Saturday, September 21, 2024
Saturday, September 21, 2024

ಮಣಿಪಾಲ- 2ನೇ ಅಂತಾರಾಷ್ಟ್ರೀಯ ಗ್ಲೋಬಲ್ ಕ್ಯಾನ್ಸರ್ ಸಮ್ಮೇಳನ

ಮಣಿಪಾಲ- 2ನೇ ಅಂತಾರಾಷ್ಟ್ರೀಯ ಗ್ಲೋಬಲ್ ಕ್ಯಾನ್ಸರ್ ಸಮ್ಮೇಳನ

Date:

ಮಣಿಪಾಲ: ಜನವರಿ 7 ಮತ್ತು 8 ರಂದು ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ವ್ಯೂನಲ್ಲಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮಣಿಪಾಲ, ಜಾಗತಿಕ ಕ್ಯಾನ್ಸರ್ ಒಕ್ಕೂಟ ಮತ್ತು ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳು ಜಂಟಿಯಾಗಿ ಎರಡನೇ ಅಂತರರಾಷ್ಟ್ರೀಯ ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಸಮ್ಮೇಳನ ನಡೆಯಿತು.

ಸಮ್ಮೇಳನದಲ್ಲಿ 200 ಕ್ಕೂ ಹೆಚ್ಚು ದೇಶ ವಿದೇಶಗಳ ಪ್ರತಿನಿಧಿಗಳು ಮತ್ತು ಸಂಪನ್ಮೂಲ ವ್ಯಕಿಗಳು ಭಾಗವಹಿಸಿದರು. ಅಂತಾರಾಷ್ಟ್ರೀಯ ಸಂಸ್ಥೆಗಳಾದ ಮಾರ್ಕಿ ಕ್ಯಾನ್ಸರ್ ಸೆಂಟರ್, ಮೇಯೊ ಕ್ಲಿನಿಕ್, ಲಾಹೆ ಹಾಸ್ಪಿಟಲ್ ಹಾಗೂ ಮೆಡಿಕಲ್ ಸೆಂಟರ್ ಮತ್ತು ಅಲಬಾಮಾ ವಿಶ್ವವಿದ್ಯಾಲಯದಿಂದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದರು.

ಸಮ್ಮೇಳನದ ಘೋಷ ವಾಕ್ಯ ‘ಫ್ಯೂಚರಿಸ್ಟಿಕ್ ಆಂಕೊಲಾಜಿ – ಸ್ತನ, ಯಕೃತ್ತು ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕ್ಯಾನ್ಸರ್ ಗೆ ನಿಖರವಾದ ಔಷದೀಯ ಕ್ರಮ’. ಸ್ತನ, ಶ್ವಾಸಕೋಶ ಮತ್ತು ಯಕೃತ್ತು ನಲ್ಲಿನ ಕ್ಯಾನ್ಸರ್‌ಗಳಿಗೆ ಚಿಕಿತ್ಸೆಯ ಪ್ರಗತಿಗಳ ಕುರಿತು ಸಮ್ಮೇಳನವು ಕೇಂದ್ರೀಕರಿಸಿದೆ.

ಸಮ್ಮೇಳನವನ್ನು ಭಾರತ ಸರ್ಕಾರದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕಿ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರೋಟರಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕಿ ಡಾ. ಸುಷ್ಮಾ ಭಟ್ನಾಗರ್ ಉದ್ಘಾಟಿಸಿದರು. ಅಮೆರಿಕದ ಕೆಂಟುಕಿ ವಿಶ್ವವಿದ್ಯಾನಿಲಯದ ಮಾರ್ಕಿ ಕ್ಯಾನ್ಸರ್ ಸೆಂಟರ್‌ನ ಟ್ರಾನ್ಸ್‌ಡಿಸಿಪ್ಲಿನರಿ ಸಹಯೋಗದ ಸಹ ನಿರ್ದೇಶಕರಾದ ಡಾ. ವಿವೇಕ್ ರಂಗನೇಕರ್ ಮತ್ತು ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ. ಶರತ್ ಕೆ ರಾವ್ ಗೌರವ ಅತಿಥಿಗಳಾಗಿದ್ದರು.

ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ ಸ್ವಾಗತಿಸಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ವಂದಿಸಿದರು.

ಉದ್ಘಾಟನಾ ಭಾಷಣದಲ್ಲಿ ಡಾ. ಸುಷ್ಮಾ ಭಟ್ನಾಗರ್ ಅವರು, ಶಿಕ್ಷಣ ವ್ಯವಸ್ಥೆಗಾಗಿ ಕೆಎಂಸಿ ಮಣಿಪಾಲ ಮತ್ತು ಮಾಹೆ ಸಮೂಹವನ್ನು ಶ್ಲಾಘಿಸಿದರು. ಅತ್ಯಾಧುನಿಕ ಶಿಕ್ಷಣ ವ್ಯವಸ್ಥೆಯಿಂದ ಮಣಿಪಾಲವು ಅತ್ಯುತ್ತಮ ಗುಣಅರ್ಹತೆ ಉಳ್ಳ ಜನರನ್ನು ಸೃಷ್ಟಿಸುತ್ತದೆ ಮತ್ತು ಮಣಿಪಾಲದಿಂದ ಹೊರಗೆ ಹೋದಾಗ ಅವರು ವಿಶಿಷ್ಟ ಸಾಧನೆ ಮೂಲಕ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿದೆ.

ಫ್ಯೂಚರಿಸ್ಟಿಕ್ ಆಂಕೊಲಾಜಿ- ನಿಖರವಾದ ಔಷಧದ ಮೇಲೆ ಕೇಂದ್ರೀಕರಿಸಿದ ಈ ಸಮ್ಮೇಳನವು ಎಲ್ಲಾ ರೋಗಿಗಳನ್ನು ಅವರ ಪರಿಸ್ಥಿತಿಗಳು ಮತ್ತು ರೋಗಲಕ್ಷಣಗಳಿಗೆ ಅನುಗುಣವಾಗಿ ವಿಭಿನ್ನ ರೀತಿಯಲ್ಲಿ ನೋಡಬೇಕು, ಆಗ ಮಾತ್ರ ನಾವು ಉತ್ತಮ ನಿಖರವಾದ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ ಎಂಬುದನ್ನು ಒತ್ತಿ ಹೇಳುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ವಿವೇಕ್ ರಂಗೇಕರ್ ಅವರು, ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಮತ್ತು ಅದರ ಚಟುವಟಿಕೆಗಳು ಮತ್ತು ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂನ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುವ ಪ್ರಾಮುಖ್ಯತೆಯ ಕುರಿತು ಅವಲೋಕನವನ್ನು ನೀಡಿದರು.

ಡಾ. ಶರತ್ ಕೆ ರಾವ್ ಮಾತನಾಡುತ್ತಾ, ಪ್ರತಿ ಕ್ಯಾನ್ಸರ್ ರೋಗಿಗೆ ನಿಖರವಾದ ಕ್ಯಾನ್ಸರ್ ಚಿಕಿತ್ಸೆ ಎಂದು ಕರೆಯಲ್ಪಡುವ ವಿಭಿನ್ನ ಚಿಕಿತ್ಸೆಯನ್ನು ಹೊಂದಿರುತ್ತದೆ. ಫಾರ್ಮಾಕೋಜೆನೆಟಿಕ್ಸ್‌ನ ಒಳಗೊಳ್ಳುವಿಕೆ, ವೈದ್ಯಕೀಯ ತಳಿಶಾಸ್ತ್ರವು ಮುಖ್ಯವಾಗಿದೆ ಏಕೆಂದರೆ ವಂಶವಾಹಿಗಳನ್ನು ಗುರುತಿಸಬೇಕು, ಉತ್ತಮ ಚಿಕಿತ್ಸೆಯನ್ನು ನೀಡಲು ಬೆಳವಣಿಗೆಯನ್ನು ಗುರುತಿಸಬೇಕು. ಇದೆಲ್ಲದಕ್ಕೆ ಮಣಿಪಾಲದಲ್ಲಿ ಈ ಎಲ್ಲ ಸೌಲಭ್ಯಗಳಿವೆ ಮತ್ತು ನಿಖರವಾದ ಔಷಧವನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದರು.

ಅಧ್ಯಕ್ಷೀಯ ಭಾಷಣದಲ್ಲಿ ಡಾ. ಎಚ್ ಎಸ್ ಬಲ್ಲಾಳ್ ಅವರು, ವೈದ್ಯಕೀಯ ಆಂಕೊಲಾಜಿ, ಸರ್ಜಿಕಲ್ ಆಂಕೊಲಾಜಿ, ರೇಡಿಯೊಥೆರಪಿ ಮತ್ತು ಆಂಕೊಲಾಜಿ, ಮಕ್ಕಳಶಾಸ್ತ್ರ ಮತ್ತು ಆಂಕೊಲಾಜಿ, ಉಪಶಾಮಕ ಆರೈಕೆ ಔಷಧ ಮತ್ತು ನ್ಯೂಕ್ಲಿಯರ್ ಮೆಡಿಸಿನ್‌ ಸೇರಿದಂತೆ ಎಲ್ಲ ಸೌಲಭ್ಯವು ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಒಂದೇ ಸೂರಿನಡಿ ನೀಡುತ್ತಿದ್ದೇವೆ. ನಾವು ಹೊಸ ವಿಶ್ರಾಂತಿ ಕೇಂದ್ರದ ಆರೈಕೆಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದ್ದೇವೆ, ಇದರಿಂದ ಇನ್ನಷ್ಟು ಸಮಗ್ರ ಆರೈಕೆ ಒಂದೇ ಸೂರಿನಡಿ ಲಭ್ಯವಾಗಲಿದೆ.

ಪ್ರತಿ ವರ್ಷ ನಾವು ಮಣಿಪಾಲ ಮ್ಯಾರಥಾನ್ ಅನ್ನು ವಿಭಿನ್ನ ಥೀಮ್‌ನಲ್ಲಿ ಆಯೋಜಿಸುತ್ತಿದ್ದೇವೆ. ಈ ವರ್ಷದ ಥೀಮ್ ಮಕ್ಕಳ ಆಂಕೊಲಾಜಿ ಇದು ಬಾಲ್ಯದ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಿದೆ ಎಂದರು.

ವೈದ್ಯಕೀಯ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್ ಉಡುಪ ಸಮ್ಮೇಳನದ ಅವಲೋಕನ ನೀಡಿದರು ಮತ್ತು ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ. ಅನಂತ್ ಪೈ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಮತ್ತು ಡಾ. ಶೆರ್ಲಿ ಲೀವಿಸ್, ಸಮ್ಮೇಳನದ ವೈಜ್ಞಾನಿಕ ಅಧ್ಯಕ್ಷರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡಾ. ಕೃತಿಕಾ ರಾವ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತುಂತುರು ನೀರಾವರಿ ಘಟಕ: ಅರ್ಜಿ ಆಹ್ವಾನ

ಉಡುಪಿ, ಸೆ.20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...

ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು...
error: Content is protected !!