Friday, October 18, 2024
Friday, October 18, 2024

ಮಂಜೇಶ್ವರ ಗೋವಿಂದ ಪೈಗಳು ಶ್ರೇಷ್ಠ ಕವಿ: ಡಾ. ಪಾದೇಕಲ್ಲು ವಿಷ್ಣು ಭಟ್ಟ

ಮಂಜೇಶ್ವರ ಗೋವಿಂದ ಪೈಗಳು ಶ್ರೇಷ್ಠ ಕವಿ: ಡಾ. ಪಾದೇಕಲ್ಲು ವಿಷ್ಣು ಭಟ್ಟ

Date:

ಮೂಡುಬಿದಿರೆ, ಜು. 12: ಮಂಜೇಶ್ವರ ಗೋವಿಂದ ಪೈಗಳು ಅನ್ಯ ಭಾಷೆಗಳನ್ನು ಪೋಷಿಸುವುದರ ಜತೆಗೆ ಕನ್ನಡ ಭಾಷೆಯಲ್ಲಿ ಪ್ರಯೋಗಶೀಲತೆ ಮತ್ತು ಹೊಸತನದ ಸಾಹಿತ್ಯ ಕೃಷಿಯನ್ನು ಮಾಡಿದ ಶೇಷ್ಠ ಭಾರತೀಯ ಕವಿ ಎಂದು ಸಾಹಿತಿ ಡಾ. ಪಾದೇಕಲ್ಲು ವಿಷ್ಣು ಭಟ್ಟ ಹೇಳಿದರು. ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಸಂಘ ಮತ್ತು ಸಾಂಸ್ಕೃತಿಕ ತಂಡದ ವತಿಯಿಂದ ಆಯೋಜಿಸಿದ್ದ ‘ಕನ್ನಡಕ್ಕೆ ಗೋವಿಂದ ಪೈಗಳ ಕೊಡುಗೆ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಕವಿಗಳು ಯಾವಾಗಲೂ ಸಮಾಜವು ಸಹೃದಯ, ಸುಸಂಸ್ಕೃತವಾಗಿರಬೇಕೆಂದು ಬಯಸುತ್ತಾರೆ. ರಾಷ್ಟ್ರಕವಿ ಎಂ. ಗೋವಿಂದ ಪೈಯವರು ಕವಿತೆ, ಕಾವ್ಯ ರಚನೆ, ಭಾಷಾ ಸಂಶೋಧನೆ, ಸಾಹಿತ್ಯ ಸಂಶೋಧನಾ ವಿಷಯಗಳಲ್ಲಿ ಕೆಲಸ ಮಾಡಿದ್ದರು.

(Advertisement) We have both online and offline Stock Market Training

ಸಂಶೋಧನೆಯಿಂದ ಅನೇಕ ಕವಿಗಳ ಕಾಲ ನಿರ್ಣಯ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರ ಮರಣದ ನಂತರ ಅವರ ಹಲವು ಕವಿತೆ ಮತ್ತು ನಾಟಕಗಳು ಪ್ರಕಟಗೊಂಡಿವೆ. ಕನ್ನಡ ಏಕೀಕರಣದ ಸಮಯದಲ್ಲಿ ಮಂಜೇಶ್ವರ ಪ್ರದೇಶ ಕೇರಳಕ್ಕೆ ಸೇರ್ಪಡೆಗೊಂಡದ್ದು ಗೋವಿಂದ ಪೈ ಅವರ ಘಾಸಿಗೊಳಿಸಿತ್ತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಎ. ಐ. ಇ. ಟಿ ಅಕಾಡೆಮಿಕ್ ಡೀನ್ ಡಾ. ದಿವಾಕರ್ ಶೆಟ್ಟಿ ಮಾತನಾಡಿ ಪ್ರೀತಿ, ವಿಶ್ವಾಸ, ಸಹಬಾಳ್ವೆ, ಪರಿಸರದ ಕುರಿತ ಸಂವೇದನೆಯನ್ನು ನಾವು ಎಂ. ಗೋವಿಂದ ಪೈ ಅವರ ಕೃತಿಯಲ್ಲಿ ಕಾಣಬಹುದು. ಗೋವಿಂದ ಪೈ ಅವರ ಕಾವ್ಯ ರಚನೆಯಲ್ಲಿ ಇದ್ದ ಮಹತ್ತರ ವಿಷಯಗಳನ್ನು ನಾವು ಮುಂದುವರೆಸಬೇಕಾಗಿದೆ. ಅದೇ ರೀತಿ ಕನ್ನಡ ನಾಡು ನುಡಿ, ನೆಲ ಜಲ, ಭಾಷೆಯನ್ನು ರಕ್ಷಿಸಿ ಬೆಳೆಸಬೇಕು ಎಂದರು.

ಕನ್ನಡ ಸಂಘದ ವತಿಯಿಂದ ನಡೆದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಎ.ಐ.ಇ.ಟಿ. ಡೀನ್ ಡಾ. ದುರ್ಗಾಪ್ರಸಾದ್ ಬಾಳಿಗ, ಉಪನ್ಯಾಸಕ ಮತ್ತು ಕನ್ನಡ ಸಂಘ ಸಂಯೋಜಕ ಗಣೇಶ್ ಎಂ.ಆರ್., ಉಪನ್ಯಾಸಕ ಮತ್ತು ಕನ್ನಡ ಸಂಘ ಸಂಯೋಜಕ ಡಾ. ಗುರುಶಾಂತ್ ಬಿ ವಗ್ಗರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಗೌರಿಕ ನಿರೂಪಿಸಿ, ಪಲ್ಲವಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!