Monday, February 24, 2025
Monday, February 24, 2025

ಕೆ.ಎಂ.ಸಿ ಮಣಿಪಾಲದ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕೇಂದ್ರಕ್ಕೆ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಮಾನ್ಯತೆ

ಕೆ.ಎಂ.ಸಿ ಮಣಿಪಾಲದ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕೇಂದ್ರಕ್ಕೆ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಮಾನ್ಯತೆ

Date:

ಮುಂಬೈ/ಮಣಿಪಾಲ, ಅ.22: ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಸುಧಾರಿತ ಜಾಗತಿಕ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಶ್ರಮಿಸುತ್ತಿರುವ ಪ್ರತಿಷ್ಠಿತ ಮರ್ಕ್‌ ಫೌಂಡೇಶನ್‌ ಸಂಸ್ಥೆಯು ಮಣಿಪಾಲ ಕೆಎಂಸಿಯ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕೇಂದ್ರ [ಕ್ಲಿನಿಕಲ್‌ ಎಂಬ್ರಿಯಾಲಜಿ ಸೆಂಟರ್‌] ಕ್ಕೆ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಮಾನ್ಯತೆ ನೀಡಿದೆ. ಸೌಲಭ್ಯವಂಚಿತ ಸಮುದಾಯಗಳಿಗೆ ಆರೋಗ್ಯಸೇವೆಯನ್ನು ಹೆಚ್ಚಿಸುವುದರಲ್ಲಿ ಮರ್ಕ್‌ ಫೌಂಡೇಶನ್‌ ಬದ್ಧವಾಗಿದೆ. ‘ಮರ್ಕ್‌-ಮಾತೆಗಿಂತ ಮಿಗಿಲು’ [ಮರ್ಕ್‌ ಮೋರ್‌ ದೇನ್‌ ಎ ಮದರ್‌] ಎಂಬ ಪ್ರಮುಖ ಆರಂಭಿಕ ಧ್ಯೇಯದೊಂದಿಗೆ ಅನೇಕ ಆಫ್ರಿಕನ್‌ ಸಂಸ್ಥೆಗಳೊಂದಿಗೆ, ಒಡಂಬಡಿಕೆಯನ್ನು ಮಾಡಿಕೊಂಡಿದೆ. ಸಾಕಷ್ಟು ಸೌಲಭ್ಯಗಳಿಲ್ಲದ ಪ್ರದೇಶಗಳಲ್ಲಿ ಸುಧಾರಿತ ಫಲವಂತಿಕೆಯ ಆರೈಕೆಯ ಅಗತ್ಯದ ಕಡೆ ಇದು ಗಮನಹರಿಸುತ್ತಿದೆ. ಸಾಮರ್ಥ್ಯ-ನಿರ್ಮಾಣದ ಯೋಜನೆಗಳಲ್ಲಿ ಮಣಿಪಾಲ ಕೆಎಂಸಿಯಲ್ಲಿರುವ ಶುಶ್ರೂಷಾ ಭ್ರೂಣಶಾಸ್ತ್ರ [ಕ್ಲಿನಿಕಲ್‌ ಎಂಬ್ರಿಯಾಲಜಿ] ಕೇಂದ್ರವು ಪ್ರಮುಖ ಜಾಗತಿಕ ಮಟ್ಟದ ಸಹಭಾಗಿಯಾಗಿದೆ. ಮರ್ಕ್‌ ಪೌಂಡೇಶನ್‌ ಮತ್ತು ಮಣಿಪಾಲದ ಕೆಎಂಸಿ ಸಂಯುಕ್ತ ಸಹಕಾರದಿಂದಾಗಿ 27 ದೇಶಗಳಲ್ಲಿನ ಸುಮಾರು ನೂರು ವೈದ್ಯರು ಮತ್ತು ವಿಜ್ಞಾನಿಗಳು ಉನ್ನತ ಶ್ರೇಣಿಯ ಭ್ರೂಣಶಾಸ್ತ್ರ ತರಬೇತಿಯನ್ನು ಮಣಿಪಾಲದಲ್ಲಿ ಪಡೆದಿದ್ದಾರೆ, ಈ ತರಬೇತಿ ಪಡೆದ ವೃತ್ತಿಪರರು ಅವರವರ ದೇಶಗಳಲ್ಲಿ ಬಂಜೆತನದ ಕಾಳಜಿಯ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ.

ಈ ಮಾನ್ಯತೆಯನ್ನು ಮುಂಬೈಯಲ್ಲಿ ಜರಗಿದ ಮರ್ಕ್‌-ಆಫ್ರಿಕಾ-ಏಷ್ಯಾ ಪ್ರಸಿದ್ಧ ಸಮಾವೇಶದಲ್ಲಿ ಪ್ರದಾನ ಮಾಡಲಾಯಿತು. ಮರ್ಕ್‌ ಫೌಂಡೇಶನ್‌ನ ಸಿಇಓ ಸೆನೆಟರ್‌ ಡಾ. ರಾಶ ಕಲೇಜ್‌, ಇ-ಮರ್ಕ್‌-ಕೆಜಿಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಪ್ರೊ. ಡಾ. ಫ್ರ್ಯಾಂಕ್‌ ಸ್ಟ್ಯಾಂಜನ್‌ಬರ್ಗ್‌-ಹ್ಯಾವರ್‌ಕ್ಯಾಂಪ್‌, 14 ಆಫ್ರಿಕನ್‌ ದೇಶಗಳ ಪ್ರಥಮ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಾಹೆಯ ಪ್ರೊ ವೆ,ಸ್‌ ಛಾನ್ಸಲರ್‌ ಡಾ. ಶರತ್‌ ರಾವ್‌, ಮಣಿಪಾಲ ಕೆಎಂಸಿಯ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕಾರ್ಯಸೂಚಿಯ ಮುಖ್ಯಸ್ಥ ಡಾ. ಸತೀಶ್‌ ಅಡಿಗ ಈ ಪುರಸ್ಕಾರವನ್ನು ಸ್ವೀಕರಿಸಿದರು. ಈ ಮೂಲಕ ಏಷ್ಯಾದ ಪ್ರಮುಖ ಐವಿಎಫ್‌ ತರಬೇತಿ ಕೇಂದ್ರವಾಗಿರುವ ಮಣಿಪಾಲ ಕೆಎಂಸಿಯ ಕ್ಲಿನಿಕಲ್‌ ಎಂಬ್ರಿಯಾಲಜಿ ಕೇಂದ್ರವು ದಾಖಲೆಯನ್ನು ಮಾಡಿದೆ. ಈ ಕೇಂದ್ರವು ಜಗತ್ತಿನಲ್ಲಿ ಬಂಜೆತನದಲ್ಲಿ ಬಳಲುತ್ತಿರುವ ದಂಪತಿಗಳಿಗೆ ನೆರವಾಗುವುದಕ್ಕಾಗಿ ನೂರಾರು ವೈದ್ಯರು ಮತ್ತುವಿಜ್ಞಾನಿಗಳನ್ನು ಸಜ್ಜುಗೊಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!