Monday, October 14, 2024
Monday, October 14, 2024

ಓದುವ ಹವ್ಯಾಸ ಮೈಗೂಡಿಸಿಕೊಂಡರೆ ಉತ್ತಮ ಸಾಹಿತ್ಯ ರಚನೆ ಸಾಧ್ಯ: ಡಾ. ವಿನ್ಸೆಂಟ್‌ ಆಳ್ವಾ

ಓದುವ ಹವ್ಯಾಸ ಮೈಗೂಡಿಸಿಕೊಂಡರೆ ಉತ್ತಮ ಸಾಹಿತ್ಯ ರಚನೆ ಸಾಧ್ಯ: ಡಾ. ವಿನ್ಸೆಂಟ್‌ ಆಳ್ವಾ

Date:

ಉಡುಪಿ: ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ಮುಂದೆ ಉತ್ತಮ ಸಾಹಿತ್ಯ ರಚನೆಯಾಗಲು ಸಾಧ್ಯವಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್‌ ಆಳ್ವಾ ಹೇಳಿದರು.

ಅವರು ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನಲ್ಲಿ ಕಥೊಲಿಕ್‌ ಸಭಾ ಉಡುಪಿ ಪ್ರದೇಶ, ಆಮ್ಚೊ ಸಂದೇಶ್‌ ಕೊಂಕಣಿ ಮಾಸಿಕ ಮತ್ತು ಕೊಂಕಣಿ ಸಂಘಟನೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಆಮ್ಚೊಂ ಸಂದೇಶ್‌ ಪ್ರತಿನಿಧಿಗಳ ಮತ್ತು ಬರಹಗಾರರ ಸಮ್ಮೇಳನ ಹಾಗೂ ದಿ. ಜೋಸೆಪ್‌ ಮೇರಿ ಪಿಂಟೊ ನಿಡ್ಡೋಡಿ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು

ಬರಹಗಾರನಾಗಬೇಕಾದರೆ ಮೊದಲು ನಾವು ಹೆಚ್ಚು ಹೆಚ್ಚು ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ನಮ್ಮಲ್ಲಿ ಜ್ಞಾನದ ವೃದ್ದಿಯಾಗುತ್ತದೆ ಇದರಿಂದ ಬರೆಯುವ ಕಲೆ ನಮ್ಮಲ್ಲಿ ಹುಟ್ಟಿಕೊಂಡು ಮುಂದೆ ಸಮಾಜದಲ್ಲಿ ಉತ್ತಮ ಬರಹಗಾರ, ಸಾಹಿತಿಯಾಗಲು ಸಾಧ್ಯವಾಗುತ್ತದೆ ಎಂದರು.

ಕೊಂಕಣಿಯಲ್ಲಿ ಬರೆಯುವ ಯುವ ಸಾಹಿತಿಗಳಿಗೆ ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇವರ ಸಹಭಾಗಿತ್ವದಲ್ಲಿ ನೀಡಲಾಗುವ ದಿ. ಜೋಸೆಫ್‌ ಮತ್ತು ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಸಾಹಿತ್ಯ ಪುರಸ್ಕಾರ -2021 ಕ್ಕೆ ವಿತಾಶಾ ರಿಯಾ ರೊಡ್ರಿಗಸ್‌ (ಮುದ್ದು ತೀರ್ಥಹಳ್ಳಿ) ಅವರಿಗೆ ಪ್ರದಾನ ಮಾಡಲಾಯಿತು.

ಪ್ರಚಲಿತ ಲೇಖನಗಳನ್ನು ಬರೆಯುವ ಕುರಿತು ದೈಜಿ ವಲ್ಡ್‌ ಮಂಗಳೂರು ಬ್ಯೂರೊ ಮುಖ್ಯಸ್ಥರಾದ ಸ್ಟ್ಯಾನಿ ಬೇಳಾ, ಸಂಪಾದಕರಿಗೆ ಪತ್ರ ಬರೆಯುವ ಕುರಿತು ಆಮ್ಚೊ ಸಂದೇಶ್‌ ಪತ್ರಿಕೆಯ ವಿಲ್ಫ್ರೇಡ್‌ ಲೋಬೊ, ವರದಿಗಾರಿಕೆಯ ಕುರಿತು ಉಡುಪಿ ಧರ್ಮಪ್ರಾಂತ್ಯದ ಮಾಧ್ಯಮ ಸಂಯೋಜಕರಾದ ಮೈಕಲ್‌ ರೊಡ್ರಿಗಸ್‌ ಮಾಹಿತಿ ನೀಡಿದರು.
ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಮೇರಿ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ದಿವ್ಯದೀಪ ಪ್ರಕಾಶನ ಸಂತೆಕಟ್ಟೆ ಕಲ್ಯಾಣಪುರ ಇದರ ವತಿಯಿಂದ ಮರುಮುದ್ರಣಗೊಂಡ ರಾಕ್ಣೋ ವಾರಪತ್ರಿಕೆಯ ಮಾಜಿ ಸಂಪಾದಕರಾದ ವಂ|ಮಾರ್ಕ್‌ ವಾಲ್ಡರ್‌ ಅವರ ಆತ್ಮಚರಿತ್ರೆ ಲೊಕಾಚೊ ಯಾಜಕ್‌ ಪುಸ್ತಕವನ್ನು ಅನಾವರಣಗೊಳಿಸಲಾಯಿತು.

ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇದರ ಪ್ರಧಾನ ಕಾರ್ಯದರ್ಶಿ ಗ್ರೆಗೋರಿ ಪಿಕೆ ಡಿʼಸೋಜಾ, ಮಾಜಿ ಅಧ್ಯಕ್ಷ ಆಲ್ವಿನ್‌ ಕ್ವಾಡ್ರಸ್‌, ಆಮ್ಚೊ ಸಂದೇಶ್‌ ಸಂಚಾಲಕರಾದ ಎಲ್ರೋಯ್‌ ಕಿರಣ್‌ ಕ್ರಾಸ್ಟೊ, ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ ಇದರ ಕೋಶಾಧಿಕಾರಿ ಮೆಲ್ರಿಡಾ ರೊಡ್ರಿಗಸ್‌, ದಿ. ಜೋಸೆಪ್‌ ಮೇರಿ ಪಿಂಟೊ ನಿಡ್ಡೋಡಿ ಕುಟುಂಬಿಕರಾದ ವಾಲ್ಟರ್‌ ಸಿರಿಲ್‌ ಪಿಂಟೊ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕರಾದ ಡಾ. ಜೆರಾಲ್ಡ್‌ ಪಿಂಟೊ ಸ್ವಾಗತಿಸಿ, ಎಡ್ವರ್ಡ್‌ ಲಾರ್ಸನ್‌ ಡಿʼಸೋಜಾ ಪೇತ್ರಿ ಅತಿಥಿಗಳ ಪರಿಚಯ ಮಾಡಿದರು. ಕಲ್ಯಾಣಪುರ ವಲಯ ಅಧ್ಯಕ್ಷರಾದ ರೋಜಿ ಬಾರೆಟ್ಟೊ ವಂದಿಸಿ, ಡಾ ಫ್ಲಾವಿಯಾ ಕ್ಯಾಸ್ತಲಿನೊ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸವದತ್ತಿ ಕ್ಷೇತ್ರದ ಅಭಿವೃದ್ಧಿಗೆ 25 ಕೋಟಿ ರೂ ನೀಡಿ: ಸಿಎಂಗೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ

ಬೆಳಗಾವಿ, ಅ.13: ಸವದತ್ತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶ್ರೀ ರೇಣುಕಾ...

ಉಡುಪಿ ಸಾರ್ವಜನಿಕ ಶ್ರೀ ಶಾರದೋತ್ಸವ: ಭವ್ಯ ಶೋಭಾಯಾತ್ರೆ

ಉಡುಪಿ, ಅ.13: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಉಡುಪಿ ಇದರ ವತಿಯಿಂದ...

ಮಾತೃಹೃದಯಿ ರತನ್ ಟಾಟಾ

ಗಣಿತನಗರ, ಅ.13: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಅಗಲಿದ ಉದ್ಯಮ...
error: Content is protected !!