Saturday, October 5, 2024
Saturday, October 5, 2024

ಶರನ್ನವರಾತ್ರಿ ಚೈತನ್ಯ ಹೆಚ್ಚಿಸುವ ಉತ್ಸವ: ವಿಜಯ್ ಪೂಜಾರಿ

ಶರನ್ನವರಾತ್ರಿ ಚೈತನ್ಯ ಹೆಚ್ಚಿಸುವ ಉತ್ಸವ: ವಿಜಯ್ ಪೂಜಾರಿ

Date:

ಕೋಟ, ಅ.5: ಭಾರತೀಯ ನೆಲದಲ್ಲಿ ಶರನ್ನವರಾತ್ರಿ ಉತ್ಸವಗಳು ತನ್ನದೆ ಆದ ತಳಹದಿಯನ್ನು ಹೊಂದಿವೆ ಇಂತಹ ಉತ್ಸವಗಳು ಹಿಂದೂ ಧರ್ಮದ ತಳಹದಿಗೆ ಭದ್ರ ಬುನಾದಿಯಾಗಿದೆ ಎಂದು ಸಾಸ್ತಾನ ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ಪೂಜಾರಿ ಹೇಳಿದರು. ಪಾಂಡೇಶ್ವರದ ಕಳಿಬೈಲು ಶ್ರೀ ತುಳಸಿ ಅಮ್ಮ ಹಾಗೂ ಕೊರಗಜ್ಜ ಸಾನಿಧ್ಯ ಪರಿವಾರ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಹಮ್ಮಕೊಂಡ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಗುಲದ ಮೊಕ್ತೇಸರ ಎಂ.ಸಿ ಚಂದ್ರಶೇಖರ್, ದೇಗುಲದ ಮಾರ್ಗದರ್ಶಕ ಶಶಿಧರ್ ರಾವ್, ಸಾಮಾಜಿಕ ಚಿಂತಕರಾದ ಸುಧೀರ್ ಶೆಟ್ಟಿ ಕೆದೂರು, ಕೀರ್ತಿಶ್ ಪೂಜಾರಿ, ಬಾಲಾಜಿ ಭಜನಾ ಸಂಘದ ಅಧ್ಯಕ್ಷ ವಿಜಯ ಆಚಾರ್, ಸುಬ್ರಹ್ಮಣ್ಯ ಕಿರಿಮಂಜೇಶ್ವರ, ದೇಗುಲ ಪಾಕತಜ್ಞ ಸುದರ್ಶನ ಪೂಜಾರಿ, ಶಾರದೋತ್ಸವ ಸಮಿತಿ ಕೋಶಾಧಿಕಾರಿ ವಿಶ್ವನಾಥ ಆಚಾರ್, ಸಹ ಅರ್ಚಕ ರಮೇಶ್ ಸಾಸ್ತಾನ ಮತ್ತಿತರರು ಉಪಸ್ಥಿತರಿದ್ದರು. ದೇಗುಲದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ನಂತರ ಬಾಲಾಜಿ ಭಜನಾ ತಂಡ ಪಾಂಡೇಶ್ವರ ಇವರಿಂದ ಕುಣಿತ ಭಜನೆ ನಡೆಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅ.9: ಮಣಿಪಾಲದಲ್ಲಿ ಮಿನಿ ಉದ್ಯೋಗ ಮೇಳ

ಉಡುಪಿ, ಅ.5: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಅಕ್ಟೋಬರ್...

ಉಚ್ಚಿಲ ದಸರಾ- ಚಿತ್ರ ಬಿಡಿಸುವ ಸ್ಪರ್ಧೆ

ಉಚ್ಚಿಲ, ಅ.5: ಕಳೆದ 3 ವರ್ಷಗಳಿಂದ ನಿರಂತರವಾಗಿ ಉಚ್ಚಿಲ ದಸರಾ ಮಹೋತ್ಸವ...

ಬ್ರಹ್ಮಗಿರಿ: ವನಮಹೋತ್ಸವ ಮತ್ತು ಸ್ವಚ್ಛತಾ ಕಾರ್ಯಕ್ರಮ

ಉಡುಪಿ, ಅ.5: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಮಹಿಳಾ...

ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ

ಉಡುಪಿ, ಅ.5: ಪ್ರಸಕ್ತ ಸಾಲಿನಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕುಲರ್ ಡಿಸ್ಟೊಫಿ, ಪಾರ್ಕಿನ್ಸನ್...
error: Content is protected !!