Sunday, February 23, 2025
Sunday, February 23, 2025

ಉಡುಪಿ: ಜನಾಗ್ರಹ ಆಂದೋಲನ

ಉಡುಪಿ: ಜನಾಗ್ರಹ ಆಂದೋಲನ

Date:

ಮಂಗಳವಾರ ಉಡುಪಿಯ ಶಾಸಕರ ಕಛೇರಿಯ ಬಳಿ ಜನಾಗ್ರಹ ಆಂದೋಲನ ನಡೆಯಿತು. ಸರಕಾರದ ಜನವಿರೋಧಿ ನೀತಿ ಮತ್ತು ಕೊರೋನಾ ಸಂಕಷ್ಟ ಕಾಲದಲ್ಲಿ ಪೀಡಿತರಿಗೆ ಮತ್ತು ಆರ್ಥಿಕ ಸಂಕಷ್ಟಕ್ಕೆ ಒಳಗಾದ ಜನಸಾಮಾನ್ಯರನ್ನು ಸರಕಾರ ಮರೆತಿದೆ. ಸರಕಾರ ತನ್ನ ಒಳಜಗಳದಲ್ಲಿ ಮಗ್ನವಾಗಿದೆ. ನಮಸ್ಥೆ ಟ್ರಂಪ್ ಕಾರ್ಯಕ್ರಮದ ಮೂಲಕ ಕೊರೋನಾವನ್ನು ಭಾರತಕ್ಕೆ ಆಹ್ವಾನಿಸಿ ಕುಂಭಮೇಳ, ರಾಜಕೀಯ ಸಮಾವೇಷಗಳ ಮೂಲಕ ಭಾರತದಾದ್ಯಂತ ಸೋಂಕನ್ನು ಮೋದಿ ಸರಕಾರ ಹರಡಿಸಿದೆ ಎಂದು ಜನಾಗ್ರಹ ಆಂದೋಲನದಲ್ಲಿ ಆಕ್ರೋಶವನ್ನು ಹೊರಹಾಕಲಾಯಿತು.

ಲಾಕ್ ಡೌನ್ ನೆಪದಲ್ಲಿ ಜನರ ಹಸಿವಿನ ಬಗ್ಗೆ ಗಮನಕೊಡದೇ ಒಳಜಗಳದಲ್ಲಿ ಕಾಲಹರಣ ಮಾಡುತ್ತಿದೆ. ಯಾತಕ್ಕೂ ಸಾಲದ ಪರಿಹಾರ ಪ್ಯಾಕೇಜ್ ಮೂಲಕ ಜನರನ್ನು ವಂಚಿಸಿದೆ. ಅಂಗಡಿ ಮುಂಗಟ್ಟುಗಳ ಬೀದಿಬದಿ ವ್ಯಾಪಾರಿಗಳ ಕಣ್ಣೀರಿಗೆ ಅವರ ಕಷ್ಟಕ್ಕೆ ಸ್ವಲ್ಪವೂ ಸ್ಪಂದಿಸದ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕಾಂಗ್ರೆಸ್, ಪಿ.ಎಫ್.ಐ, ವೆಲ್ಫೇರ್ ಪಾರ್ಟಿ, ಎಸ್.ಡಿ.ಪಿ.ಐ, ಜೆಡಿಎಸ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ, ಜೆ.ಐ.ಎಚ್, ಸಹಬಾಳ್ವೆ, ಡಿ.ಎಸ್.ಎಸ್ ಪದಾಧಿಕಾರಿಗಳು ಕಾರ್ಯಕರ್ತರು ಜನಾಗ್ರಹ ಆಂದೋಲನದಲ್ಲಿ ಭಾಗವಹಿಸಿದರು.

ಅಮೃತ್ ಶೆಣೈ, ವೆರೋನಿಕಾ ಕರ್ನೇಲಿಯೋ, ಸುಂದರ್ ಮಾಸ್ತರ್, ಯೋಗೀಶ್ ಶೆಟ್ಟಿ, ಅಬ್ದುಲ್ ಅಝೀಝ್ ಉದ್ಯಾವರ ಮತ್ತಿತರರು ತಮ್ಮ ಮಾತಿನಲ್ಲಿ ಸರಕಾರದ ಮತ್ತು ಉಡುಪಿಯ ಶಾಸಕರ ಧೋರಣೆಯನ್ನು ಖಂಡಿಸಿ ಹೆಚ್ಚಿನ ಪರಿಹಾರ ಘೋಷಿಸುವಂತೆ ಸರಕಾರವನ್ನು ಆಗ್ರಹಿಸಿದರು.

ನಗರಸಭಾ ಪ್ರತಿಪಕ್ಷದ ನಾಯಕ ರಮೇಶ್ ಕಾಂಚನ್, ಜನಾರ್ದನ ಭಂಡಾರ್ಕಾರ್, ಪ್ರಖ್ಯಾತ್ ಶೆಟ್ಟಿ, ಹುಸೇನ್ ಕೋಡಿಬೆಂಗ್ರೆ, ನಿಸಾರ್ ಉಡುಪಿ, ನಮುನೀರ್ ಕಲ್ಮಾಡಿ, ಇಲ್ಯಾಸ್ ಸಾಸ್ತಾನ, ಕೀರ್ತಿ ಶೆಟ್ಟಿ, ಶಾಹಿದ್ ಅಲಿ, ಜ್ಯೋತಿ ಶೆಟ್ಟಿ, ಜ್ಯೋತಿ ಹೆಬ್ಬಾರ್, ಅರ್ಬಝ್, ಸಾಲಿಡಾರಿಟಿಯ ಝಕ್ರಿಯಾ, ಯಾಸೀನ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!