನ್ನು ಸಲ್ಲಿಸಿದರು.

ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆಯ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷರಾದ ಸತೀಶ್ ಪೂಜಾರಿ ಅಬ್ಬನಡ್ಕ, ಬೋಳ ಉದಯ ಅಂಚನ್, ಉಪಾಧ್ಯಕ್ಷ ಬಾಲಕೃಷ್ಣ ಮಡಿವಾಳ, ಸದಸ್ಯರಾದ ಸುರೇಶ್ ಅಬ್ಬನಡ್ಕ, ಯೋಗೀಶ್ ಆಚಾರ್ಯ, ಅನ್ನಪೂರ್ಣ ಕಾಮತ್ ಹಾಗೂ ಶಂಕರಪುರದ ವಿಶ್ವಾಸದ ಮನೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ: ಮೈ ಮರೆತರೆ ಕಾದಿದೆ ಅಪಾಯ

ಉಡುಪಿ, ಅ.19: ಉಡುಪಿ ನಗರದ ಕಲ್ಸಂಕ ಮಣಿಪಾಲ ರಸ್ತೆಯ ಮಾಲ್ ಒಂದರ...

ಅಧ್ಯಯನ ಪ್ರವಾಸ

ಕುಂದಾಪುರ, ಅ.19: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ...

ಸ್ಯಾಮ್ ಸಂಗ್ ಸಾಲ್ವ್ ಫಾರ್ ಟುಮಾರೊ 2024 ಫಲಿತಾಂಶ ಪ್ರಕಟ

ಉಡುಪಿ, ಅ.19: ಸ್ಯಾಮ್ ಸಂಗ್ ಇಂಡಿಯಾ ಕಂಪನಿಯ ಪ್ರಮುಖ ರಾಷ್ಟ್ರೀಯ ಶಿಕ್ಷಣ...

ಮಕ್ಕಳಿಗೆ ಎಳವೆಯಲ್ಲಿಯೇ ವೇದಿಕೆ ಕಲ್ಪಿಸಿ: ಗೀತಾ ಆನಂದ್ ಕುಂದರ್

ಕೋಟ, ಅ.19: ಎಳವೆಯಲ್ಲಿಯೇ ಮಕ್ಕಳಿಗೆ ಸಮರ್ಪಕ ವೇದಿಕೆ ಕಲ್ಪಿಸಿಕೊಡಬೇಕು, ಮಕ್ಕಳ ಪ್ರಥಮ...
error: Content is protected !!