Sunday, September 22, 2024
Sunday, September 22, 2024

ಗುಂಡ್ಮಿಯಲ್ಲಿ ರಂಗ ಸಂವಾದ

ಗುಂಡ್ಮಿಯಲ್ಲಿ ರಂಗ ಸಂವಾದ

Date:

ಕೋಟ: ಯಕ್ಷಗಾನ ಮೊದಲಿನಂತೆ ಉಳಿಯಬೇಕಾದರೆ ಸರಕಾರ ಅದನ್ನು ಎತ್ತಿ ಹಿಡಿಯಬೇಕು. ಬೇಕಾಗುವಂತಹ ವಾತಾವರಣವನ್ನು ಪೂರಕ ಸ್ಥಿತಿ- ಗತಿಯನ್ನು ಸರಕಾರ ಒದಗಿಸಬೇಕು ಎಂದು ಸಾಂಪ್ರದಾಯಿಕ ಯಕ್ಷಗಾನ ರಂಗದ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ ಹೇಳಿದರು.

ರಸರಂಗ ಕೋಟವು ಸಮಸ್ತರು ಬೆಂಗಳೂರು ಇದರ ಸಹಯೋಗದಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಸಹಕಾರದಲ್ಲಿ ಸದಾನಂದ ರಂಗಮಂಟಪ ಗುಂಡ್ಮಿಯಲ್ಲಿ ನಡೆದ ರಂಗ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಿದ್ದರು.

ಸಂಪ್ರದಾಯ ಬಲ್ಲ ಹಳೆಯ ಕಲಾವಿದರನ್ನು ಕಲೆಹಾಕಿ, ಉಡುಪಿ ಜಿಲ್ಲೆಯ ಯಕ್ಷಗಾನದ ಕುರಿತಾದ ಯೋಜನೆ- ಯೋಚನೆಗಳನ್ನ ರೂಪಿಸಿಕೊಂಡು ಅದನ್ನು ಅನುಷ್ಠಾನಕ್ಕೆ ತಂದರೆ ಈ ಭಾಗದ ಪಾರಂಪರಿಕ ಕಲೆ ಉಳಿಯುತ್ತದೆ ಎಂದರು.

ಐರೋಡಿಯವರು ಸಾಂಪ್ರದಾಯಿಕ ಯಕ್ಷಗಾನ ಹಾಗೂ ಯಕ್ಷಗಾನದ ಪಾರಂಪರಿಕ ಶೈಲಿಯ ಓರ್ವ ಶ್ರೇಷ್ಟ ಕಲಾವಿದ. ಇಂತಹ ಕಲೆ ಮುಂದೆಯೂ ಉಳಿಯಬೇಕಾದರೆ ಅದನ್ನು ಕಲಿಸುವ – ಕಲಿಯುವ ಕೆಲಸವಾಗಬೇಕು.

ಅಂತಹ ಆಸಕ್ತ ಕಲಾಕೇಂದ್ರಗಳಿಗೆ ಸರಕಾರದ ಪ್ರೋತ್ಸಾಹಬೇಕು ಎಂದರಲ್ಲದೆ ಸರಕಾರವು ಆ ಉದ್ದೇಶಕ್ಕಾಗಿಯೇ ಕಲಾಕೇಂದ್ರಗಳನ್ನ ಪ್ರೋತ್ಸಾಹಿಸಬೇಕು ಎಂದು ಅಂತರರಾಷ್ಟ್ರ‍ೀಯ ಖ್ಯಾತಿಯ ರಂಗನಿರ್ದೇಶಕರು ಗೋಷ್ಠಿಯ ಅಧ್ಯಕ್ಷ ಗೋಪಾಲಕೃಷ್ಣ ನಾಯರಿಯವರು ಹೇಳಿದರು.

ಕಾರ್ಕಳದಲ್ಲಿ ಮುಂದೆ ಬರಲಿರುವ ಯಕ್ಷರಂಗಾಯಣ ಈ ಭಾಗದ ಪ್ರಾದೇಶಿಕ ಯಕ್ಷಗಾನಕ್ಕೆ ಹೆಚ್ಚಿನ ಮನ್ಮಣೆಯನ್ನು ನೀಡಲಿ, ಅಲ್ಲಿ ಸಾಂಪ್ರದಾಯದ ಯಕ್ಷರೆಪರ್ಟ ಅರಂಭವಾಗಲಿ ಎಂದು ಸಂವಾದಕರಲ್ಲಿ ಒಬ್ಬರಾದ ಸುರೇಂದ್ರ ಪಣಿಯೂರು ಅಭಿಪ್ರಾಯಪಟ್ಟರು.

ಸಂವಾದಕ ಮಿತ್ರರಾಗಿ ಸದಾನಂದ ಪಾಟೀಲ್, ಸುರೇಂದ್ರ ಪಣಿಯೂರು, ಗಣೇಶ್ ಜಿ.ಚಲ್ಲೆಮಕ್ಕಿ, ಪ್ರೊ. ಸಂಜೀವ ಗುಂಡ್ಮಿ ಸಹಕರಿಸಿದರು.

ಕಲಾಕೇಂದ್ರದ ಸಂಚಾಲಕರಾದ ರಾಜಶೇಖರ ಹೆಬ್ಬಾರ್, ರಸರಂಗದ ಅಧ್ಯಕ್ಷೆ ಸುಧಾ ಮಣೂರು ಉಪಸ್ಥಿತರಿದ್ದರು. ರಾಮಚಂದ್ರ ಐತಾಳ ಗುಂಡ್ಮಿ ಗೋಷ್ಠಿಯನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಜ್ಯದ ದೇವಾಲಯಗಳಲ್ಲಿ ಮೊದಲಿನಿಂದಲೂ ಪರಿಶುದ್ಧ ಪ್ರಸಾದ

ಬೆಂಗಳೂರು, ಸೆ. 21: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಸಾದ,...

ದೇವಾಲಯಗಳಲ್ಲಿ ನಂದಿನಿ ತುಪ್ಪ ಬಳಸಲು ಸೂಚನೆ

ಬೆಂಗಳೂರು, ಸೆ. 21: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ...

ಗಿಡ ನೆಡುವ ಕಾರ್ಯಕ್ರಮ

ಉಡುಪಿ, ಸೆ.21: ಸ್ವಚತಾ ಹೀ ಅಂದೋಲನ ಪಾಕ್ಷಿಕ-2024 ಆಚರಣೆಯ ಅಂಗವಾಗಿ ನಮ್ಮ...

ವಿಶ್ವ ಶಾಂತಿಗಾಗಿ ಮಾನವೀಯತೆಯ ನಡಿಗೆ ಜಾಥಾ

ಉಡುಪಿ, ಸೆ.21: ಭಾರತೀಯ ರೆಡ್‌ಕ್ರಾಸ್ ರಾಜ್ಯ ಶಾಖೆ ಮತ್ತು ಉಡುಪಿ ಜಿಲ್ಲಾ...
error: Content is protected !!