Friday, September 20, 2024
Friday, September 20, 2024

ಕೊಡ್ಗಿ ನಿಧನಕ್ಕೆ ಪುತ್ತಿಗೆ ಶ್ರೀ ಸಂತಾಪ

ಕೊಡ್ಗಿ ನಿಧನಕ್ಕೆ ಪುತ್ತಿಗೆ ಶ್ರೀ ಸಂತಾಪ

Date:

ಉಡುಪಿ: ಮಾಜಿ ಶಾಸಕ ಎ. ಜಿ. ಕೊಡ್ಗಿ ನಿಧನಕ್ಕೆ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.

ತಮ್ಮ‌ ಶೋಕ ಸಂದೇಶದಲ್ಲಿ, “ಎ.ಜಿ. ಕೊಡ್ಗಿಯವರು ಕೊನೆಯುಸಿರೆಳೆದಿರುವ ವಿಚಾರವನ್ನು ತಿಳಿದು ಸಂತಾಪವಾಯಿತು. ಶ್ರೀಯುತರು ಜನ್ಮತಃ ಕೃಷಿಕರಾಗಿ ವಿಶೇಷವಾಗಿ ತನ್ನ ಸಾಧನೆಯನ್ನು ಮೆರೆದಿರುವವರು.

ಸಹಕಾರಿ ಕ್ಷೇತ್ರದಲ್ಲೂ ತನ್ನ ಛಾಪನ್ನ
ಮೂಡಿಸಿರುವರು. ರಾಜಕೀಯ ರಂಗದಲ್ಲೂ ವಿವಿಧ
ಹುದ್ದೆಗಳನ್ನು ಅಲಂಕರಿಸಿ ಆ ಕ್ಷೇತ್ರದಲ್ಲಿ ವಿಶೇಷ
ಅಭಿವೃದ್ಧಿಯನ್ನೂ ತಂದಿರುವರು.

ನಿವೃತ್ತಿಯ ಜೀವನದಲ್ಲಿ ತಮ್ಮ ಊರು ಅಮಾಸೆಬೈಲು ಅಭಿವೃದ್ಧಿಗೆ ಬಹಳಷ್ಟು ಸೇವೆ ಇವರಿಂದ ಸಂದಿದೆ.

ಕೊಡ್ಗಿಯವರು ಧಾರ್ಮಿಕ ಮನೋಭಾವವನ್ನು
ಹೊಂದಿರುವವರಾಗಿದ್ದು ಉತ್ತಮ ಸಂಘಟಕರೂ ಆದ ಕಾರಣ ಉಡುಪಿಯ ಕೃಷ್ಣನ ಪರ್ಯಾಯ ಮಹೋತ್ಸವಗಳಲ್ಲಿ ಕುಂದಾಪುರದ ಕಡೆಯಿಂದ ವೈಭವದ ಹೊರೆಕಾಣಿಕೆಯನ್ನು ಸಮರ್ಪಿಸಿ ಶ್ರೀಕೃಷ್ಣನ ಪರ್ಯಾಯೋತ್ಸವಕ್ಕೆ ವಿಶೇಷ ಮೆರುಗನ್ನು ತರುವಲ್ಲಿ ಮಹತ್ವದ ಪಾತ್ರವನ್ನು ಸಲ್ಲಿಸಿರುವರು.

ನಮ್ಮ ಮೂರು ಪರ್ಯಾಯಗಳಲ್ಲೂ ಹೊರೆಕಾಣಿಕೆಯ ವಿಭಾಗದಲ್ಲಿ ವಿಶೇಷ ಸೇವೆ ಸಲ್ಲಿಸಿರುವುದನ್ನು ಈ
ಸಂದರ್ಭದಲ್ಲಿ ಅಭಿಮಾನದಿಂದ ಸ್ಮರಿಸುತ್ತಿದ್ದೇವೆ. ಇಂತಹ ಸಾಧಕ ಸಚ್ಚೇತನಕ್ಕೆ ಉಡುಪಿಯ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣರು ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ” ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!