Thursday, September 19, 2024
Thursday, September 19, 2024

ದರೆಗುಡ್ಡೆ: 12-13ನೇ ಶತಮಾನದ ತುಳು ಬಂಡೆಗಲ್ಲು ಶಾಸನ ಪತ್ತೆ

ದರೆಗುಡ್ಡೆ: 12-13ನೇ ಶತಮಾನದ ತುಳು ಬಂಡೆಗಲ್ಲು ಶಾಸನ ಪತ್ತೆ

Date:

ಉಡುಪಿ, ಫೆ. 6: ಮಂಗಳೂರು ತಾಲೂಕಿನ ದರೆಗುಡ್ಡೆಯ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಲ ಬದಿಯಲ್ಲಿರುವ, ಸ್ಥಳೀಯರು ಆನೆಕಲ್ಲು ಎಂದು ಕರೆಯುವ ಬಂಡೆಯಲ್ಲಿ ತುಳು ಶಾಸನವೊಂದನ್ನು ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಪತ್ತೆ ಮಾಡಿರುತ್ತಾರೆ. ಈ ಸ್ಥಳದ ಅಧ್ಯಯನ ನಡೆಸಲು ಉಡುಪಿಯ ವೇದಮೂರ್ತಿ ಸಗ್ರಿ ಗೋಪಾಲಕೃಷ್ಣ ಸಾಮಗ ಅವರು ಮಾರ್ಗದರ್ಶನ ನೀಡಿರುವರು ಎಂದು ಕೃಷ್ಣಯ್ಯ ಅವರು ತಿಳಿಸಿರುತ್ತಾರೆ.

ದೇವಾಲಯದ ಜೀರ್ಣೋದ್ಧಾರದ ಹಿನ್ನಲೆಯಲ್ಲಿ ಈ ಬಂಡೆಯ ಸುತ್ತಲೂ ಮಣ್ಣು ಜಮಾವಣೆಯಾಗಿದ್ದು, ಪ್ರಸ್ತುತ ಈ ಶಾಸನದಲ್ಲಿ 5 ರಿಂದ 6 ಸಾಲಿನ ಅಸ್ಪಷ್ಟ ತುಳು ಲಿಪಿಯು ಗೋಚರವಾಗಿದ್ದು ಉಳಿದ ಸಾಲುಗಳು ಮಣ್ಣಿನಲ್ಲಿ ಹೂತುಹೋಗಿದೆ. ಈ ಶಾಸನದ ಹೆಚ್ಚುವರಿ ಅಧ್ಯಯನವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಕೃಷ್ಣಯ್ಯ ಅವರು ತಿಳಿಸಿದ್ದಾರೆ. ಶಾಸನದ ಪ್ರಾಥಮಿಕ ಅಧ್ಯಯನವನ್ನು ಮಾಡಿರುವ ತುಳುಲಿಪಿ ಶಾಸ್ತ್ರಜ್ಞರಾದ ಡಾ. ರಾಧಾಕೃಷ್ಣ ಬೆಳ್ಳೂರು ಅವರು ಲಿಪಿಯ ಆಧಾರದ ಮೇಲೆ ಈ ಶಾಸನವು 12-13ನೆ ಶತಮಾನಕ್ಕೆ ಸೇರಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಷೇತ್ರಕಾರ್ಯ ಶೋಧನೆಗೆ ರವಿ ಸಂತೋಷ್ ಆಳ್ವ ಮತ್ತು ಸ್ಥಳೀಯರು ಸಹಕಾರ ನೀಡಿರುತ್ತಾರೆ.

ಶಾಸನದ ಮಹತ್ವ: ದರೆಗುಡ್ಡೆಯಲ್ಲಿ ಪತ್ತೆಯಾದ ಈ ಶಾಸನವು ತುಳುನಾಡಿನ ಎರಡನೆಯ ಬಂಡೆಗಲ್ಲು ಶಾಸನವಾಗಿದೆ. ಮೊದಲ ಶಾಸನವು ಮೂಡುಕೊಣಜೆಯ ಇಟಲ ಶ್ರೀ ಸೋಮನಾಥೇಶ್ವರ ದೇವಾಲಯದ ಆವರಣದಲ್ಲಿರುವ ಬಂಡೆಯಲ್ಲಿ ಪತ್ತೆಯಾಗಿದ್ದು, ಇದರ ಕಾಲಮಾನ 12-13ನೆ ಶತಮಾನ. ವಿಶೇಷವೆಂದರೆ ಬೇರೆ ಬೇರೆ ಸ್ಥಳಗಳಲ್ಲಿರುವ (ದರೆಗುಡ್ಡೆ ಮತ್ತು ಮೂಡುಕೊಣಜೆ) ಇಟಲ ಶ್ರೀ ಸೋಮನಾಥೇಶ್ವರ ದೇವಾಲಯ ಎಂಬ ಒಂದೇ ಹೆಸರಿನ ಎರಡೂ ದೇವಾಲಯಗಳಲ್ಲಿ ಈ ಶಾಸನಗಳು ಪತ್ತೆಯಾಗಿರುವುದು. ಮಾತ್ರವಲ್ಲದೇ ಒಂದೇ ಕಾಲಮಾನಕ್ಕೆ (12-13ನೆ ಶತಮಾನ) ಒಳಪಡುವ ಈ ಎರಡೂ ಶಾಸನಗಳನ್ನು ಬಂಡೆಯಲ್ಲಿ ಕೊರೆದಿರುವುದು ತುಳು ಶಾಸನಗಳ ಅಧ್ಯಯನ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ (ಇತಿಹಾಸ ಮತ್ತು ಪುರಾತತ್ವ ಸಂಶೋಧಕರು, ಪ್ಲೀಚ್ ಇಂಡಿಯಾ ಫೌಂಡೇಶನ್-ಹೈದರಾಬಾದ್) ತಿಳಿಸಿರುವರು.

ದೇವಾಲಯ ವೈಶಿಷ್ಟ್ಯ: ಈ ದೇವಾಲಯದ ವಿಶೇಷತೆಯನ್ನು ತಿಳಿಸಿರುವ ಪ್ರವೀಣ್‌ಚಂದ್ರ ಜೈನ್ ಹಾಗೂ ಪರಿಸರ ಚಿಂತಕರಾದಂತಹ ವಜ್ರನಾಥ ಹೆಗ್ಗಡೆಯವರು, ದೇವಾಲಯದ ಎಡ ಭಾಗದಲ್ಲಿರುವ ಬಂಡೆಯ ಕೆಳಗೆ ಗಣಪತಿ ವಿಗ್ರಹವಿದ್ದು, ವರ್ಷಪೂರ್ತಿ ಈ ವಿಗ್ರಹಕ್ಕೆ ನೈಸರ್ಗಿಕ ನೀರಿನ ಅಭಿಷೇಕವಾಗುತ್ತದೆ (ಮೂಡುಕೊಣಜೆಯ ಇಟಲ ಶ್ರೀ ಸೋಮನಾಥೇಶ್ವರ ದೇವಾಲಯದಲ್ಲಿಯು ಸಹ ಇದನ್ನು ಕಾಣಬಹುದು). ಹಾಗೆಯೇ ದೇವಾಲಯದ ಆವರಣದಲ್ಲಿರುವ ಮೂರು ಜಲಕುಂಡಗಳಲ್ಲಿ ನೂರಾರು ವರ್ಷಗಳಿಂದ ನೀರು ಬರಿದಾಗಿದ್ದೇ ಇಲ್ಲ ಹಾಗೂ ಇದೊಂದು ಪ್ರಕೃತಿ ವಿಸ್ಮಯದ ತಾಣವೂ ಆಗಿದೆ ಎಂದು ಹೇಳಿರುವರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...

ತಾತ್ಕಾಲಿಕ ಸುಡುಮದ್ದು ಮಾರಾಟ ಪರವಾನಿಗೆ ಪಡೆಯಲು ಅರ್ಜಿ ಆಹ್ವಾನ

ಉಡುಪಿ, ಸೆ.19: ದೀಪಾವಳಿ ಹಬ್ಬದ ಸಂದರ್ಭದಲ್ಲಿ (ಅಕ್ಟೋಬರ್ 30 ರಿಂದ ನವೆಂಬರ್...

ಪವರ್ ಲಿಫ್ಟಿಂಗ್: ವೈಷ್ಣವಿ ಖಾರ್ವಿಗೆ ಬೆಳ್ಳಿ ಪದಕ

ಉಡುಪಿ, ಸೆ.19: ರಾ ಫಿಟ್ನೆಸ್ ಸಾಲಿಗ್ರಾಮ ಇವರ ವತಿಯಿಂದ ಸಾಲಿಗ್ರಾಮದ ಮೊಗವೀರ...
error: Content is protected !!