Saturday, September 21, 2024
Saturday, September 21, 2024

ಪಡುಕರೆ ಕಾಲೇಜು: ಕಡಲಾಮೆ ರಕ್ಷಣೆ ಜಾಗೃತಿ

ಪಡುಕರೆ ಕಾಲೇಜು: ಕಡಲಾಮೆ ರಕ್ಷಣೆ ಜಾಗೃತಿ

Date:

ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಎಫ್.ಎಸ್.ಎಲ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಪಡುಕರೆಯ ಕಡಲ ತೀರದ ನಿವಾಸಿಗಳಿಗೆ ಕಡಲಾಮೆ ರಕ್ಷಣೆ ಕುರಿತಾದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

ಎಫ್.ಎಸ್.ಎಲ್ ಇಂಡಿಯಾದ ವೆಂಕಟೇಶ್ ಕಡಲ ತೀರಗಳಿಗೆ ಕಡಲಾಮೆ ಬರುವ ಸಂದರ್ಭಗಳು, ವಂಶಾಭಿವೃದ್ಧಿ, ಕಡಲಾಮೆಗಳ ಸಂತತಿಯ ಅವನತಿಗೆ ಕಾರಣಗಳು, ಕಡಲಾಮೆಗಳನ್ನು ರಕ್ಷಿಸುವ ಉಪಾಯಗಳ ಜೊತಗೆ ಮಾನವ ಜನಾಂಗದ ಉಳಿವಿಗೆ ಕಡಲಾಮೆಗಳ ಮಹತ್ವ ಇತ್ಯಾದಿಯನ್ನು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ಗಾಂವ್ಕರ್ ಮಾತನಾಡಿ, ಪರಿಸರವನ್ನು ರಕ್ಷಿಸಿಕೊಂಡು ಅಭಿವೃದ್ಧಿ ನಡೆದಲ್ಲಿ ಮಾತ್ರ ಮಾನವ ಜನಾಂಗದ ಉಳಿವು ಸಾಧ್ಯ.

ಕಡಲಾಮೆ ರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸುವುದು ಪಡುಕರೆ ಕಾಲೇಜಿನ ಸಾಂಸ್ಥಿಕ ಮೌಲ್ಯಗಳಲ್ಲೊಂದಾಗಿದ್ದು, ಸಂಸ್ಥೆ ಈ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕೋಟ ಪಂಚಾಯತ್ ಸದ್ಯಸರಾದ ಜಯರಾಂ ಶೆಟ್ಟಿ, ಎಫ್.ಎಸ್.ಎಲ್ ಇಂಡಿಯಾದ ದಿನೇಶ್, ಕಾಲೇಜಿನ ಐಕ್ಯೂಎಸಿ ಸಹಸಂಚಾಲಕ ರಾಜಣ್ಣ ಎಂ., ಕಛೇರಿ ಸಹಾಯಕ ಸುಜೀಂದ್ರ, ವಿದ್ಯಾರ್ಥಿ ಸ್ವಯಂ ಸೇವಕರು ಜೊತೆಗೆ ಪಡುಕರೆ ಗ್ರಾಮಸ್ಥರು ಭಾಗವಹಿಸಿದರು.

ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೃಷಿ ಯಾಂತ್ರೀಕರಣ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಸೆ.21: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ...

ಕೃಷಿ ಭಾಗ್ಯ ಯೋಜನೆ: ರೈತರಿಂದ ಅರ್ಜಿ ಆಹ್ವಾನ

ಉಡುಪಿ, ಸೆ.21: ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವ ನಿಟ್ಟಿನಲ್ಲಿ ಸಮರ್ಪಕ...

ಕಿರು ಸಾಲ ಸೌಲಭ್ಯ: ಅರ್ಜಿ ಆಹ್ವಾನ

ಉಡುಪಿ, ಸೆ.21: ಬೀದಿ ಬದಿ ವ್ಯಾಪಾರಸ್ಥರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರಕಾರವು...

ಸ್ವಚ್ಛತೆ ನಮ್ಮೆಲ್ಲರ ಮೊದಲ ಆದ್ಯತೆಯಾಗಲಿ

ಉಡುಪಿ, ಸೆ.21: ಕಡಲ ತೀರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಜಲಚರಗಳ ಅಸ್ತಿತ್ವಕ್ಕೆ ತೊಂದರೆಯಾಗುತ್ತಿದೆ....
error: Content is protected !!