Thursday, February 6, 2025
Thursday, February 6, 2025

ಜನಮನ್ನಣೆ ಗಳಿಸಿದ ಕರ್ಣಾಟಕ ಬ್ಯಾಂಕ್: ವಿಷ್ಣುಮೂರ್ತಿ ಉಪಾಧ್ಯ

ಜನಮನ್ನಣೆ ಗಳಿಸಿದ ಕರ್ಣಾಟಕ ಬ್ಯಾಂಕ್: ವಿಷ್ಣುಮೂರ್ತಿ ಉಪಾಧ್ಯ

Date:

ಕೋಟ, ಡಿ.28: ಕರ್ಣಾಟಕ ಬ್ಯಾಂಕ್ ಗ್ರಾಹಕಸ್ನೇಹಿ ಬ್ಯಾಂಕ್ ಆಗಿ ರೂಪುಗೊಂಡು ರಾಷ್ಟ್ರೀಯ ಮಟ್ಟದಲ್ಲೂ ಶಾಖೆ ಹೊಂದಿ ಜನಮನ್ನಣೆ ಗಳಿಸಿದ ಬ್ಯಾಂಕ್ ಆಗಿದೆ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಅನುವಂಶಿಕ ಆಡಳಿತ ಮೊಕ್ತೇಸರ ವಿಷ್ಣುಮೂರ್ತಿ ಉಪಾಧ್ಯ ಹೇಳಿದರು. ಕೋಟದ ಕರ್ಣಾಟಕ ಬ್ಯಾಂಕ್ 58ರ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾಪ್ರಭಂಧಕ ವಾದಿರಾಜ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಧಾರ್ಮಿಕ ವಿಧಿ ವಿಧಾನವನ್ನು ವೇ.ಮೂ ಶ್ರೀಧರ ಪುರಾಣಿಕ್ ನೆರವೇರಿಸಿದರು. ಕೋಟ ಶಾಖೆಯ ಸಿಬ್ಬಂದಿ ಶ್ರೀಮತಿ ನಾಗೇಶ್ ಮಯ್ಯ ಧಾರ್ಮಿಕ ವಿಧಿವಿಧಾನದ ಗಣಹೋಮದಲ್ಲಿ ಭಾಗಿಯಾದರು.

ಕರ್ಣಾಟಕ ಬ್ಯಾಂಕ್ ನಿವೃತ್ತ ಡಿ.ಜಿ.ಎಂ ಆನಂದರಾಮ ಅಡಿಗ, ಸಾನ್ವಿ ಟೆಕ್ನಾಲಜಿ ಇದರ ಚೇರ್ಮೆನ್ ಚಿನ್ಮಯ್ ಬಾಯರಿ, ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಮಯ್ಯ ಉಪಸ್ಥಿತರಿದ್ದರು. ಕೋಟ ಶಾಖೆಯ ಸಹಾಯಕ ಪ್ರಬಂಧಕಿ ಜ್ಯೋತಿ ಕುಮಾರಿ ಸ್ವಾಗತಿಸಿ, ಸಮಿತ್ ವಂದಿಸಿದರು. ವಿನಯ್ ಕಾಂಚನ್ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚಮಿ ಸಂಜೀವಿನಿ ಇಂಡಸ್ಟ್ರೀಸ್ ಉದ್ಘಾಟನೆ

ತಲ್ಲೂರು, ಫೆ.6: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಪಂಚಾಯತ್ ಉಡುಪಿ,...

ಮಕ್ಕಳು – ಶೋಷಣೆ

ಮಕ್ಕಳು, ತಾವು ವಾಸಿಸುವ ಪರಿಸ್ಥಿತಿ ಹಾಗೂ ಸುತ್ತಮುತ್ತಲಿನ ಪರಿಸರದಿಂದ, ಒಡನಾಟದಿಂದ ಬಲು...

ಶ್ರೀ ಕೃಷ್ಣ ಮಠ: ವಿವಿಧ ಕ್ಷೇತ್ರಗಳ ಮುಖ್ಯಸ್ಥರಿಗೆ ಸನ್ಮಾನ

ಉಡುಪಿ, ಫೆ.5: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ...

ಶಿವಪಾಡಿ ವೈಭವ ಆಮಂತ್ರಣ ಪತ್ರಿಕೆ ಬಿಡುಗಡೆ

ಮಣಿಪಾಲ, ಫೆ.5: ಫೆಬ್ರವರಿ 22 ರಿಂದ ಫೆಬ್ರವರಿ 26ರವರೆಗೆ ವೈಭವೋಪೂರಿತವಾಗಿ ನಡೆಯಲಿರುವ...
error: Content is protected !!