Friday, September 20, 2024
Friday, September 20, 2024

ಸ್ವಸ್ಥ ಸಮಾಜಕ್ಕೆ ಯೋಗದ ಅವಶ್ಯಕತೆಯಿದೆ- ವಿಜಯ ಕೊಡವೂರು

ಸ್ವಸ್ಥ ಸಮಾಜಕ್ಕೆ ಯೋಗದ ಅವಶ್ಯಕತೆಯಿದೆ- ವಿಜಯ ಕೊಡವೂರು

Date:

ಉಡುಪಿ: ಶಿಸ್ತುಬದ್ಧವಾದ ಯೋಗಾಭ್ಯಾಸದಿಂದ ಫಲದಾಯಕ ಪ್ರಾಣಾಯಾಮ, ಅಂತಹ ಸತತ ಪ್ರಾಣಾಯಾಮದಿಂದ ಫಲಪ್ರದ ಧ್ಯಾನಸ್ಥ ಸ್ಥಿತಿ ಪ್ರಾಪ್ತವಾಗುತ್ತದೆ ಎಂದು ಯೋಗ ಶಿಕ್ಷಕ, ಯೋಗಾರಾಧಕ ಮಂಜುನಾಥ ಭಟ್ ಅಭಿಪ್ರಾಯಪಟ್ಟರು.

ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗದ ಮಹತ್ವ ಹಾಗೂ ಯೋಗದ ಬಗ್ಗೆ ಮಾತುಕತೆ ಸಮಾರಂಭದಲ್ಲಿ ಮಾತನಾಡುತ್ತಾ ಯೋಗಾಭ್ಯಾಸದೊಂದಿಗೆ ಅದಕ್ಕೆ ಪೂರಕವಾದ ಆಹಾರ ಸೇವನೆ ಮತ್ತು ಮಾನಸಿಕ ಸ್ಥಿತಿಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಫಲತೆಯನ್ನು ಪಡೆಯಬಹುದು ಎಂದು ತಿಳಿಸಿದರು.

ಮುಖ್ಯ ಅತಿಥಿ, ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡುತ್ತಾ ಯೋಗದಲ್ಲಿ ರಾಜ ಯೋಗ, ಕರ್ಮ ಯೋಗ, ಜ್ಞಾನಯೋಗ, ಭಕ್ತಿಯೋಗ, ಹೀಗೆ ವಿವಿಧ ವಿಧಾನಗಳಿದ್ದು ಯೋಗಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ದೊರೆಯಲು ಕಾರಣರಾದ ಪ್ರಧಾನ ಮಂತ್ರಿಯನ್ನು ನೆನಪಿಸಿಕೊಂಡರು. ಸ್ವಸ್ಥ ಶರೀರಕ್ಕೆ, ಸ್ವಸ್ಥ ಸಮಾಜಕ್ಕೆ ಯೋಗದ ಅವಶ್ಯಕತೆ ಇದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೊರೆಯ, ಕಾರ್ಯಕ್ರಮ ಸಂಚಾಲಕ ಸುಕೇಶ್ ಕೆ. ಅಮೀನ್, ಪೂರ್ವಾಧ್ಯಕ್ಷ ಪ್ರಕಾಶ್ ಕೊಡಂಕೂರು, ಸುರಭಿ ರತನ್, ಸಂತೋಷ್ ಕೊರಂಗ್ರಪಾಡಿ, ದಯಾನಂದ ನಿಟ್ಟೂರ್, ಪ್ರಜ್ವಲ್ ಕಟಪಾಡಿ, ಉದಯ ನಾಯ್ಕ ಉಪಸ್ಥಿತರಿದ್ದರು. ಪೂರ್ಣಿಮಾ ಜನಾರ್ದನ್ ಮಾನಪತ್ರ ವಾಚಿಸಿದರು. ಎಸ್.ಕೆ.ಪಿ.ಎ ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿ, ಕೋಶಾಧ್ಯಕ್ಷ ದಿವಾಕರ ಹಿರಿಯಡ್ಕ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಕಳ ಜ್ಞಾನಸುಧಾ: ಜಿಲ್ಲಾಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟ ಉದ್ಘಾಟನೆ

ಕಾರ್ಕಳ, ಸೆ.20: ಸೋತಾಗ ಸವಾಲು, ಗೆದ್ದಾಗ ಸಂತೋಷ ನೀಡುತ್ತಾ ಬೆಳೆಯಲು ಅವಕಾಶವಿದ್ದರೆ...

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...
error: Content is protected !!