Thursday, September 19, 2024
Thursday, September 19, 2024

ಸಂಸ್ಕೃತ ಎಂದೂ ನಶಿಸದ ಭಾಷೆ

ಸಂಸ್ಕೃತ ಎಂದೂ ನಶಿಸದ ಭಾಷೆ

Date:

ವಿದ್ಯಾಗಿರಿ, ಜ. 29: ಸಂಸ್ಕೃತ ಸಾಯುತ್ತಿದೆ ಎಂಬುದು ಸುಳ್ಳು. ಎಲ್ಲ ಭಾಷೆಗಳಲ್ಲಿ ಸಂಸ್ಕೃತ ಹಾಸುಹೊಕ್ಕಿದೆ. ಅದು ಎಂದಿಗೂ ನಶಿಸಿ ಹೋಗುವುದಿಲ್ಲ ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ್ ಡಾ. ಎಚ್.ಆರ್. ಹೇಳಿದರು. ಆಳ್ವಾಸ್ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ‘ಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕೃತದ ಪ್ರಯೋಗ ಸಾಧ್ಯತೆ’ ಎಂಬ ವಿಷಯ ಕುರಿತು ನಡೆದ ‘ಪ್ರಜ್ಞಾ ಜಿಜ್ಞಾಸ ವೇದಿಹಿಃ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾಹೀರಾತು

ಎಲ್ಲ ಭಾಷೆಯಲ್ಲೂ ಸಂಸ್ಕೃತ ಇದೆ. ಭಾರತದಲ್ಲಿ ಹಿಂದೆ ಸಂಸ್ಕೃತವನ್ನು ಎಲ್ಲ ಸಮುದಾಯದವರು ಉಪಯೋಗಿಸಿದ್ದು, ಕಾಲಾಂತರದಲ್ಲಿ ಒಂದು ಧರ್ಮದವರು ಅಥವಾ ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಯಿತು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಅದರ ಸ್ಥಾನ ಕಡಿಮೆಯಾದರೂ, ಬಳಕೆ ಹೆಚ್ಚುತ್ತಿದೆ ಎಂದರು. ಶಾಲಾ-ಕಾಲೇಜುಗಳಲ್ಲಿ ಸಂಸ್ಕೃತವನ್ನು ಸಂಸ್ಕೃತದಲ್ಲೇ ಬೋಧಿಸಬೇಕು. ಲಂಡನ್‌ನ ಜೇಮ್ಸ್ ಶಾಲೆಯಲ್ಲಿ ಎಲ್.ಕೆ.ಜಿ ಯಿಂದ ೭ನೇ ತರಗತಿಯವರೆಗೂ ಸಂಸ್ಕೃತ ಬೋಧನೆ ಇದೆ ಎಂದರು.

ಸಂಸ್ಕೃತ ಭಾಷೆಯ ಮೇಲೆ ಕೆಲವು ಆಕ್ಷೇಪಗಳಿವೆ. ಸಂಸ್ಕೃತ ಮಾತೃಭಾಷೆಯಾಗಿದೆ ಎಂಬುದನ್ನು ಯಾರೂ ನಂಬುವುದಿಲ್ಲ. ಆದರೆ, ಇಂತಹ ನಿದರ್ಶನಗಳಿವೆ. ಸಂಸ್ಕೃತ ಪಂಡಿತರೇ ಸಂಸ್ಕೃತದಲ್ಲಿ ಸಂಭಾಷಣೆ ಮಾಡದೇ ಇದ್ದರೆ, ಸಮಾಜವು ಸಂಸ್ಕೃತ ಮರೆತು ಬಿಡುತ್ತದೆ ಎಂದು ಹೇಳಿದರು.

ಮಾನವನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿಯೇ ಮುಳುಗಿದ್ದಾನೆ. ಮಾನವನಂತೆ ಭಾಷೆಗಳ ನಡುವೆಯೂ ಕೊಡುಕೊಳ್ಳುವಿಕೆ ಆಗುತ್ತದೆ. ಸಂಸ್ಕೃತ ಭಾಷೆಯ ಕೊಡುಗೆ ದೊಡ್ಡದು ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು.

ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ಡಾ. ವಿನಾಯಕ ಭಟ್ ಗಾಳಿಮನೆ ಸ್ವಾಗತಿಸಿ, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ರಮಾನಂದ ಭಟ್ ವಂದಿಸಿದರು, ಸಿಂಧೂ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...

ತಾತ್ಕಾಲಿಕ ಸುಡುಮದ್ದು ಮಾರಾಟ ಪರವಾನಿಗೆ ಪಡೆಯಲು ಅರ್ಜಿ ಆಹ್ವಾನ

ಉಡುಪಿ, ಸೆ.19: ದೀಪಾವಳಿ ಹಬ್ಬದ ಸಂದರ್ಭದಲ್ಲಿ (ಅಕ್ಟೋಬರ್ 30 ರಿಂದ ನವೆಂಬರ್...

ಪವರ್ ಲಿಫ್ಟಿಂಗ್: ವೈಷ್ಣವಿ ಖಾರ್ವಿಗೆ ಬೆಳ್ಳಿ ಪದಕ

ಉಡುಪಿ, ಸೆ.19: ರಾ ಫಿಟ್ನೆಸ್ ಸಾಲಿಗ್ರಾಮ ಇವರ ವತಿಯಿಂದ ಸಾಲಿಗ್ರಾಮದ ಮೊಗವೀರ...
error: Content is protected !!