Home ಸುದ್ಧಿಗಳು ರಾಷ್ಟ್ರೀಯ ಕಳೆದ ಐದು ವರ್ಷಗಳಲ್ಲಿ ಬಲಿಷ್ಠ ಭಾರತಕ್ಕೆ ಅಡಿಪಾಯ: 17ನೇ ಲೋಕಸಭೆಯ ಕೊನೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ...

ಕಳೆದ ಐದು ವರ್ಷಗಳಲ್ಲಿ ಬಲಿಷ್ಠ ಭಾರತಕ್ಕೆ ಅಡಿಪಾಯ: 17ನೇ ಲೋಕಸಭೆಯ ಕೊನೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ

685
0

ನವದೆಹಲಿ, ಫೆ.10: ಕಳೆದ ಐದು ವರ್ಷಗಳಲ್ಲಿ ಬಲಿಷ್ಠ ಭಾರತಕ್ಕೆ ಅಡಿಪಾಯ ಹಾಕುವ ಅನೇಕ ಬದಲಾವಣೆಯ ಸುಧಾರಣೆಗಳು ನಡೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶನಿವಾರದಂದು 17ನೇ ಲೋಕಸಭೆಯ ಕೊನೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 370ನೇ ವಿಧಿಯ ರದ್ದತಿ, ತ್ರಿವಳಿ ತಲಾಖ್ ರದ್ದುಗೊಳಿಸುವಿಕೆ ಮತ್ತು ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರ ಸೇರಿದಂತೆ ಪ್ರಮುಖ ನಿರ್ಣಯಗಳನ್ನು ಐದು ವರ್ಷಗಳಲ್ಲಿ ಸಾಧ್ಯವಾಯಿತು ಎಂದು ಹೇಳಿದರು. ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ನಡೆದಿವೆ. ಈ ಹಿಂದೆ ರಾಷ್ಟ್ರದಲ್ಲಿ ಸುಧಾರಣೆ ಮತ್ತು ಕಾರ್ಯನಿರ್ವಹಣೆ ಎರಡೂ ನಡೆದಿರುವುದು ಬಹಳ ವಿರಳ. ಆದರೆ ಈ ಬಾರಿ ಅವೆರಡೂ ನಡೆದಿವೆ ಮತ್ತು ಪರಿವರ್ತನೆಯು ಜನರ ಕಣ್ಣ ಮುಂದೆಯೇ ಇದೆ ಎಂದು ಪ್ರಧಾನಿ ಮೋದಿ ಹೇಳಿದರು.

17ನೇ ಲೋಕಸಭೆಯು ಶೇ 97 ರಷ್ಟು ಉತ್ಪಾದಕತೆಯನ್ನು ಹೊಂದಿದ್ದು, ಏಳು ಅಧಿವೇಶನಗಳಲ್ಲಿ ಅದು ಶೇ 100 ಇತ್ತು. 17ನೇ ಲೋಕಸಭೆಗೆ ದೇಶವು ಆಶೀರ್ವಾದ ನೀಡಲಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾತನಾಡಿ, 17ನೇ ಲೋಕಸಭೆ ಹಲವು ರೀತಿಯಲ್ಲಿ ಐತಿಹಾಸಿಕವಾಗಿದೆ. ಕಳೆದ ಐದು ವರ್ಷಗಳಲ್ಲಿ ಸದನ ನಡೆಸಲು ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಇದಕ್ಕೂ ಮುನ್ನ ಹಲವು ಸದಸ್ಯರು 17ನೇ ಲೋಕಸಭೆಯ ಅನುಭವಗಳ ಕುರಿತು ಮಾತನಾಡಿದರು.

ತಮ್ಮ ಸಮಾರೋಪ ಭಾಷಣದಲ್ಲಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ಸದನದ ಎಲ್ಲಾ ವಿಭಾಗಗಳಿಗೆ ಅವಕಾಶ ಕಲ್ಪಿಸಿಕೊಟ್ಟು ಸದನದ ಕಲಾಪಗಳನ್ನು ಶ್ರದ್ಧೆ ಮತ್ತು ಘನತೆಯಿಂದ ನಡೆಸಿದ್ದಕ್ಕಾಗಿ ಸ್ಪೀಕರ್ ಅವರಿಗೆ ಧನ್ಯವಾದ ಅರ್ಪಿಸಿದರು. ಬಿಜೆಡಿಯ ಪಿನಾಕಿ ಮಿಶ್ರಾ ಅವರು ಸಂಸದರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.