Sunday, September 8, 2024
Sunday, September 8, 2024

ಜ್ಞಾನಸುಧಾ: ಜೆ.ಇ.ಇ. ಮೈನ್ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಜ್ಞಾನಸುಧಾ: ಜೆ.ಇ.ಇ. ಮೈನ್ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Date:

ಕಾರ್ಕಳ, ಫೆ.18: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ವಿಭಾಗಕ್ಕೆ ಎನ್.ಟಿ.ಎ ನಡೆಸುವ ಜೆಇಇ ಮೈನ್ಸ್ ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ 97ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಜ್ಞಾನಸುಧಾದ 35 ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ 2.89 ಲಕ್ಷ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಉಡುಪಿ ಜಿಲ್ಲೆಯಲ್ಲೇ 99.7ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಎಲ್ಲಾ 3 ವಿದ್ಯಾರ್ಥಿಗಳು ಜ್ಞಾನಸುಧಾದವರಾಗಿದ್ದಾರೆ ಎಂಬುದು ಶ್ಲಾಘನೀಯ ಸಂಗತಿ. 99.7ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಮೂವರು ವಿದ್ಯಾರ್ಥಿಗಳಾದ ಪ್ರಿಯಾಂಶ್ ಎಸ್.ಯು (99.7915 ಪರ್ಸಂಟೈಲ್), ಬಿಪಿನ್ ಜೈನ್ ಬಿ.ಎಂ. (99.7597 ಪರ್ಸಂಟೈಲ್,), ಚಿರಂತನ ಜೆ.ಎ. (99.7033 ಪರ್ಸಂಟೈಲ್) ಇವರಿಗೆ ತಲಾ 50 ಸಾವಿರ ರೂಪಾಯಿಯನ್ನು, 99 ರಿಂದ 99.7 ಪರ್ಸಂಟೈಲ್ ಗಳಿಸಿದ ನಾಲ್ವರು ವಿದ್ಯಾರ್ಥಿಗಳಾದ ನಿಮೇಶ್ ಆರ್. ಆಚಾರ್ಯ (99.3876 ಪರ್ಸಂಟೈಲ್), ಕ್ಷೀರಾಜ್.ಎಸ್ ಆಚಾರ್ಯ (99.2864 ಪರ್ಸಂಟೈಲ್), ಶ್ರೀದ ಕಾಮತ್ (99.1100 ಪರ್ಸಂಟೈಲ್) ಹಾಗೂ ರಿಷಿತ್ ವೇಣು ಬಿಳಿಮಗ್ಗ (99.0854 ಪರ್ಸಂಟೈಲ್) ಇವರಿಗೆ ತಲಾ 25 ಸಾವಿರ ರೂಪಾಯಿಯೊಂದಿಗೆ ಸನ್ಮಾನಿಸಲಾಯಿತು.

ಜೊತೆಗೆ 98 ರಿಂದ 99 ಪರ್ಸಂಟೈಲ್ ಗಳಿಸಿದ 11 ವಿದ್ಯಾರ್ಥಿಗಳಾದ ಕ್ಷಮಾ ಜಯಚಂದ್ (98.9824 ಪರ್ಸಂಟೈಲ್), ಎಂ.ಕೆ.ಮದನ್ ಗೌಡ (98.8580 ಪರ್ಸಂಟೈಲ್), ಚಿನ್ಮಯ್ ಎಸ್. ದೇಶಪಾಂಡೆ (98.8319 ಪರ್ಸಂಟೈಲ್), ದೇವಾಂಶ್ ದೀಪಕ್ ಬಿ. (98.5450 ಪರ್ಸಂಟೈಲ್), ಗಜೇಂದ್ರ ಜಿ. (98.5094 ಪರ್ಸಂಟೈಲ್), ರಿಯಾನ್ ಡಿ’ಸೋಜ (98.4799 ಪರ್ಸಂಟೈಲ್), ಸಮಿತ್ ಕೃಷ್ಣ. ಯು (98.3983 ಪರ್ಸಂಟೈಲ್), ಪ್ರಥಮ್ ಕುಮಾರ್ ಶೆಟ್ಟಿ (98.3920 ಪರ್ಸಂಟೈಲ್), ಖುಷಿ ಎಸ್ ಹೆಗ್ಡೆ (98.2207 ಪರ್ಸಂಟೈಲ್), ಆಕಾಂಕ್ಷ್ ಎನ್ ಮಲ್ಯ (98.1377 ಪರ್ಸಂಟೈಲ್), ಸಾತ್ವಿಕ್ ಜಿ. ಜೆ (98.1290 ಪರ್ಸಂಟೈಲ್) ಇವರಿಗೆ ತಲಾ 2 ಸಾವಿರ ರೂಪಾಯಿಯೊಂದಿಗೆ ಪುರಸ್ಕರಿಸಲಾಯಿತು. ಹಾಗೆಯೇ 97ರಿಂದ 98 ಪರ್ಸಂಟೈಲ್ ಗಳಿಸಿದ 17 ವಿದ್ಯಾರ್ಥಿಗಳನ್ನು ತಲಾ 1 ಸಾವಿರ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಜ್ಞಾನಸುಧಾದ 408 ವಿದ್ಯಾರ್ಥಿಗಳು ಜೆ.ಇ.ಇ ಮೈನ್ 2024 ರ ಮೊದಲ ಹಂತದ ಪರೀಕ್ಷೆ ಬರೆದಿದ್ದು 159 ವಿದ್ಯಾರ್ಥಿಗಳಿಗೆ 90 ಕ್ಕಿಂತ ಅಧಿಕ ಪರ್ಸಂಟೈಲ್, 78 ವಿದ್ಯಾರ್ಥಿಗಳಿಗೆ 95ಕ್ಕಿಂತ ಅಧಿಕ ಪರ್ಸಂಟೈಲ್, 58 ವಿದ್ಯಾರ್ಥಿಗಳಿಗೆ 96ಕ್ಕಿಂತ ಅಧಿಕ ಪರ್ಸಂಟೈಲ್, 35 ವಿದ್ಯಾರ್ಥಿಗಳಿಗೆ 97ಕ್ಕಿಂತ ಅಧಿಕ ಪರ್ಸಂಟೈಲ್, 18 ವಿದ್ಯಾರ್ಥಿಗಳಿಗೆ 98 ಕ್ಕಿಂತ ಅಧಿಕ ಪರ್ಸಂಟೈಲ್, 7 ವಿದ್ಯಾರ್ಥಿಗಳು 99 ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದಿರುತ್ತಾರೆ.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿ ಅನಿಲ್ ಕುಮಾರ್ ಜೈನ್, ಡಾ. ಮೋಹನ್ ಶೆಣೈ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಪಿ.ಯು ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲ ಸಾಹಿತ್ಯ, ಉಡುಪಿ ಜ್ಞಾನಸುಧಾ ಪಿ.ಯು ಕಾಲೇಜು ಉಪಪ್ರಾಂಶುಪಾಲ ಸಂತೋಷ್, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಂಯೋಜಕರಾದ ಸಂದೀಪ, ಕೌನ್ಸಿಲರ್ ಡಾ. ಪ್ರಸನ್ನ ಹೆಗ್ಡೆ, ಪಿ.ಆರ್.ಓ. ಜ್ಯೋತಿ ಪದ್ಮನಾಭ್ ಬಂಡಿ, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ ಉಷಾ ರಾವ್ ಯು., ನ್ಯೂಸ್ ಕಾರ್ಕಳ ಸಂಪಾದಕ ರಾಮಚಂದ್ರ ಬರೆಪ್ಪಾಡಿ, ಹಿತೈಷಿಗಳಾದ ತ್ರಿವಿಕ್ರಮ ಕಿಣಿ, ದೇವೇಂದ್ರ ನಾಯಕ್ ಹಾಗೂ ಎಲ್ಲಾ ವಿಭಾಗದ
ಮುಖ್ಯಸ್ಥರು ಹಾಗೂ ಸಾಧಕ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದೇಶಕ್ಕೆ ಶಿಕ್ಷಕರ ಸೇವೆ ಮಹತ್ವದ್ದು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಸೆ.7: ಶಿಕ್ಷಕರು ರಾಷ್ಟ್ರಕ್ಕೆ ಅತ್ಯಂತ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಇಂದಿನ...

ಸುಳ್ಳು ದಾಖಲೆ ಸೃಷ್ಟಿ: ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್ ಸೇವೆಯಿಂದ ಬಿಡುಗಡೆ

ನವದೆಹಲಿ, ಸೆ.7: 2023 ರ ಬ್ಯಾಚ್ ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್...

18ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ

ಬೆಳ್ಮಣ್, ಸೆ.7: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಮದ್ಯ ಮಾರಾಟ ನಿಷೇಧ

ಉಡುಪಿ, ಸೆ.6: ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಹೆಚ್ಚಿನ ಸ್ಥಳಗಳಲ್ಲಿ ಗಣೇಶ...
error: Content is protected !!