Friday, September 20, 2024
Friday, September 20, 2024

‘ಕುದ್ರು ನೆಸ್ಟ್’ ದ್ವೀಪದಲ್ಲಿ ರಮೇಶ್ ಅರವಿಂದ್ ಯಕ್ಷಾವತಾರ

‘ಕುದ್ರು ನೆಸ್ಟ್’ ದ್ವೀಪದಲ್ಲಿ ರಮೇಶ್ ಅರವಿಂದ್ ಯಕ್ಷಾವತಾರ

Date:

ತ್ತೀಚೆಗೆ ಉಡುಪಿಯ ಕಾರ್ಯಕ್ರಮ ಒಂದಕ್ಕೆ ಅತಿಥಿಯಾಗಿ ಆಗಮಿಸಿದ್ದ ಜಗ ಮೆಚ್ಚಿದ ನಟ, ಸಂವೇದನಾಶೀಲ ನಿರ್ದೇಶಕ, ಸೃಜನಶೀಲ ಬರಹಗಾರ, ಸ್ಫೂರ್ತಿ ತುಂಬುವ ಭಾಷಣಕಾರ, ಸಾಧಕ, ನಿರೂಪಕ, ಬಹುಮುಖ ಪ್ರತಿಭೆಯ ರಮೇಶ್ ಅರವಿಂದ್ ಉಡುಪಿಯ ಖ್ಯಾತ ಮನೋವೈದ್ಯ ಡಾ. ವಿರೂಪಾಕ್ಷ ದೇವರುಮನೆಯವರೊಂದಿಗೆ ನನ್ನ ‘ಕುದ್ರು ನೆಸ್ಟ್’ ಹೋಮ್ ಸ್ಟೇಗೆ ಭೇಟಿ ನೀಡಿದ್ದರು.

ಪರಿಸರ, ನದಿ, ಮನೆ, ಕ್ರಿಯಾಶೀಲ ವಿನ್ಯಾಸವನ್ನು ಕಂಡು ಮೆಚ್ಚುಗೆ ಸೂಚಿಸಿದ್ದ ಅವರು ನನ್ನ ಛಾಯಾಚಿತ್ರಗಳನ್ನು ಕಂಡು ಬೆರಗು ವ್ಯಕ್ತಪಡಿಸಿ ತನಗೂ ಫೋಟೋ ಶೂಟ್ ಮಾಡ್ತೀರಾ ಎಂದು ಕೇಳಿದಾಗ ಆದ ಆನಂದಕ್ಕೆ ಅಂತ್ಯವೇ ಇರಲಿಲ್ಲ.‌

“ನಾನೊಂದು ದಿನ ಬಂದು ಇಲ್ಲಿರುತ್ತೇನೆ. ಕಾನ್ಸೆಪ್ಟ್ ಎಲ್ಲವೂ ನಿಮ್ಮದೇ” ಎಂದು ಹೇಳಿದವರು ವಾರ ಕಳೆಯುವುದರಲ್ಲೇ ಬಂದದ್ದು ನಿಜಕ್ಕೂ ಅಚ್ಚರಿ.

ಬಹು ಬೇಡಿಕೆಯ, ಹೊಸತು ಮತ್ತು ಹಳೆಯ ಎರಡೂ ತಲೆಮಾರುಗಳನ್ನು ಪ್ರಭಾವಿಸುತ್ತಿರುವ ನಟ, ನಿರೂಪಕ, ಕರ್ನಾಟಕದ ಕಣ್ಮಣಿ ರಮೇಶ್ ಅರವಿಂದ್ ನನ್ನ ಕೆಲಸಗಳನ್ನು ಮೆಚ್ಚಿ, ಕೊಟ್ಟ ಮಾತಿನಂತೆಯೇ ಕುದ್ರು ನೆಸ್ಟ್ ಗೆ ಬಂದಿದ್ದು ಅಚ್ಚರಿಯಲ್ಲೇ ಅಚ್ಚರಿ.

ರಮೇಶ್ ಅರವಿಂದ್ ಜೊತೆ ಫೋಕಸ್ ರಘು

ಕರಾವಳಿಯ ಶೈಲಿಯಲ್ಲೇ ಫೋಟೋ ಶೂಟ್ ಪ್ಲ್ಯಾನ್ ಮಾಡಿದ್ದೆ. ಫೋನಲ್ಲಿ ಎಲ್ಲವನ್ನೂ ತಿಳಿಸಿದ್ದೆ. ನೀವೇನು ಮಾಡಿಸ್ತೀರೋ ನಾನದಕ್ಕೆ ರೆಡಿ ಎಂದವರ ಉತ್ಸಾಹ ಇವತ್ತು ನೋಡಬೇಕು! ಅದೆಂತಹ ಎನರ್ಜಿ ಅವರೊಳಗಿದೆ. ಊಟ ಮಾಡಿದ್ದು ಮೂರು ಗಂಟೆಗೆ ಎಂಬುದು ಈಗ ನೆನಪಾಗುತ್ತಿದೆಯಷ್ಟೆ. ರಮೇಶ್ ಅರವಿಂದ್ ಯಕ್ಷಗಾನದ ಬಣ್ಣ ಹಚ್ಚಿ, ಗೆಜ್ಜೆ ತೊಟ್ಟು, ಹೆಜ್ಜೆ ಹಾಕಿದ ಪರಿಯಂತೂ ರೋಮಾಂಚನ.

“ಯಕ್ಷಗಾನದ ವೇಷ ತೊಟ್ಟ ನನ್ನಲ್ಲೀಗ ದಿವ್ಯತೆಯ ಭಾವ ಬೆಳೆದಿದೆ. ಎಂಟಡಿ, ನೂರೈವತ್ತು ಕೆ.ಜಿ ಬೆಳೆದವನಂತೆ ಅನಿಸುತ್ತಿದೆ. ನಾನಿವತ್ತು ಬಹಳವೇ ಶಕ್ತಿ ಶಾಲಿ, ಎದುರಿಗೇನಾದರೂ ರಾಕ್ಷಸರು ಬಂದರೆ ಹೊಡೆದುರುಳಿಸಿ ಬಿಡುತ್ತೇನೆ” ಎಂದಾಗ ನಮ್ಮಲ್ಲಂತೂ ವಿದ್ಯುತ್ ಸಂಚಾರ.

ರಮೇಶ್ ಅರವಿಂದ್ ಲವಲವಿಕೆ, ಶಿಸ್ತು, ಸಮಯಪ್ರಜ್ಞೆ, ಕಲಾರಾಧನೆ, ಕಮಿಟ್ಮೆಂಟಿಗೆ ಈ ವೀಡಿಯೋ ಸಾಕ್ಷಿ. ಯಕ್ಷಗಾನದ ವೇಷ ಭೂಷಣ ಹಾಗೂ ಹೆಜ್ಜೆ ಕಲಿಸಿದ ಶೈಲೇಶ್ ತೀರ್ಥಹಳ್ಳಿಯವರಿಗೆ ವಿಶೇಷ ಕೃತಜ್ಞತೆಗಳು.

-ಫೋಕಸ್ ರಘು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!