Friday, September 20, 2024
Friday, September 20, 2024

ಭಗವತ್‌ ಪ್ರೇರಣೆಯಿಂದ ಉಮಿಕಲ್ ಬೆಟ್ಟ ಪ್ರೇರಣಾ ಶಿಖರವಾಗಲಿ: ಡಾ. ಸುಧಾಕರ್‌ ಶೆಟ್ಟಿ

ಭಗವತ್‌ ಪ್ರೇರಣೆಯಿಂದ ಉಮಿಕಲ್ ಬೆಟ್ಟ ಪ್ರೇರಣಾ ಶಿಖರವಾಗಲಿ: ಡಾ. ಸುಧಾಕರ್‌ ಶೆಟ್ಟಿ

Date:

ಕಾರ್ಕಳ, ಜ. 28: ಗೊಮ್ಮಟ ಬೆಟ್ಟ, ಚತುರ್ಮುಖ ಬಸದಿ, ಪಡುತಿರುಪತಿ, ಮಾರಿಗುಡಿ, ಅನಂತಶಯನ, ಹಿರಯಂಗಡಿ, ಆನೆಕೆರೆ, ವರಂಗಾ, ಅತ್ತೂರು, ಕೋಟಿಚೆನ್ನಯ್ಯ ಥೀಮ್‌ ಪಾರ್ಕ್‌ ಇರುವ ಕಾರ್ಕಳದ ಹಿರಿಮೆಗೆ ಮತ್ತೊಂದು ಸೇರ್ಪಡೆಯಾಗುತ್ತಿರುವ ತುಳುನಾಡಿನ ಸೃಷ್ಟಿಕರ್ತನೆಂದು ನಂಬಿರುವ ಶ್ರೀ ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನೊಳಗೊಂಡ ಥೀಮ್‌ ಪಾರ್ಕ್‌ ಬೈಲೂರು–ಎರ್ಲಪಾಡಿಯ ಉಮಿಕಲ್‌ ಬೆಟ್ಟದಲ್ಲಿ ಸ್ಥಾಪನೆಗೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.

ಅಂದು ಮಣಿಪಾಲದಲ್ಲಿ ಎಂಡ್‌ ಪಾಯಿಂಟ್‌ ಎಂದು ಕರೆಸಿಕೊಳ್ಳುತ್ತಿದ್ದ ಪರಿಸರ ಡಾ.ವಿ.ಎಸ್‌.ಆಚಾರ್ಯರಿಂದ ಇಂದು ಸುಂದರ ‘ರಜತಾದ್ರಿ’ ಆದಂತೆ, ಬೈಲೂರು–ಎರ್ಲಪಾಡಿಯ ಉಮಿಕಲ್‌ ಬೆಟ್ಟವಿಂದು ಭಗವಂತನ ಪ್ರೇರಣೆಯೆಂಬಂತೆ ಸಚಿವ ವಿ. ಸುನೀಲ್‌ ಕುಮಾರ್ ಅವರಿಂದ ಪರಶುರಾಮ ಥೀಮ್‌ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ. ಈ ಉಮಿಕಲ್‌ ಬೆಟ್ಟವಿನ್ನು ‘ಪ್ರೇರಣಾ ಶಿಖರ’ವಾಗಿ ನಾಡಿನ ಯಾತ್ರಾರ್ಥಿಗಳಿಗೆ ಚಿರಪರಿಚಿತವಾಗಲಿ ಎಂದು ಶುಭ ಹಾರೈಸಿದರು.

ಗಣಿತನಗರದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ಲೋಕಾರ್ಪಣೆಯ ಪ್ರಯುಕ್ತ ನಡೆದ ಸಂಸ್ಥೆಯ ಉದ್ಯೋಗಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ, 3 ದಿನಗಳು ತಮ್ಮನ್ನು ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಜೊತೆಗೆ ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ನ ವತಿಯಿಂದ 242 ಉದ್ಯೋಗಿಗಳಿಗೆ ಥೀಮ್‌ ಪಾರ್ಕ್‌ ಲೋಕಾರ್ಪಣೆಯ ಪ್ರಯುಕ್ತ ಭಕ್ಷೀಸು ವಿತರಿಸಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!