Wednesday, September 25, 2024
Wednesday, September 25, 2024

ಮಣಿಪಾಲ: ವನಮಹೋತ್ಸವ ಆಚರಣೆ

ಮಣಿಪಾಲ: ವನಮಹೋತ್ಸವ ಆಚರಣೆ

Date:

ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ನೇತೃತ್ವದಲ್ಲಿ ಅರಣ್ಯ ಇಲಾಖೆ, ಮತ್ತು ಚೌಡೇಶ್ವರಿ ಫ್ರೆಂಡ್ಸ್ ಶಾಂತಿನಗರ ಸಹಭಾಗಿತ್ವದಲ್ಲಿ ಮಣಿಪಾಲದ ಶಾಂತಿನಗರದ ರಸ್ತೆಯ ಸನಿಹಗಳಲ್ಲಿ ಶನಿವಾರ ಸಾಲು ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪವಲಯ ಅರಣ್ಯಾಧಿಕಾರಿ ಸುರೇಶ್ ಜಿ ಮಾತನಾಡುತ್ತಾ, ದೇಶದಲ್ಲಿರುವ ಜನಸಂಖ್ಯೆ ಅನುಗುಣವಾಗಿ 33 ಶೇಕಡರಷ್ಟು ಅರಣ್ಯವು ಉಸಿರಾಡಲು ಬೇಕಾಗಿದೆ. ಇವಾಗ ದೇಶದಲ್ಲಿ 17 ಶೇಖಡದಷ್ಟು ಅರಣ್ಯವು ಉಳಿದುಕೊಂಡಿದೆ. ಹೀಗೆ ಪರಿಸರ ನಾಶ ಮುಂದುವರೆದರೆ, ಮುಂದಿನ ದಿನಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿ, ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಬಹುದು. ಹಾಗಾಗಿ ಗಿಡಗಳು ನೆಡುವ ಮತ್ತು ಪರಿಸರ ರಕ್ಷಿಸುವ ಹೊಣೆಗಾರಿಕೆ ನಮ್ಮದಾಗಬೇಕೆಂದು ಹೇಳಿದರು. ಅತಿಥಿಯಾಗಿ ಉಪಸ್ಥಿತರಿದ್ದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಳಿಗೆಯ ಜನಸಂಪರ್ಕ ಅಧಿಕಾರಿ ರಾಘವೇಂದ್ರ ನಾಯಕ್ ಅಜೆಕಾರ್ ಮಾತನಾಡುತ್ತಾ, ಮುಂದಿನ ತಲೆಮಾರಿಗೆ ಸ್ವಚ್ಛ ಮತ್ತು ಹಸಿರು ಪರಿಸರವನ್ನು ಒದಗಿಸಬೇಕೆಂದು ಕರೆ ನೀಡಿದರು. ನಾಗರಿಕ ಸಮಿತಿಯ ಸಂಚಾಲಕ ಒಳಕಾಡು ನಿತ್ಯಾನಂದ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಅರಣ್ಯ ರಕ್ಷಕರಾದ ದೇವಾರಜ್ ಪಾಣ, ಕೇಶವ ಪೂಜಾರಿ, ಚೌಡೇಶ್ವರಿ ಫ್ರೆಂಡ್ಸ್ ಅಧ್ಯಕ್ಷ ವಿನಯ ಕುಂದರ್ ಹಾಗೂ ಸರ್ವ ಸದಸ್ಯರು, ರಾಘವೇಂದ್ರ ರಾವ್, ರತ್ನಾಕರ್ ಶೆಟ್ಟಿ, ಸತೀಶ್ ಪೂಜಾರಿ, ಸುಧಾಕರ್ ಶೆಟ್ಟಿ, ಮೋಹನ್ ಶಾಂತಿನಗರ, ನಾಗರಿಕ ಸಮಿತಿಯ ಕೃಷ್ಣಮೂರ್ತಿ ಸಾಮಗ, ವಿನೋದ ಸಾಮಗ, ಯುಕ್ತ ಸಾಮಗ, ಕೆ. ಬಾಲಗಂಗಾಧರ್ ರಾವ್, ಕಮಲಾಕ್ಷ ಪ್ರಭು, ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು. ವಿನಯಚಂದ್ರ ಸಾಸ್ತಾನ ಅವರು ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾನೂನು ಸಚಿವರನ್ನು ಭೇಟಿಯಾದ ಉಡುಪಿ ವಕೀಲರ ಸಂಘದ ನಿಯೋಗ

ಉಡುಪಿ, ಸೆ.24: ಉಡುಪಿ ವಕೀಲರ ಸಂಘದ ನಿಯೋಗವು ಕರ್ನಾಟಕ ರಾಜ್ಯದ ಕಾನೂನು...

ಕಾನೂನು ಹೋರಾಟದ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.24: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಎನ್‌ಎಸ್‌ಎಸ್ 218ರ ಹಾಗೂ ಪಿಸಿ...

ಕಾಪು: ನವದುರ್ಗಾ ಲೇಖನ ಯಜ್ಞದ ಸೇವಾ ಕಚೇರಿ ಉದ್ಘಾಟನೆ

ಕಾಪು, ಸೆ.24: ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯಲಿರುವ...
error: Content is protected !!