Wednesday, October 9, 2024
Wednesday, October 9, 2024

ನಾಯಿ ಮತ್ತು ನಾಯಿ ಬಾಲ ಹಾಗೂ ತ್ರಿಭಾಷಾ ರಂಗ ನಾಟಕಗಳು ಪುಸ್ತಕ ಬಿಡುಗಡೆ

ನಾಯಿ ಮತ್ತು ನಾಯಿ ಬಾಲ ಹಾಗೂ ತ್ರಿಭಾಷಾ ರಂಗ ನಾಟಕಗಳು ಪುಸ್ತಕ ಬಿಡುಗಡೆ

Date:

ಉಡುಪಿ: ಅನಂತ ವೈದಿಕ ಕೇಂದ್ರ ಉಡುಪಿ ಮತ್ತು ರಂಗನಾಥ ಕಾಂಪೌಂಡು ನಿವಾಸಿಗಳು ನೇತೃತ್ವದಲ್ಲಿ ಚಲನಚಿತ್ರ ನಿರ್ದೇಶಕ, ನಟ, ರಂಗಕರ್ಮಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನ ಇವರು ಭಾಷಾಂತರಿಸಿದ ಎರಡು ನಾಟಕಗಳ ಒಂದು ಪುಸ್ತಕ “ನಾಯಿ ಮತ್ತು ನಾಯಿ ಬಾಲ” ಹಾಗೂ “ತ್ರಿಭಾಷಾ ರಂಗ ನಾಟಕಗಳು” (ಕನ್ನಡ ಕೊಂಕಣಿ, ತುಳು) ಭಾಷಾ ನಾಟಕಗಳನ್ನು ಒಳಗೊಂಡಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮ ಭಾನುವಾರ ರಂಗನಾಥ ಶೆಣೈ ಕಂಪೌಂಡ್ ಉಡುಪಿ ಇಲ್ಲಿ ನಡೆಯಿತು.

ಶಾಸಕ ಕೆ. ರಘುಪತಿ ಭಟ್ ಉದ್ಘಾಟನೆ ನೆರವೇರಿಸಿ ಅಧ್ಯಕ್ಷತೆ ವಹಿಸಿದ್ದರು. ಹಾಸ್ಯ ಭಾಷಣಕಾರರಾದ ಸಂಧ್ಯಾ ಶೆಣೈ, ಕವಿ ಮನೋಹರ್ ನಾಯಕ್, ಲೇಖಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಟಿ. ರಂಗ ಪೈ, ಕುಡಾಳ ದೇಶಸ್ಥ ಸಮಾಜದ ಮುಂದಾಳು ಮಹೇಶ್ ಠಾಕೂರ್, ಖಾರ್ವಿ ಸಮಾಜದ ಮೀನಾ ಕುಮಾರಿ, ದೇಶ ಭಂಡಾರಿ ಸಮಾಜದ ಮುಂದಾಳು ಚಿದಾನಂದನ ಭಂಡಾರಿ ಕಾಗಲ, ರಂಗಕರ್ಮಿ, ದೈವಜ್ಞ ಸಮಾಜದ ಬಾಂಧವರಾದ ರಾಜಗೋಪಾಲ ಶೇಟ್, ವೈಶ್ಯವಾಣಿ ಸಮಾಜದ ಮುಂದಾಳು ವಸಂತ್ ನಾಯಕ್, ಕಲಾವಿದ, ಕೆಥೋಲಿಕ್ ಸಮಾಜ ಮುಂದಾಳು ವಿವಿಟಾ ಡಿಸೋಜಾ, ನ್ಯಾಯವಾದಿ ಲಕ್ಷ್ಮಣ್ ಶೆಣೈ ಮುಂತಾದವರು ಉಪಸ್ಥಿತರಿದ್ದರು.

ವೇದಮೂರ್ತಿ ರಾಮಚಂದ್ರ ಅನಂತ ಭಟ್ ಹಾಗೂ ಶಶಿಭೂಷಣ ಕಿಣಿ ಕಾರ್ಯಕ್ರಮ ಸಂಘಟಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇ-ಖಾತಾ ಸಂಬಂಧಿತ ಗೊಂದಲಗಳಿಗೆ ವಾರದೊಳಗೆ ಪರಿಹಾರ

ಬೆಂಗಳೂರು, ಅ.8: ಇ-ಖಾತಾಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿದ್ದು, ಅವುಗಳನ್ನು ಒಂದು ವಾರದಲ್ಲಿ...

ದಸರಾ ಪ್ರಯುಕ್ತ 2000 ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು, ಅ.8: ದಸರಾ ಮಹೋತ್ಸವದ ಹಿನ್ನೆಲೆ ಕೆಎಸ್‌ಆರ್‌ಟಿಸಿ 2000ಕ್ಕೂ ಅಧಿಕ ವಿಶೇಷ...

ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ (ಕಡಿಮೆಗೊಳಿಸುವ) ದಿನದ ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟನೆ

ಮಣಿಪಾಲ, ಅ.8: ಮಣಿಪಾಲದ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಅಂತರಾಷ್ಟ್ರೀಯ ವಿಪತ್ತು...

ವಿದ್ಯಾರ್ಥಿಗಳಿಗೆ ವೀರಗಾಥಾ ಕಾರ್ಯಕ್ರಮ

ಉಡುಪಿ, ಅ.8: ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶಪ್ರೇಮ ಮತ್ತು ದೇಶ ಭಕ್ತರ ಕುರಿತು...
error: Content is protected !!