Home ಸುದ್ಧಿಗಳು ಪ್ರಾದೇಶಿಕ ಉಡುಪಿ: ಮತಗಟ್ಟೆಗೆ ಬಂದು ಮತ ಚಲಾಯಿಸಲು ಉತ್ಸಾಹ ತೋರಿದ ಜಿಲ್ಲೆಯ ಹಿರಿಯ ನಾಗರೀಕರು, ವಿಕಲಚೇತನರು

ಉಡುಪಿ: ಮತಗಟ್ಟೆಗೆ ಬಂದು ಮತ ಚಲಾಯಿಸಲು ಉತ್ಸಾಹ ತೋರಿದ ಜಿಲ್ಲೆಯ ಹಿರಿಯ ನಾಗರೀಕರು, ವಿಕಲಚೇತನರು

707
0

ಉಡುಪಿ, ಏ. 24: ರಾಜ್ಯದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ, ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ವಿಕಲಚೇತನರಿಗೆ ಮತ್ತು 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನಾನುಕೂಲವಾದಲ್ಲಿ, ಮನೆಯಿಂದಲೇ ಮತ ಚಲಾಯಿಸಲು ವಿಶೇಷ ಸೌಲಭ್ಯ ಒದಗಿಸಿದೆ.ಆದರೆ ಜಿಲ್ಲೆಯ ಬಹುತೇಕ ವಿಕಲಚೇತನರು ಮತ್ತು ಹಿರಿಯ ನಾಗರೀಕರು ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವನ್ನು ಬಳಸಿಕೊಳ್ಳದೇ, ಮತದಾನದ ದಿನದಂದು ಮತಗಟ್ಟೆಗೆ ಖುದ್ದು ತೆರಳಿ ತಮ್ಮ ಮತದಾನದ ಹಕ್ಕು ಚಲಾಯಿಸಲು ಉತ್ಸಾಹ ತೋರಿದ್ದಾರೆ.

ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ, ಬೈಂದೂರು ವಿಧಾನಸಭಾ ಕ್ಷೇತ್ರದ 5864 ಹಿರಿಯ ನಾಗರೀಕರಲ್ಲಿ 4878 ಮಂದಿಗೆ 12ಡಿ ಫಾರಂ ನ್ನು ವಿತರಿಸಿದ್ದು, ಕುಂದಾಪುರದಲ್ಲಿ 6207 ಮಂದಿಯಲ್ಲಿ 4581, ಉಡುಪಿಯ 7823 ರಲ್ಲಿ 5189, ಕಾಪು ನ 5776 ರಲ್ಲಿ 4945 ಮತ್ತು ಕಾರ್ಕಳ 5587 ರಲ್ಲಿ 6021 ಮಂದಿ ಸೇರಿದಂತೆ ಒಟ್ಟು 31254 ಹಿರಿಯ ನಾಗರೀಕರಲ್ಲಿ 25614 ಮಂದಿಗೆ ತಮ್ಮ ಆಯ್ಕೆಯ ಬಗ್ಗೆ ತಿಳಿಸುವಂತೆ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ 2989 ವಿಕಲಚೇತನರಲ್ಲಿ 2632 ಮಂದಿಗೆ, ಕುಂದಾಪರದ 2524 ರಲ್ಲಿ 2042, ಉಡುಪಿಯ 1797 ರಲ್ಲಿ 2169, ಕಾಪು ನ 2229 ರಲ್ಲಿ 2229 ಮತ್ತು ಕಾರ್ಕಳದ 2141 ರಲ್ಲಿ 1719 ಮಂದಿ ಸೇರಿದಂತೆ ಒಟ್ಟು 11680 ವಿಕಲಚೇತನರಲ್ಲಿ 10791 ಮಂದಿಯನ್ನು ಗುರುತಿಸಿ ಅವರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವನ್ನು ಬಳಸಿಕೊಳ್ಳುವ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀರಣ ಇಲಾಖೆ ಅಧಿಕಾರಿಗಳ ಮೂಲಕ ಎಲ್ಲಾ ಅರ್ಹ ಹಿರಿಯ ನಾಗರೀಕರು ಮತ್ತು ವಿಕಲಚೇತನರ ಮನೆಗಳಿಗೆ ತೆರಳಿ ಅರ್ಜಿಯನ್ನು ವಿತರಿಸಲಾಗಿತ್ತು.

ಇದರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 927, ಕುಂದಾಪುರ 903, ಉಡುಪಿ 494,ಕಾಪು 856 ಮತ್ತು ಕಾರ್ಕಳದಲ್ಲಿ 796 ಮಂದಿ ಹಿರಿಯ ನಾಗರೀಕರು ಸೇರಿದಂತೆ ಒಟ್ಟು 3976 ಮಂದಿ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 140, ಕುಂದಾಪುರ 202, ಉಡುಪಿ 105, ಕಾಪು 152 ಮತ್ತು ಕಾರ್ಕಳದಲ್ಲಿ 31 ಸೇರಿದಂತೆ ಒಟ್ಟು 630 ವಿಕಲಚೇತನರು ಈ ಸೌಲಭ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮತದಾನ ದಿನದಂದು ಮತಗಟ್ಟೆಗೆ ಬಂದು ಮತ ಚಲಾಯಿಸಿ ತಮ್ಮ ಹಕ್ಕು ಚಲಾಯಿಸುವ ಸಂಭ್ರಮವನ್ನು ಆಚರಿಸಿಕೊಳ್ಳಲು ಜಿಲ್ಲೆಯ ಹಿರಿಯ ನಾಗರೀಕರು ಮತ್ತು ವಿಕಲಚೇತನರು ಉತ್ಸಾಹ ತೋರಿದ್ದು, ಅದರಲ್ಲಿ ತೀರಾ ಅವಶ್ಯಕತೆಯಿರುವ ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯವನ್ನು ಕಲ್ಪಿಸಲು ಜಿಲ್ಲಾಡಳಿತ ಈಗಾಗಲೇ ಯೋಜನೆ ರೂಪಿಸಿದೆ.

“ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಅಚರಿಸುವಂತೆ ಚುನಾವಣಾ ಆಯೋಗ ತಿಳಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಸುಗಮ ಮತ್ತು ಶಾಂತಿಯುತ ಚುನಾವಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಬಹುತೇಕ ಹಿರಿಯ ನಾಗರೀಕರು ಮತ್ತು ವಿಕಲಚೇತನರು ತಮಗೆ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮಾಡಲು ನೀಡಿರುವ ಸೌಲಭ್ಯದ ಬದಲು ಮತಗಟ್ಟೆಗೆ ಬಂದು ಮತ ಚಲಾಯಿಸಲು ಹೆಚ್ಚಿನ ಉತ್ಸಾಹ ತೋರಿರುವುದು, ಇತರೇ ಮತದಾರರಿಗೂ ಪ್ರೇರಣೆಯಾಗಲಿದೆ”-ಕೂರ್ಮಾರಾವ್ ಎಂ. ಜಿಲ್ಲಾಧಿಕಾರಿಗಳು, ಉಡುಪಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.