Monday, September 23, 2024
Monday, September 23, 2024

ತಾಯಂದಿರ ಸಂಸ್ಕಾರದಿಂದಲೇ ಬಲಿಷ್ಠ ಭಾರತ: ವಿಜಯ್ ಕೊಡವೂರು

ತಾಯಂದಿರ ಸಂಸ್ಕಾರದಿಂದಲೇ ಬಲಿಷ್ಠ ಭಾರತ: ವಿಜಯ್ ಕೊಡವೂರು

Date:

ಮಲ್ಪೆ, ಮಾ. 10: ಕೊಡವೂರೂ ವಾರ್ಡ್ ಮಹಿಳಾ ಸಮಿತಿ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯಿತು. ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಸೇವೆ ಸಲ್ಲಿಸುವ ಮಹಿಳೆಯರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯ ನಡೆಯಿತು.

ಕೊಡವೂರು ವಾರ್ಡ್ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಮಾತನಾಡಿ, ತಾಯಂದಿರ ಸಂಸ್ಕಾರದಿಂದ ಮನೆ ನಿರ್ಮಾಣವಾಗವ ಸಾಧ್ಯತೆ ಇದೆ. ತಾಯಿಯಾದವರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಧಾರ್ಮಿಕ ಸಂಗತಿಗಳನ್ನು ವಿಚಾರಗಳನ್ನು ತಿಳಿಸುವಂತದ್ದು ರಾಮಾಯಣ ಮಹಾಭಾರತದ ಪುಟ್ಟ ಪುಟ್ಟ ಕತೆಗಳನ್ನು ತಿಳಿಸಿ ದಿನನಿತ್ಯ ಭಜನೆ ಮಾಡುವುದರ ಮೂಲಕ ದೇವರಂತಹ ಮಕ್ಕಳನ್ನು ನಿರ್ಮಾಣ ಮಾಡಲು ಸಾಧ್ಯತೆ ಇದೆ. ರಾಮನ ಭಜನೆ ಹೇಳುತ್ತಾ ರಾಮನಾಗಿ ಗುಣ ಪರಿವರ್ತನೆಯಾಗಬೇಕು, ರಾಮನಂತೆ ಬದುಕಬೇಕು. ಸಮಾಜಕ್ಕೆ ಉಪಕಾರಿಯಾಗಬೇಕು, ಇಂತಹ ಸಂಸ್ಕಾರ ತಾಯಿಯಿಂದ ಬರಲು ಸಾಧ್ಯವಿದೆ ಎಂದರು.

ವಾತ್ಸಲ್ಯ ತಂಡದ ನೀತಾ ಪ್ರಭು, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷೆ ಪ್ರೀತಿ ಎಸ್, ಕೊಡವೂರು ಮಹಿಳಾ ಸಮಿತಿ ಪ್ರಮುಖರಾದ ಪ್ರೇಮಾ ಶೇಖರ್, ಚಂದ್ರಾವತಿ, ಕೊಡವೂರು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಉದ್ಯಮಿ ಚಂದ್ರಕಾಂತ್ ದೇವಾಡಿಗ ಉಪಸ್ಥಿತರಿದ್ದರು. ಮಿತೇಷ್ ಕುಮಾರ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಸರಾ ಪ್ರದರ್ಶನಕ್ಕೆ ಕಲಾಕೃತಿ ಆಹ್ವಾನ

ಬೆಂಗಳೂರು, ಸೆ.21: ನಾಡಹಬ್ಬ ಮೈಸೂರು ದಸರಾ ಮಹೋತ್ಸವ - 2024ರಲ್ಲಿ ಲಲಿತಕಲೆ...

ಮ್ಯಾಕ್ಸಿಕ್ಯಾಬ್ ನ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಕಡ್ಡಾಯ ನಿಯಮ ಸಡಿಲಿಕೆಗೆ ಮನವಿ

ಬೆಂಗಳೂರು, ಸೆ.22: ಉಡುಪಿ ಜಿಲ್ಲಾ ಟ್ಯಾಕ್ಸಿ ಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್...

ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ: ಭಾಸ್ಕರ್ ಸ್ವಾಮಿ

ಕೋಟ, ಸೆ.22: ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಪಂಚವರ್ಣದ...

ಕಸಾಪ ಉಡುಪಿ ತಾಲೂಕು ಘಟಕದಿಂದ ಪುಸ್ತಕಗಳ ಕೊಡುಗೆ

ಉಡುಪಿ, ಸೆ.22: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು...
error: Content is protected !!