Friday, September 20, 2024
Friday, September 20, 2024

ಕೊಡವೂರು: ಸಾಧಕಿ ಶಿಕ್ಷಕಿಗೆ ಶಿಷ್ಯರ ಗುರುವಂದನೆ

ಕೊಡವೂರು: ಸಾಧಕಿ ಶಿಕ್ಷಕಿಗೆ ಶಿಷ್ಯರ ಗುರುವಂದನೆ

Date:

ಸುಮಾರು 150 ವರ್ಷಗಳ ಇತಿಹಾಸವಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಡವೂರು ಇಲ್ಲಿ 36 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಮೇ 31 ರಂದು ವಯೋನಿವ್ರತ್ತಿ ಹೊಂದಿದ ಮಲ್ಲಿಕಾ ದೇವಿಯವರನ್ನು ಕೊಡವೂರಿನ ನಗರಸಭಾ ಸದಸ್ಯ ವಿಜಯ ಕೊಡವೂರು ರವರ ನೇತೃತ್ವದಲ್ಲಿ ಅವರ ಸ್ವಗ್ರಹದಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ಕೊಡವೂರು, ಕೊಡವೂರು ಶಾಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿ ಮಲ್ಲಿಕಾ ದೇವಿಯವರು ಉತ್ತಮ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿ ಶಾಲೆಗೆ ಒಳ್ಳೆಯ ಹೆಸರು ಬರುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಹಾಗೆಯೇ ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ ಅವರು ಸತ್ಪಥದಲ್ಲಿ ಮುನ್ನಡೆಯಲು ಪ್ರೇರಣೆ ನೀಡಿರುತ್ತಾರೆ. ಕೇವಲ ಸಂಬಳಕ್ಕಾಗಿ ಕೆಲಸವನ್ನು ಮಾಡದೆ ಸಂಸ್ಕಾರಯುತವಾದ, ಮೌಲ್ಯಯುತವಾದ ಶಿಕ್ಷಣ ನೀಡಬೇಕು, ಬಡ ಮಕ್ಕಳಿಗೂ ಕನ್ನಡ ಜೊತೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡಿ ದೇಶಕ್ಕೆ ಮಾದರಿಯಾಗಬೇಕು ಅನ್ನುವ ಆಸೆ ಇಟ್ಟಿದ್ದರು. ಅವರ ಆಸೆಯನ್ನು ಅಜ್ಞೆಯೆಂಡು ಜವಾಬ್ದಾರಿಯಿಂದ ಪಾಲಿಸುವುದು ಅವರಿಂದ ಕಲಿತ ವಿದ್ಯಾರ್ಥಿಯಾದ ನಮ್ಮ ಕರ್ತವ್ಯ ಎಂದರು.

ಶ್ರೀ ಶಂಕರನಾರಾಯಣ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಟಿ.ರಾಘವೇಂದ್ರ ರಾವ್ ರವರು ಮಾತನಾಡಿ ಶಿಕ್ಷಣ ಪ್ರತಿಷ್ಠಾನವನ್ನು ಪ್ರಾರಂಭಿಸುವ ಪರಿಕಲ್ಪನೆಗೆ ದಾರಿ ಮಾಡಿಕೊಟ್ಟವರು ಹಾಗೆಯೇ ನಮ್ಮ ಶಾಲೆ ಸಮಗ್ರವಾಗಿ ಸುಲಲಿತವಾಗಿ ಸಾಗಿಬರುವಂತೆ ಹೆಚ್ಚಿನ ಶ್ರಮವಹಿಸಿರುವ ಮಲ್ಲಿಕಾದೇವಿಯವರಿಗೆ ಅವರ ನಿವೃತ್ತ ಜೀವನ ಸಂತ್ರಪ್ತಿಯಿಂದ ಕೂಡಿರಲಿ ಎಂದು ಹಾರೈಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ಮಾತನಾಡಿ ಸತತ 36 ವರುಷಗಳ ಕಾಲ ಕೊಡವೂರು ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಹಾಗೂ ಸಮಯಪ್ರಜ್ಞೆಯಿಂದ ಸೇವೆಗೈದಿರುತ್ತಾರೆ ಮತ್ತು ಊರಿನ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳ ಮಾರ್ಗದರ್ಶಕರಾಗಿ ಆ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಶಾಲೆಗೂ ಮತ್ತು ಊರಿನ ಸಂಘಟನೆಗಳಿಗೂ ಸೌಹಾರ್ದತೆಯ ನಂಟನ್ನು ಶಿಕ್ಷಕಿ ಮಲ್ಲಿಕಾ ದೇವಿಯವರು ಬೆಸೆದಿದ್ದರು ಎಂದರು.

ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಶಾಲೆಯ ಮೇಲೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವುದಾಗಿ ಶಿಕ್ಷಕಿ ಮಲ್ಲಿಕಾ ದೇವಿ ಹೇಳಿದರು. ಯುವಕ ಸಂಘದ ಉಪಾಧ್ಯಕ್ಷ ಚಂದ್ರಕಾಂತ್ ಶೆಟ್ಟಿಗಾರ್, ಸಲಹೆಗಾರ ಅಶೋಕ್ ಶೆಟ್ಟಿಗಾರ್, ಮಲ್ಲಿಕಾ ದೇವಿಯವರ ಪತಿ ತಿಮ್ಮಪ್ಪ ಬಿ.ಪೂಜಾರಿ, ಪುತ್ರ ಮನೀಷ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!