Saturday, September 21, 2024
Saturday, September 21, 2024

ಜಯಪುರ: 11-12ನೇ ಶತಮಾನದ ಶಾಸನೋಕ್ತ ವೀರಗಲ್ಲು ಪತ್ತೆ

ಜಯಪುರ: 11-12ನೇ ಶತಮಾನದ ಶಾಸನೋಕ್ತ ವೀರಗಲ್ಲು ಪತ್ತೆ

Date:

ಉಡುಪಿ: ಜಯಪುರದ ಭುವನಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳವನಕೊಡಿಗೆ ಗ್ರಾಮದ ಅರ್ದಳ್ಳಿಯ ಕಾಗಿನಕಾಡು ಎಂಬ ಸರಕಾರಿ ಅರಣ್ಯ ಪ್ರದೇಶದಲ್ಲಿ ದಶಕಗಳ ಹಿಂದೆ ಚಂದ್ರಶೇಖರಯ್ಯನವರು ಪತ್ತೆ ಮಾಡಿದ ಶಾಸನೋಕ್ತ ವೀರಗಲ್ಲನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ. ಸುರೇಶ್ ಕಲ್ಕೆರೆ ಪುನರ್ ಅಧ್ಯಯನಕ್ಕೆ ಒಳಪಡಿಸಿರುತ್ತಾರೆ.

ಈ ವೀರಗಲ್ಲಿನ ಪ್ರಾರಂಭಿಕ ಅಧ್ಯಯನವನ್ನು ಬ್ರಹ್ಮಾವರ ಕ್ರಾಸ್ಲ್ಯಾಂಡ್ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕರಾದ ಡಾ.ಗುರುಮೂರ್ತಿ ಕಮಲೆ ಅವರು ಮಾಡಿದ್ದು ಆದರೆ ಲಿಪಿಯನ್ನು ಓದಲು ಅಸಾಧ್ಯವಾಗಿತ್ತು ಎಂದು ತಿಳಿಸಿದ್ದರು. ಇತ್ತೀಚೆಗೆ ಕೈಗೊಂಡ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಈ ಶಾಸನೋಕ್ತ ವೀರಗಲ್ಲಿನ ಪಠ್ಯವನ್ನು ಪುರಾತತ್ವ ಮತ್ತು ಇತಿಹಾಸ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ‌ಮೂಡುಬೆಳ್ಳೆ ಅವರು ಓದಿ, ಅರ್ಥೈಸುವ ಪ್ರಯತ್ನವನ್ನು‌ ಮಾಡಿದ್ದಾರೆ.

ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ವೀರಗಲ್ಲು ಸುಮಾರು 6 ಅಡಿ ಎತ್ತರ ಹಾಗೂ 2.5 ಅಡಿ ಅಗಲವಿದ್ದು 3 ಪಟ್ಟಿಕೆಯನ್ನು ಒಳಗೊಂಡಿದೆ. ವೀರಗಲ್ಲಿನ ಕೆಳಗಿನ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಹೋರಾಡುತ್ತಿರುವ ವೀರನ ದೃಶ್ಯವನ್ನು ಕೆತ್ತಲಾಗಿದ್ದು, ಎರಡನೆಯ ಪಟ್ಟಿಕೆಯಲ್ಲಿ ಮರಣ ಹೊಂದಿದ ಈ ವೀರನ ಜೊತೆ ಪೀಠದಲ್ಲಿ ಕೈಮುಗಿದು ಕುಳಿತಿರುವ ಮುನಿಗಳ ಕೆತ್ತನೆಯನ್ನು ಮಾಡಲಾಗಿದೆ. ಮೇಲಿನ ಪಟ್ಟಿಕೆಯಲ್ಲಿ ಪೀಠದಲ್ಲಿ ಕುಳಿತಿರುವ ವೀರನಿಗೆ ಗಜಗಳು ಅಭಿಷೇಕ ಮಾಡುವ ದೃಶ್ಯದ ಕೆತ್ತನೆ ಇದೆ. ವೀರಗಲ್ಲಿನ ಕೆಳಗಿನ ಎರಡು ಪಟ್ಟಿಕೆಗಳಲ್ಲಿ 11- 12ನೆ ಶತಮಾನಕ್ಕೆ ಸೇರಿದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ 12 ಸಾಲಿನ ಶಾಸನವನ್ನು ಕೊರೆಯಲಾಗಿದೆ. ಶಾಸನದ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಅಳಿದುಳಿದ ಲಿಪಿಯ ಆಧಾರದ ಮೇಲೆ ಓದಲು ಪ್ರಯತ್ನಿಸಿದಾಗ ವೀರಗಲ್ಲಿನಲ್ಲಿ ಚೈತ್ರ ಮಾಸ, ಸುದ್ದ 5 ಆದಿವಾರ ಎಂದಿದೆ.

ಶಾಸನದಲ್ಲಿ ಮಹಾಮಂಡಲೇಶ್ವರ ಮ(ಹಾ)ದೇವನ ಉಲ್ಲೇಖವಿದ್ದು ಹಾಗೆಯೇ ಹಿರಿಯ ಹೆಗಡೆ, ಮೂಡವೆಗ್ಗಡೆ, ಸಿದ್ದದೇವ, ವೀರಕನರ ಹಾಗೂ ಸಂಧಿ ವಿಗ್ರಹಿ ವೇದ್ಯ ಶಾಂತ್ಯನೊ ನಾಮವಗ್ಗಡೆ ಎಂಬ ವ್ಯಕ್ತಿಗಳ ಉಲ್ಲೇಖವಿದೆ‌. ಈ ಪ್ರದೇಶವು ಕಲ್ಯಾಣ ಚಾಲುಕ್ಯರ ಸಾಮಂತರಾದ ಹೊಂಬುಜದ ಸಾಂತರರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಪತ್ತೆಯಾದ ಶಾಸನೋಕ್ತ ವೀರಗಲ್ಲು ಸಹ ಸಾಂತರರ ಕಾಲಕ್ಕೆ ಸೇರಿರಬಹುದೆಂದು ನ.‌ ಸುರೇಶ ಕಲ್ಕೆರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಕಿಶನ್ ಕುಮಾರ್ ಮೂಡುಬೆಳ್ಳೆ, ಹುರುಳೀಹಕ್ಲು ರಾಜೇಂದ್ರ, ಸುಧೀರ್, ಸುಜನ ಹಾಗೂ ಅರ್ದಳ್ಳಿಯ ಹರಿಪ್ರಕಾಶ್ ಹೆಬ್ಬಾರ್ ಅವರು ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವಕರ್ಮ ಯೋಜನೆಯ ಲಾಭ ಪಡೆದು ಕುಶಲಕರ್ಮಿಗಳು ಉದ್ಯಮಿಗಳಾಗಬಹುದು: ಪ್ರಧಾನಿ ನರೇಂದ್ರ ಮೋದಿ

ವಾರ್ಧಾ, ಸೆ.21: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಲಾಭ ಪಡೆಯುವ ಮೂಲಕ ಕುಶಲಕರ್ಮಿಗಳು...

ಭ್ರಷ್ಟಾಚಾರ ಪ್ರಕರಣ: ಲಾಲು ಪ್ರಸಾದ್ ಯಾದವ್ಗೆ ಸಿಬಿಐ ಬಿಸಿ

ನವದೆಹಲಿ, ಸೆ.21: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಮತ್ತು ಮಾಜಿ...

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...
error: Content is protected !!