Friday, September 20, 2024
Friday, September 20, 2024

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್: ಅದ್ದೂರಿಯಾಗಿ ಉದ್ಘಾಟಣೆಗೊಂಡ ಪೊಲ್ಕಿ ಜ್ಯುವೆಲ್ಲರಿ ಶೋ

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್: ಅದ್ದೂರಿಯಾಗಿ ಉದ್ಘಾಟಣೆಗೊಂಡ ಪೊಲ್ಕಿ ಜ್ಯುವೆಲ್ಲರಿ ಶೋ

Date:

ಉಡುಪಿ, ಜೂನ್ 17: ನಗರದ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಉಡುಪಿ ಮಳಿಗೆಯಲ್ಲಿ ಜೂನ್ 17 ರಿಂದ 25 ರವರೆಗೆ ಮೊತ್ತ ಮೊದಲ ಬಾರಿಗೆ ಸುವರ್ಣ ಯುಗದ ನೆನಪುಗಳನ್ನು ಪುನರುಜ್ಜೀವಗೊಳಿಸುವ ಸಂಪ್ರದಾಯ, ಸಂಸ್ಕೃತಿ ಮತ್ತು ವಿಂಟೇಜ್ ಜೀವನಶೈಲಿಯಿಂದ ಶ್ರೀಮಂತ ಪರಂಪರೆಯನ್ನು ಗುರುತಿಸಲ್ಪಟ್ಟಿರುವ ಭಾರತೀಯ ಮೂಲದ ಆಭರಣಗಳ ವಿನ್ಯಾಸಗಳನ್ನು ಅನುಭವಿಸುವ ‘ವಿರಾಝ್ ಹೆರಿಟೇಜ್ ಪೊಲ್ಕಿ ಜ್ಯುವೆಲ್ಲರಿ ಶೋ’ ಅದ್ದೂರಿಯಾಗಿ ಉದ್ಘಾಟನೆಗೊಂಡಿತು.

ನೆಕ್ಲೇಸ್, ಕಿವಿಯ ಓಲೆ, ಲಾಕೆಟ್, ಉಂಗುರ ಮತ್ತು ಬಳೆಗಳ ಬ್ರಹತ್ ಸಂಗ್ರಹಗಳನ್ನು ಪ್ರದರ್ಶಿಸಲಾಗುತ್ತಿದೆ. ಉಡುಪಿ ಸೌಂದರ್ಯ ತಜ್ಞೆಯರ ಜಿಲ್ಲಾಧ್ಯಕ್ಷೆ ಯಡ್ನ ಜತನ್ನ ವೆಸ್ಟರ್ನ್ ಕಲೆಕ್ಷನ್ ನ್ನು ಅನಾವರಣಗೊಳಿಸಿ ಗ್ರಾಹಕ ಸೇವೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಉದ್ಯಮಿ ಸುಶ್ಮಿತಾ ಹೆಗ್ಡೆ ಬ್ರೈಡಲ್ ಕಲೆಕ್ಷನ್ ನ್ನು ಅನಾವರಣಗೊಳಿಸಿ ಚಿನ್ನಾಭರಣಗಳ ವಿನ್ಯಾಸ ಮತ್ತು ಗುಣಮಟ್ಟ ಗಮನಾರ್ಹವಾಗಿದೆ ಎಂದರು. ಉದ್ಯಮಿ ಯಾಸ್ಮಿನ್ ಫೀರೊಝ್ ತೋಟ ಫ್ಲೋರಲ್ ಕಲೆಕ್ಷನ್ ನ್ನು ಅನಾವರಣಗೊಳಿಸಿ ಪೊಲ್ಕಿ ಆಭರಣದ ಸಂಗ್ರಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರಾವಳಿ ಬೆಡಗಿ ಪ್ರಶಸ್ತಿಗೆ ಭಾಜನರಾದ ವಿದ್ಯಾ ಸರಸ್ವತಿ ಉಪಸ್ಥಿತರಿದ್ದರು.

ಖರೀದಿಸುವ ಪೊಲ್ಕಿ ಆಭರಣಗಳಿಗೆ IGI ಪ್ರಮಾಣ ಪತ್ರ ನೀಡಲಾಗುವುದು, ಪೊಲ್ಕಿ ಹರಳುಗಳಿಗೆ 100 ಶೇ ಮರಳಿ ಖರೀದಿಸುವ ಗ್ಯಾರಂಟಿ, ಬಾಳಿಕೆಯುದ್ದಕ್ಕೂ ಉಚಿತ ನಿರ್ವಹಣೆ, ಒಂದು ವರ್ಷದ ಉಚಿತ ವಿಮೆ ದೊರೆಯಲಿದೆ. ವಿಶೇಷ ಕೊಡುಗೆಯಾಗಿ ಬೆಳ್ಳಿ ನಾಣ್ಯಗಳು ಉಚಿತವಾಗಿ ಪಡೆಯಬಹುದು ಎಂದು ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಹೇಳಿದರು. ನಿತ್ಯಾನಂದ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ವಿಘ್ನೇಶ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Advertisement

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...

ಶಿಕ್ಷಕರು ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು: ಡಾ.ಅಶೋಕ ಕಾಮತ್

ಉಡುಪಿ, ಸೆ.20: ರೋಟರಿ ಉಡುಪಿ ಮತ್ತು ಇನ್ನರ್ ವೀಲ್ ಕ್ಲಬ್ ಅವರ...

ತಿರುಪತಿ ಪ್ರಸಾದಕ್ಕೆ ಅಪಚಾರ- ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಸೆ.20: ಆರಾಧ್ಯ ಮೂರ್ತಿ ಶ್ರೀ ತಿರುಪತಿ ತಿಮ್ಮಪ್ಪನ ಪವಿತ್ರ ಪ್ರಸಾದಕ್ಕೆ...

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...
error: Content is protected !!