Wednesday, September 25, 2024
Wednesday, September 25, 2024

ಮಿಲನ ಐಸ್‌ಕ್ರೀಮ್ ಪಾರ್ಲರ್ ಶುಭಾರಂಭ

ಮಿಲನ ಐಸ್‌ಕ್ರೀಮ್ ಪಾರ್ಲರ್ ಶುಭಾರಂಭ

Date:

ಉಡುಪಿ: ಶಂಕರನಾರಾಯಣದ ಆಸುಪಾಸಿನ ಪರಿಸರದಲ್ಲೇ ಮೊದಲ ಬಾರಿಗೆ ಐಸ್ ಕ್ರೀಮ್ ತಯಾರಿಕಾ ಘಟಕ ಮತ್ತು ಮಾರಾಟ ಮಳಿಗೆ ತಲ್ಲಂಜೆ ನಾಯ್ಕ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ಶಂಕರನಾರಾಯಣ ಗ್ರಾಮ ಮಂಚಾಯತ್ ಸದಸ್ಯರಾದ ಪಾಂಡುರಂಗ ನಾಯ್ಕ ಇವರ ಮಾಲಕತ್ವದ ‘ಮಿಲನ ಐಸ್ ಕ್ರೀಮ್’ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.

ಜನ್ಮ ದಿನಾಚರಣೆ, ಕುಟುಂಬ ಮಿಲನ, ಬೀಳ್ಕೊಡುಗೆ ಸಮಾರಂಭ, ಸ್ನೇಹ ಸಮ್ಮಿಲನ ಮೊದಲಾದ ಕಿರು ಸಮಾರಂಭಕ್ಕಾಗಿ ಲಭ್ಯವಿರುವ ಪಾರ್ಟಿ ಹಾಲ್ ನ್ನು ರೈತ ಮೊರ್ಚಾ ಬೈಂದೂರು ಮಂಡಲದ ಅಧ್ಯಕ್ಷರಾದ ಸುಧಾಕರ ಕುಲಾಲ ಉದ್ಘಾಟಿಸಿದರು.

ಗ್ರಾಮದ ಪ್ರಥಮ ಪ್ರಜೆ ಲತಾ ಡಿ ಎಸ್. ಯಾಂತ್ರಿಕ ಘಟಕದ ಉದ್ಘಾಟನೆ ನೆರವೇರಿಸಿದರು. ಜೇಸಿಐ ಶಂಕರನಾರಾಯಣದ ಅಧ್ಯಕ್ಷರಾದ ಜೆಎಫ್‌ಡಿ ಪ್ರಶಾಂತ ಶೆಟ್ಟಿ ಶಾಡಿಗುಂಡಿ ಹಾಗೂ ಸಮೃದ್ಧಿ ಯುವಕ ಮಂಡಲದ
ಅಧ್ಯಕ್ಷರಾದ ಯೋಗೀಶ್ ದೇವಾಡಿಗ, ವೇದಮೂರ್ತಿ ಸೂರ್ಯನಾರಾಯಣ ಬಾಯಿರಿ, ಪಂಚಾಯತ್ ಉಪಾಧ್ಯಕ್ಷರಾದ ರವಿ ಕುಲಾಲ್, ತಲ್ಲೂರ್‌ಮಕ್ಕಿ ಗಣಪಯ್ಯ ಶೆಟ್ಟಿ, ಶಂಕರನಾರಾಯಣ ಸಿ ಎ ಬ್ಯಾಂಕ್‌ನ ನಿರ್ದೇಶಕ ಚಿದಾನಂದ ರಾವ್, ಬಾರಕೂರು ಐಟಿಐ ಕಾಲೇಜಿನ ನಿವೃತ್ತ ಪ್ರಾಂಶುಪಾಲ ದಿನಕರ ತೋಳಾರ್, ಪಂಚಾಯತ್ ಸದಸ್ಯರಾದ ಉಮೇಶ ಶೆಟ್ಟಿ, ಅನ್ನಪೂರ್ಣ ನಾಯ್ಕ, ಸಮೃದ್ಧಿ ಯುವಕ ಮಂಡಲದ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾನೂನು ಸಚಿವರನ್ನು ಭೇಟಿಯಾದ ಉಡುಪಿ ವಕೀಲರ ಸಂಘದ ನಿಯೋಗ

ಉಡುಪಿ, ಸೆ.24: ಉಡುಪಿ ವಕೀಲರ ಸಂಘದ ನಿಯೋಗವು ಕರ್ನಾಟಕ ರಾಜ್ಯದ ಕಾನೂನು...

ಕಾನೂನು ಹೋರಾಟದ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.24: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಎನ್‌ಎಸ್‌ಎಸ್ 218ರ ಹಾಗೂ ಪಿಸಿ...

ಕಾಪು: ನವದುರ್ಗಾ ಲೇಖನ ಯಜ್ಞದ ಸೇವಾ ಕಚೇರಿ ಉದ್ಘಾಟನೆ

ಕಾಪು, ಸೆ.24: ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯಲಿರುವ...
error: Content is protected !!