Sunday, September 22, 2024
Sunday, September 22, 2024

ಕಲ್ಯಾಣಪುರ- ವೈಭವದ ಭಜನಾ ಸಪ್ತಾಹಕ್ಕೆ ಚಾಲನೆ

ಕಲ್ಯಾಣಪುರ- ವೈಭವದ ಭಜನಾ ಸಪ್ತಾಹಕ್ಕೆ ಚಾಲನೆ

Date:

ಉಡುಪಿ: ಶ್ರೀ ಕ್ಷೇತ್ರ ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಭಜನಾ ಸಪ್ತಾಹ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಸಪ್ತಾಹ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ಅರ್ಚಕರಾದ ಕೆ. ಜಯದೇವ್ ಭಟ್ ಪ್ರಾರ್ಥನೆಯನ್ನು ಸಲ್ಲಿಸಿ ಮಂಗಳಾರತಿ ಬೆಳಗಿಸಿ ಚಾಲನೆಯನ್ನು ನೀಡಿದರು.

ಭಜನಾ ಸಪ್ತಾಹದ ಪ್ರಯುಕ್ತ ಶ್ರೀ ದೇವರಿಗೆ ಹಾಗೂ ದೇವಳಕ್ಕೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿದೆ.

ವಿವಿಧ ಭಜನಾ ತಂಡಗಳಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ಭಜನಾ ಸಪ್ತಾಹದ ಸಂದರ್ಭದಲ್ಲಿ ನಡೆಯಲಿದೆ.

ದೇವಳದ ಆಡಳಿತ ಮೊಕ್ತೇಸರರಾದ ಕೆ. ಅನಂತಪದ್ಮನಾಭ ಕಿಣಿ, ಸಪ್ತಾಹ ಸಮಿತಿಯ ಅಧ್ಯಕ್ಷರಾದ ಕೆ. ತುಳಸಿದಾಸ್ ಕಿಣಿ, ಕೆ. ಸೀತಾರಾಮ್ ಭಟ್, ಕೆ. ಶ್ರೀನಿವಾಸ ಮಲ್ಯ, ಅರವಿಂದ ಬಾಳಿಗಾ, ಕೆ. ಲಕ್ಷ್ಮೀನಾರಾಯಣ ನಾಯಕ್, ಟಿ. ಶಿವಾನಂದ ಕಿಣಿ, ಕೆ. ದತ್ತಾತ್ರೇಯ ಕಿಣಿ, ವೇದಮೂರ್ತಿ ಕೆ. ಕಾಶಿನಾಥ್ ಭಟ್, ಕೆ. ರಾಮಕೃಷ್ಣ ಕಿಣಿ, ಯು. ವಿದ್ಯಾಧರ ಕಾಮತ್, ಕೆ. ವಿನೋದ್ ಕಾಮತ್, ಕೆ. ಲಕ್ಷ್ಮೀಶ್ ಭಟ್, ರಾಮರಾಯ್ ಕಿಣಿ, ಟಿ. ಉಪೇಂದ್ರ ಕಿಣಿ, ಮಂಜುನಾಥ ಪೈ, ಡಾ. ವಿನಾಯಕ ಶೆಣೈ, ಕೆ. ಅನಂತ ಬಾಳಿಗಾ, ಸಪ್ತಾಹ ಮಹೋತ್ಸವದ ಪಾಳಿದಾರರು, ಮಹಿಳಾ ಸಮಾಜದ ಸದಸ್ಯೆಯರು ಹಾಗೂ ಸಮಾಜದ ಹಿರಿಯರು ಹಾಜರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಜ್ಯದ ದೇವಾಲಯಗಳಲ್ಲಿ ಮೊದಲಿನಿಂದಲೂ ಪರಿಶುದ್ಧ ಪ್ರಸಾದ

ಬೆಂಗಳೂರು, ಸೆ. 21: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಸಾದ,...

ದೇವಾಲಯಗಳಲ್ಲಿ ನಂದಿನಿ ತುಪ್ಪ ಬಳಸಲು ಸೂಚನೆ

ಬೆಂಗಳೂರು, ಸೆ. 21: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ...

ಗಿಡ ನೆಡುವ ಕಾರ್ಯಕ್ರಮ

ಉಡುಪಿ, ಸೆ.21: ಸ್ವಚತಾ ಹೀ ಅಂದೋಲನ ಪಾಕ್ಷಿಕ-2024 ಆಚರಣೆಯ ಅಂಗವಾಗಿ ನಮ್ಮ...

ವಿಶ್ವ ಶಾಂತಿಗಾಗಿ ಮಾನವೀಯತೆಯ ನಡಿಗೆ ಜಾಥಾ

ಉಡುಪಿ, ಸೆ.21: ಭಾರತೀಯ ರೆಡ್‌ಕ್ರಾಸ್ ರಾಜ್ಯ ಶಾಖೆ ಮತ್ತು ಉಡುಪಿ ಜಿಲ್ಲಾ...
error: Content is protected !!