Tuesday, September 24, 2024
Tuesday, September 24, 2024

ಪ್ರಮೋದ್ ಮಧ್ವರಾಜ್ ಗೋಶಾಲೆಗೆ ಲಕ್ಷ್ಮೀಯ ಆಗಮನ

ಪ್ರಮೋದ್ ಮಧ್ವರಾಜ್ ಗೋಶಾಲೆಗೆ ಲಕ್ಷ್ಮೀಯ ಆಗಮನ

Date:

ಮನೆಯಲ್ಲಿ ಒಂದು ಗೋವನ್ನು ಸಾಕುವುದೇ ಸವಾಲಾಗಿದೆ ಎಂದು ಹಲವಾರು ಮಂದಿ ಮಾತನಾಡಿಕೊಳ್ಳುವ ಕಾಲಘಟ್ಟದಲ್ಲಿ ಸಕ್ರಿಯ ರಾಜಕೀಯದಲ್ಲಿರುವವರ ಮನೆಯಲ್ಲಿ ’ಗೋಶಾಲೆ’ ಇದೆ ಎಂದರೆ ಅದು ಸಾಮಾನ್ಯ ವಿಚಾರವಲ್ಲ. ಪ್ರತಿದಿನ ಬಿಡುವಿಲ್ಲದ ದಿನಚರಿ ಇರುವ ರಾಜಕಾರಣಿಯೊಬ್ಬರು ಗೋವುಗಳ ಸೇವೆಯನ್ನೂ ಮಾಡುವುದು ಎಂದರೆ ಅದು ಇತರರಿಗೆ ಮಾದರಿ.

ಇದು ನಮ್ಮದೇ ಜಿಲ್ಲೆಯ ಒಬ್ಬ ಪ್ರಭಾವಿ ರಾಜಕಾರಣಿಯ ಮನೆಯಲ್ಲಿರುವ ಗೋಶಾಲೆಯ ವರ್ಣನೆ. ಹೌದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಅಮ್ಮುಂಜೆಯಲ್ಲಿರುವ ಮನೆಯಲ್ಲಿ ಗೋಶಾಲೆಯೂ ಇದೆ ಎಂದು ಬಹುತೇಕ ಮಂದಿಗೆ ತಿಳಿದಿದೆ ಮಾತ್ರವಲ್ಲದೇ ಆಕರ್ಷಣೆಯ ಕೇಂದ್ರವೂ ಆಗಿದೆ. ಗೋವುಗಳ ಬಗ್ಗೆ ಅತೀವ ಪ್ರೀತಿಯಿಂದ ತಮ್ಮ ಬಳಿಯೇ ಗೋವುಗಳ ವಾಸಸ್ಥಾನವಿರಬೇಕು ಎಂದು ಪ್ರಮೋದ್ ಮಧ್ವರಾಜ್ ಸುಸಜ್ಜಿತವಾದ ಗೋಶಾಲೆಯನ್ನು ನಿರ್ಮಿಸಿದ್ದು ಪ್ರತಿದಿನವೂ ಗೋಸೇವೆಯನ್ನು ಮಾಡುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಗೋಶಾಲೆಯಲ್ಲಿ ಅಕ್ಷರಶಃ ಹಬ್ಬದ ವಾತಾವರಣ. ಅಂದು ಗೋವುಗಳಿಗೆ ವಿಶೇಷ ಅಲಂಕಾರದ ಜೊತೆಗೆ ಬಗೆಬಗೆಯ ಖಾದ್ಯ. ಅಷ್ಟು ಮಾತ್ರವಲ್ಲದೇ ಸ್ವತಃ ಪ್ರಮೋದ್ ಮಧ್ವರಾಜ್ ಅವರೇ ಗೋವುಗಳಿಗೆ ಆರತಿಯನ್ನು ಬೆಳಗಿ ಪೂಜೆ ಸಲ್ಲಿಸುತ್ತಾರೆ.

ಗೋಶಾಲೆಗೆ ಶುಕ್ರವಾರ ಮುಸ್ಸಂಜೆಯ ಸಮಯದಲ್ಲಿ ಲಕ್ಷ್ಮೀಯ ಆಗಮನವಾಗುವ ಮೂಲಕ ಗೋಶಾಲೆಯ ಮೆರುಗು ಹೆಚ್ಚಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾನೂನು ಸಚಿವರನ್ನು ಭೇಟಿಯಾದ ಉಡುಪಿ ವಕೀಲರ ಸಂಘದ ನಿಯೋಗ

ಉಡುಪಿ, ಸೆ.24: ಉಡುಪಿ ವಕೀಲರ ಸಂಘದ ನಿಯೋಗವು ಕರ್ನಾಟಕ ರಾಜ್ಯದ ಕಾನೂನು...

ಕಾನೂನು ಹೋರಾಟದ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.24: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಎನ್‌ಎಸ್‌ಎಸ್ 218ರ ಹಾಗೂ ಪಿಸಿ...

ಕಾಪು: ನವದುರ್ಗಾ ಲೇಖನ ಯಜ್ಞದ ಸೇವಾ ಕಚೇರಿ ಉದ್ಘಾಟನೆ

ಕಾಪು, ಸೆ.24: ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯಲಿರುವ...
error: Content is protected !!