Saturday, September 21, 2024
Saturday, September 21, 2024

ಪರ್ಕಳ- ಗ್ರಹಗಳ ವೀಕ್ಷಣೆಗೆ ಅವಕಾಶ

ಪರ್ಕಳ- ಗ್ರಹಗಳ ವೀಕ್ಷಣೆಗೆ ಅವಕಾಶ

Date:

ಮಣಿಪಾಲ: ಸೂರ್ಯನ ಸುತ್ತ ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತುತ್ತಿರುವ ಮಂಗಳ ಗ್ರಹವು ಡಿಸೆಂಬರ್ 8 ಗುರುವಾರ ಭೂಮಿಗೆ ಸನಿಹದಲ್ಲಿದ್ದು ಸಂಜೆ 6 ರಿಂದ ಆಕಾಶದಲ್ಲಿ ಕಾಣಲಿದೆ. ಮಣಿಪಾಲದ ಎಂ.ಐ.ಟಿ ಉದ್ಯೋಗಿ ಆರ್ ಮನೋಹರ್ ಪರ್ಕಳ ಅವರು ನೂತನವಾಗಿ ಆವಿಷ್ಕರಿಸಿದ ಪಾಕೆಟ್ ನಲ್ಲಿ ಇರಿಸುವಂತಹ ಅಂಗೈಯಗಲದ 7 ಇಂಚು ಮತ್ತು 25× ಮೈಕ್ರೋಸ್ಕೋಪ್, ಮತ್ತು ಟೆಲಿಸ್ಕೋಪ್ ಆಗಿಯೂ ಉಪಯೋಗಿಸಬಹುದಾದ, ಅಂಗೈಯಗಲದ ಪಾಕೆಟ್ ಟೆಲಿಸ್ಕೋಪ್ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಅವರೇ ವಿನ್ಯಾಸ ಮಾಡಿರುವ ಇತರ ಮೇಘಾ ಜೂಮ್ ಲೆನ್ಸ್,, ಎಕ್ಸೆಲ್, ಎಂಬಂತಹ ನಾಲ್ಕು ದೂರದರ್ಶಕದ ಮೂಲಕ ಗ್ರಹಗಳನ್ನು ನೋಡಲು ಅವಕಾಶವಿದೆ.

ಇವರು ಆವಿಷ್ಕರಿಸಿದ ದೂರದರ್ಶಕದಲ್ಲಿ ಗ್ರಹಗಳನ್ನು ನೇರವಾಗಿ ನೋಡುವುದೇ ವಿಶೇಷ. ಅದಕ್ಕಾಗಿ ಇವರಿಗೆ ಪೇಟೆಂಟ್ ಸಿಕ್ಕಿರುತ್ತದೆ. ಇವರು ನಿರ್ಮಿಸಿರುವ ದೂರದರ್ಶಕದಲ್ಲಿ ನೇರವಾಗಿ ಪ್ರತಿಬಿಂಬ ಕಾಣಿಸುವುದು ವಿಶೇಷವಾಗಿರುತ್ತದೆ. ಇದೀಗ ಅಂಗೈಯಗಲದ ವಿನ್ಯಾಸ ಮಾಡಿರುವುದು ವಿಶೇಷವಾಗಿದೆ. ಹುಣ್ಣಿಮೆ ಚಂದ್ರ, ಭೂಮಿಗೆ ಅತೀ ಸಮೀಪ ಇರುವ ಮಂಗಳ ಗ್ರಹ, ಗುರುಗ್ರಹ, ಶನಿಗ್ರಹ, ಮೊದಲಾದ ಗ್ರಹಗಳನ್ನು ಹಾಗೂ ನಕ್ಷತ್ರ ಪುಂಜಗಳನ್ನು ಆವಿಷ್ಕರಿಸಿದ ಪಾಕೆಟ್ ಟೆಲಿಸ್ಕೋಪ್ ನಲ್ಲಿ ನೋಡಬಹುದು.

ಪರ್ಕಳದ ಸ್ವಾಗತ ಹೋಟೆಲ್ ನ ಬಳಿ ಡಿಸೆಂಬರ್ 8 ರ ಗುರುವಾರ ಸಂಜೆ 5:30ರಿಂದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ. ಖಗೋಳಾಸಕ್ತರು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕಾಗಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತುಂತುರು ನೀರಾವರಿ ಘಟಕ: ಅರ್ಜಿ ಆಹ್ವಾನ

ಉಡುಪಿ, ಸೆ.20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...

ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು...
error: Content is protected !!