Sunday, February 23, 2025
Sunday, February 23, 2025

ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್- ಆರೋಗ್ಯ ಸುರಕ್ಷಾ ಯೋಜನೆ

ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್- ಆರೋಗ್ಯ ಸುರಕ್ಷಾ ಯೋಜನೆ

Date:

ಮಂಗಳೂರು: ಸಮಾಜಮುಖಿ ಸೇವಾಸಂಸ್ಥೆ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ (ರಿ) ಕೆಎಂಸಿ ಆಸ್ಪತ್ರೆ ಹಾಗೂ ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಲಿಮಿಟೆಡ್ ಸಹಯೋಗದೊಂದಿಗೆ ಸೇವಾಂಜಲಿ ಆರೋಗ್ಯ ಸುರಕ್ಷಾ ಯೋಜನೆಯನ್ನು ಜಾರಿಗೆ ತರುತ್ತಿದೆ.

ಪ್ರತಿ ಕುಟುಂಬಕ್ಕೆ ವಿಮಾ ಮೊತ್ತ 50000/- ರೂಪಾಯಿಗಳಾಗಿದ್ದು, ಒಳರೋಗಿ ಸೌಲಭ್ಯಗಳು, ಹೆರಿಗೆ ಸೌಲಭ್ಯಗಳು, ವೈಯಕ್ತಿಕ ಅಪಘಾತ ವಿಮೆ ಪ್ರತಿ ಸದಸ್ಯರಿಗೆ ರೂಪಾಯಿ 50000/- ರವರೆಗೆ ಸೌಲಭ್ಯ ಲಭ್ಯ ಇದೆ. ಪ್ರತಿ ಕುಟುಂಬದಲ್ಲಿ ಗರಿಷ್ಟ ಐದು ಜನ ಸದಸ್ಯರು ಇರಬಹುದಾಗಿದ್ದು, ವಿಮಾ ಪಾಲಿಸಿಗೆ 91 ದಿನದ ಹಸುಳೆಯಿಂದ 85 ವರ್ಷಗಳ ತನಕ ಹಿರಿಯ ಸದಸ್ಯರನ್ನು ಕೂಡ ನಮೂದಿಸಬಹುದಾಗಿದೆ.

ಈ ಪಾಲಿಸಿಯಡಿ ನಗದುರಹಿತ ಸೇವೆ ದೊರೆಯಲಿದೆ. ಡಯಾಲೀಸಿಸ್, ಕೀಮೋಥೆರಪಿ, ರೆಡಿಯೋಥೆರಪಿ, ಕಣ್ಣಿನಪೊರೆ, ಅಪಘಾತದಿಂದಾಗಿ ಹಲ್ಲಿನ ಚಿಕಿತ್ಸೆ, ಮೂತ್ರಪಿಂಡದ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆ ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿಯವರು ಕೆಲವೇ ಸಂಘಟನೆಗಳಿಗೆ ಈ ಪಾಲಿಸಿಯನ್ನು ನೀಡಿದ್ದು, ಅದರಲ್ಲಿ ಜನಪರ ಕೆಲಸ ಮಾಡುವ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಕೂಡ ಸೇರಿದೆ.

ಒಳರೋಗಿಗಳು ಜನರಲ್ ವಾರ್ಡಿನಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿ ಮತ್ತು ಕಾರ್ಕಳ, ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಪಾಲಿಸಿಯನ್ನು ಮಾಡಿಸಲು ಅರ್ಜಿಯೊಂದಿಗೆ, ಆಧಾರ ಕಾರ್ಡ್ ಕೂಡ ಅಗತ್ಯ ಇದೆ.

ಅರ್ಜಿಗಳು ದೊರೆಯುವ ಸ್ಥಳ: ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತ್ತು ಮಂಗಳೂರಿನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಜೆ 5.30 ರಿಂದ 7.30 ರ ತನಕ ದೊರೆಯಲಿದೆ. ಅರ್ಜಿಯನ್ನು ಪಡೆದು ಆಯಾಯ ಕೇಂದ್ರಗಳಲ್ಲಿ 10.12.2021 ರ ಒಳಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ 7795069777

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!